ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ರಾಜೇಶ್ ಶೆಟ್ಟಿ (24) ತಂದೆ: ರವಿರಾಜ ಶೆಟ್ಟಿ ವಾಸ: ಸರಪಳ್ಳಿ  ಮನೆ, ಪೆರ್ಡೂರು ಅಂಚೆ ಮತ್ತು ಗ್ರಾಮ ಇವರು ದಿನಾಂಕ: 11/10/2022 ಉಡುಪಿಗೆ ಕೆಲಸಕ್ಕೆ ಹೋಗಿದ್ದು ವಾಪಾಸು ಮನೆಗೆ ಬರುತ್ತಿರುವಾಗ ರಾ.ಹೆ 169 (ಎ) ರಲ್ಲಿ ಬರುತ್ತಾ ಅಂಜಾರು ಗ್ರಾಮದ ಮಂಜುಶ್ರೀ ಕಾಂಪ್ಲೆಕ್ಸ್  ಎದುರು ತಲುಪುವಾಗ ಪಿರ್ಯಾದುದಾರರ ಮುಂದೆ ಅಂದರೆ ಹಿರಿಯಡ್ಕ ಕಡೆಗೆ  ಒರ್ವ ಸ್ಕೂಟಿ ಸವಾರ ಸ್ಕೂಟಿಯನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದು ರಾತ್ರಿ ಸಮಯ ಸುಮಾರು 11:50 ಗಂಟೆಗೆ ಎದುರಿನಿಂದ ಅದಂರೆ ಹಿರಿಯಡ್ಕ ಕಡೆಯಿಂದ ಒರ್ವ ಲಾರಿ ಚಾಲಕನು  KA-52-4737 ನೇ ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದಾಗ ಲಾರಿಯ ಹಿಂಭಾಗ ಸ್ಕೂಟಿಗೆ ತಾಗಿ ಸ್ಕೂಟಿ ಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದುದಾರರು ಕೂಡಲೇ ಸ್ಕೂಟಿ ಬಿದ್ದಲ್ಲಿಗೆ ಹೋಗಿ ನೋಡಲಾಗಿ ಸ್ಕೂಟಿ ಸವಾರನಿಗೆ ಹಣೆಯ ಬಳಿ ತೀವ್ರ ರಕ್ತಗಾಯವಾಗಿ ರಕ್ತ ಸೋರುತ್ತಿದ್ದು ಲಾರಿ ಚಾಲಕ ಹಾಗೂ ಪಿರ್ಯಾದುದಾರರು ಸೇರಿ ಆತನನ್ನು ಉಪಚರಿಸಿ ದಾರಿಯಲ್ಲಿ ಹೋಗುತ್ತಿದ್ದ ಒಂದು ಅಂಬ್ಯುಲೆನ್ಸ್‌‌ ನ್ನು ನಿಲ್ಲಿಸಿ  ಕೆಎಂಸಿ ಮಣಿಪಾಲ ಅಸ್ಪತ್ರಗೆ  ಕಳುಹಿಸಿರುತ್ತಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  64/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಸಂತೋಷ್ ಶೆಟ್ಟಿ(30) ವರ್ಷ,ತಂದೆ: ಅಣ್ಣಿ ಶೆಟ್ಟಿ ವಾಸ:ವನಭೋಜನ ಮನೆ, ತೋಡಾರ ಅಂಚೆ, ಮೂಡಬಿದ್ರೆ ಹಾಲಿ ವಾಸ: ಸೀಮಾ ಕಾಂಪಸ್ ಗುಂಡಿಬೈಲು, ಇವರ ಬಾವಾ ಶಿವರಾಜ್ ರವರು ದಿನಾಂಕ:12-10-2022 ರಂದು ತನ್ನ  ಮೋಟಾರು ಸೈಕಲ್ ನಂಬ್ರ KA20W7322 ನೇದರಲ್ಲಿ ಸಂತೆಕಟ್ಟೆ ಜಂಕ್ಷನ್ ಬಳಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದು, ನಂತರ ನಯಂಪಳ್ಳಿ ಕಡೆಗೆ ತನ್ನ ಮೋಟಾರು ಸೈಕಲ್ ನ್ನು ತಿರುಗಿಸುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 08-00 ಗಂಟೆಗೆ ಸಂತೆಕಟ್ಟೆ ಕಡೆಯಿಂದ ಆಶೀರ್ವಾದ್ ಕಡೆಗೆ KA20W3360ನೇ ಮೋಟಾರ್ ಸೈಕಲ್ ಸವಾರ ಅನಿಲ್ ಎಂಬಾತನು ತನ್ನ ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಯಾವುದೇ ಅಂತರವನ್ನು ಕಾಯ್ದುಕೊಳ್ಳದೇ ಪಿರ್ಯದಿದಾರರ ಬಾವಾ ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶಿವಾರಾಜ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಒಳಜಖಂ, ಬಲಕೈಯ ಅಂಗೈಗೆ ತರಚಿದ ರಕ್ತಗಾಯವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಅಲ್ಲದೇ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನ ಮೂಗಿಗೆ ತರಚಿದ ರಕ್ತಗಾಯ ವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆಪಡೆದುಕೊಂಡಿರುವುದಾಗಿದೆ. ಈ ಬಗ್ಗೆ  ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ : 82/2022 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಜನಾರ್ಧನ ಎನ್.‌ (54) ತಂದೆ: ಶಾಂತಪ್ಪ, ಇವರು ವಸತಿ ಕೇಂದ್ರ, ಸಾಲ್ಮರ, ಉಪ್ಪೂರು  ಎಂಬಲ್ಲಿ ಸ್ಪಂದನ ಬುದ್ದಿಮಾಂದ್ಯ ವಸತಿ ಕೇಂದ್ರವನ್ನು ನಡೆಸಿಕೊಂಡಿರುತ್ತಾರೆ.  ಸದ್ರಿ   ಸಂಸ್ಥೆಯಲ್ಲಿ ಕಳೆದ 10 ತಿಂಗಳಿನಿಂದ ಫಲಾನುಭವಿ ಆಗಿದ್ದ  ಬುದ್ದಿಮಾಂದ್ಯ ಶಿವ ( ಪ್ರಾಯ: 21 ವರ್ಷ) ಎಂಬವರು ದಿನಾಂಕ 08.10.2022 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಸದ್ರಿ ಸಂಸ್ಥೆಯಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 165/2022 ಕಲಂ : ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಹೆಬ್ರಿ:  ಪಿರ್ಯಾದಿ ಸತೀಶ್ಚಂದ್ರ ಹೆಗ್ಡೆ ಪ್ರಾಯ 48 ವರ್ಷ ತಂದೆ: ಬೋಜ ಹೆಗ್ಡೆ ವಾಸ: ಉಜೂರು ಕೆಳಮನೆ ಮುದ್ರಾಡಿ ಗ್ರಾಮ ಇವರು ದಿನಾಂಕ:10/10/2022 ರಂದು ಮುದ್ರಾಡಿಯಿಂದ ಶಿವಪುರ ಕಡೆಗೆ ಹೋಗುತ್ತಿರುವಾಗ ಆರೋಪಿತ ಸಂತೋಷ ಯಾನೆ ತಲವಾರು ಸಂತು ಎಂಬುವವರು ಆಕ್ಟೀವ್ ಸ್ಕೂಟರ್ ನಲ್ಲಿ ಫಿರ್ಯಾದುದಾರರನ್ನು ಹಿಂಬಾಲಿಸಿಕೊಂಡು ಬಂದು ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಮುದ್ರಾಡಿ ಗ್ರಾಮದ ಉಪ್ಪಳ ಸೇತುವೆಯ ಹತ್ತಿರ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಒಂದು ತಿಂಗಳ ಒಳಗೆ ಕೊಲೆ ಮಾಡುತ್ತೇನೆ ಇವತ್ತು ಗಾಡಿಯಿಂದ ಆಯುಧ ತೆಗೆಯುವುದಿಲ್ಲ ಇವತ್ತು ಜೀವದಾನ ಕೊಟ್ಟಿದ್ದೇನೆ ಆದರೆ ಒಂದು ತಿಂಗಳ ಒಳಗೆ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 52/2022 ಕಲಂ:341,504,506 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-10-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080