Feedback / Suggestions

ಕಳವು ಪ್ರಕರಣ 

  • .ಕೋಟ: ಪಿರ್ಯಾದಿದಾರರಾದ ಸಂತೋಷ ಕುಮಾರ ಶೆಟ್ಟಿ ( 61),ತಂದೆ: ದಿ .ವೆಂಕಪ್ಪ ಶೆಟ್ಟಿ ,ವಾಸ: ಬನ್ನಾಡಿ ಶಾಲೆಯ ಬಳಿ ಬನ್ನಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಬನ್ನಾಡಿಯಲ್ಲಿರುವ ಹಳೆಯ ಮನೆಯು ರಿಪೇರಿ ಮಾಡಲಿರುವುದರಿಂದ ಚಿತ್ರಪಾಡಿಯ ಕಾರ್ತಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಹಳೆಯ ಮನೆಯಲ್ಲಿ ಸಾಕಿದ ನಾಯಿ ಹಾಗೂ ಕೋಳಿಗೆ ದಿನದಲ್ಲಿ ಮೂರು ಬಾರಿ ಆಹಾರ ನೀಡಲು ಹೋಗುತ್ತಿದ್ದು, ಎಂದಿನಂತೆ ದಿನಾಂಕ 10/06/2021 ರಂದು ಬೆಳಿಗ್ಗೆ 06.30 ಗಂಟೆಗೆ ನಾಯಿಗೆ ಆಹಾರ ನೀಡಲು ಹೋದಾಗ ಮನೆಯ ಹೊರಗೆ ತಾಗಿಕೊಂಡು ಹಟ್ಟಿಗೆ ಹೋಗುವ ಬಚ್ಚಲು ಮನೆಯಲ್ಲಿ ಹೋಗಿ ನೋಡಿದಾಗ ಯಾರೋ ಕಳ್ಳರು ಬಚ್ಚಲು ಮನೆಯಲ್ಲಿರುವ ತಾಮ್ರದ ಹಂಡೆಯನ್ನು ಒಲೆಯಿಂದ ಎತ್ತಿಕೊಂಡು ಹೋಗಿರುತ್ತಾರೆ. ಬಚ್ಚಲು ಮನೆಗೆ ಬೀಗ ಹಾಕಿರುವುದಿಲ್ಲ. ಅಲ್ಲದೇ ಹೊಸ ಮನೆಯನ್ನು ಕಟ್ಟಲು ತಂದಿಟ್ಟ ಮರದ ಹಲಗೆ ತುಂಡುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ .ಕಳವು ಮಾಡಿದ ತಾಮ್ರದ ಹಂಡೆಯ ಮೌಲ್ಯ 3000/- ಆಗಿದ್ದು ಹಾಗೂ ಮರದ ನಿಖರ ಮೌಲ್ಯ ತಿಳಿದಿರುವುದಿಲ್ಲ. ದಿನಾಂಕ 09/06/2021 ರಂದು ಸಂಜೆ 07.00 ಗಂಟೆಯಿಂದ ದಿನಾಂಕ 10/06/2021 ರಂದು ಬೆಳಿಗ್ಗೆ 06.00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಸೊತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾಪು: ಪಿರ್ಯಾದಿದಾರರಾದ ನಿರ್ಮಲ (29) ,ಗಂಡ:ಮಾಲತೇಶ ,ವಿಳಾಸ;ಕಾಸಂಬಿ ಹಂಪಣ್ಣ ಗ್ರಾಮ ಗಾಂಧಿನಗರ ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ ಇವರು ತನ್ನ ಗಂಡ ಮಾಲತೇಶ (37) ಹಾಗೂ ಎರಡು ಮಕ್ಕಳೊಂದಿಗೆ ಮೂಳೂರಿನಲ್ಲಿ ವಾಸಮಾಡಿಕೊಂಡಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಪಿರ್ಯಾದಿದಾರರ ಗಂಡ ಮಾಲತೇಶ ರವರಿಗೆ ಚಕ್ಕರ್ ಬರುತ್ತಿದ್ದು ಈ ಬಗ್ಗೆ ಮಂಗಳೂರು ಕೆಎಂ ಸಿ ಆಸ್ಪತ್ರೆಯಲ್ಲಿ ಪರೀಕ್ಷೀಸಿದಾಗ ಅವರಿಗೆ ಹೃದಯದ ಸಮಸ್ಯೆಯಿದ್ದು ಇದಕ್ಕೆ ಈಗ ಚಿಕಿತ್ಸೆಯ ಅಗತ್ಯವಿರುವುದಿಲ್ಲವಾಗಿ ವೈದ್ಯರು ತಿಳಿಸಿರುತ್ತಾರೆ. ಅದಾದ ನಂತರ ಮಾಲತೇಶ ರವರು ಪ್ರತಿ ದಿನ ಕೆಲಸಕ್ಕೆ ಹೋಗುತ್ತಿದ್ದರು. ಈ ದಿನಾಂಕ 11/06/2021 ರಂದು ಮಾಲತೇಶರವರು ಮೂಳೂರು ಎಸ್ ಎಂ ನರ್ಸರಿ ಹಿಂಬದಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 1:30 ಗಂಟೆಗೆ ರಾಜೇಶ್ ಎಂಬಿವವರು ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಮೂಳೂರು ಎಸ್ ಎಂ ನರ್ಸರಿಗೆ ಬಂದು ಗಂಡ ಮಾಲತೇಶರವರು ನರ್ಸರಿ ಹಿಂಬದಿ ಮಜಲು ಗದ್ದೆಯಲ್ಲಿ ಕೆಲಸ ಮುಗಿಸಿ ಊಟಕ್ಕೆ ಹೋಗುವಾಗ ಆಕಸ್ಮಿಕವಾಗಿ ಬಿದ್ದು ಅಸ್ವಸ್ಥರಾಗಿರುತ್ತಾರೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಸ್ಥಳೀಯರ ಸಹಾಯದಿಂದ ಅವರನ್ನು ಒಂದು ವಾಹನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಮಧ್ಯಾಹ್ನ 2:15 ಗಂಟೆಗೆ ಪರೀಕ್ಷಿಸಿ ಮಾಲತೇಶರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಗಂಡ ಮಾಲತೇಶ ರವರು ಹೃದಯ ಸಂಬಂಧಿ ಕಾಯಿಲೆ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ: 08/06/2021 ರಿಂದ ದಿನಾಂಕ: 14/06/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 11/06/2021 ರಂದು ಪಿರ್ಯಾಧಿ ಸಂಗೀತಾ ಪಿಎಸ್ಐ ಬೈಂದೂರು ಪೊಲೀಸ್ ಠಾಣೆ, ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ ಸರಹದ್ದಿನ ಶಿರೂರು ಗ್ರಾಮದ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 17:00 ಗಂಟೆಗೆ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ 1) ಅಲ್ಜಿ ಸಲ್ಮಾನ್ ಪ್ರಾಯ 24 ವರ್ಷ ತಂದೆ: ಅಲ್ಜಿ ಗಪೂರ್ ವಾಸ: ಕರಿಕಟ್ಟೆ ಶಿರೂರು ಗ್ರಾಮ ಬೈಂದೂರು ತಾಲೂಕು 2) ಮುಗ್ದುಂ ಮಹಮ್ಮದ್ ಹನೀಫ್ 23 ವರ್ಷ ತಂದೆ: ಮಹಮ್ಮದ್ ಹನೀಪ್ ವಾಸ: ರೋಶನ್ ಮೊಹಲ್ಲ ಕಾಸರಕೋಡು ಹೊನ್ನಾವರ ಉತ್ತರ ಕನ್ನಡ ಜಿಲ್ಲೆ ರವರುಗಳು ತಮ್ಮ ಬಾಬ್ತು Chevrolet Tavera ಕಾರು ನಂಬ್ರ KA20D6289 Maruthi Suzuki Breeza ಕಾರು ನಂಬ್ರ KA03AF2646 ರಲ್ಲಿ ಕೆಲವು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು 3) ಅಫ್ರನ್ 20 ವರ್ಷ ತಂದೆ: ಇಸ್ಮಾಯಿಲ್ ವಾಸ: ಕರಿಕಟ್ಟೆ ಆರ್ಮೆ ಶಿರೂರು ಗ್ರಾಮ ಬೈಂದೂರು ತಾಲೂಕು ಎಂಬಾತನು TVS King ಆಟೋ ರಿಕ್ಷಾ ನಂಬ್ರ KA20AA9805 ನೇದರಲ್ಲಿ ಅನಗತ್ಯವಾಗಿ ಸಕಾರಣವಿಲ್ಲದೇ ಚಲಾಯಿಸಿಕೊಂಡು ಬಂದಿದ್ದು, ಸದ್ರಿ ಮೇಲ್ಕಂಡ ವಾಹನದ ಚಾಲಕರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿದ್ದು ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 101/2021 ಕಲಂ:.269 ಐ.ಪಿ.ಸಿ .ಯಂತೆ ಮೊಕದ್ದಮೆ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 11-06-2021 ರಂದು 16:00 ಗಂಟೆಯ ಸಮಯಕ್ಕೆ ಪಿರ್ಯಾದಿ ಸದಾಶಿವ ಆರ್. ಗವರೋಜಿ ಪಿಎಸ್‌ಐ ಕುಂದಾಪುರ ಪೊಲೀಸ್‌ ಠಾಣೆ.ಇವರಿಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಅರಾಲುಗುಡ್ಡೆ ವಿಜಯ ಪೂಜಾರಿಯವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಅದರಂತೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ 17:00 ಗಂಟೆಗೆ ಕೋಟೇಶ್ವರ ಗ್ರಾಮದ ಅರಾಲುಗುಡ್ಡೆ ವಿಜಯ ಪೂಜಾರಿಯವರ ಮನೆಯ ಬಳಿ ತಲುಪಿ ಇಲಾಖಾ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ 14 ಜನರು ಕುಳಿತುಕೊಂಡಿದ್ದು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 17:10 ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 10 ಜನ 1). ವಿಜಯ ಪೂಜಾರಿ, 47 ವರ್ಷ, ತಂದೆ: ದಿ:ಬಸವ ಪೂಜಾರಿ, ವಾಸ: ನಾಗಶ್ರೀ ನಿಲಯ, ಅರಾಲುಗುಡ್ಡೆ ಬೀಜಾಡಿ ಗ್ರಾಮ 2). ಮಂಜುನಾಥ, ಪ್ರಾಯ: 45 ವರ್ಷ, ತಂದೆ: ನರಸು ಪೂಜಾರಿ, ವಾಸ: ಮನೋಜ ನಿಲಯ, ಅರಾಲುಗುಡ್ಡೆ ಬೀಜಾಡಿ ಗ್ರಾಮ3). ದೇವರಾಜ್, ಪ್ರಾಯ: 41 ವರ್ಷ, ತಂದೆ:ದಿವಂಗತ ಶೀನ ಪೂಜಾರಿ, ವಾಸ: ಅರಾಲುಗುಡ್ಡೆ ಕಳಸಮನೆ, ಅಳೆಅಳಿವೆ ಕೋಟೇಶ್ವರ ಗ್ರಾಮ, 4). ಶಂಕರ ಮೊಗವೀರ ಪ್ರಾಯ: 59 ವರ್ಷ, ತಂದೆ:ದಿವಂಗತ. ಕೊರಗ ಮೊಗವೀರ, ವಾಸ: ರಾಧಾಶಂಕರ, ಶಾಂತಿನಗರ ರೋಡ್ ಹೊದ್ರೋಳಿ 5). ಪ್ರಸಾದ್ ಪೂಜಾರಿ, ಪ್ರಾಯ: 28 ವರ್ಷ, ತಂದೆ: ಚಂದ್ರ ಪೂಜಾರಿ ವಾಸ: ಆನಂದ ಸದನ, ಹಳೆಅಳಿವೆ, ಕೋಟೇಶ್ವರ 6). ಮುನಾಫ್ ಪ್ರಾಯ 32 ವರ್ಷ ತಂದೆ ಹಮೀದ್ ಸಾಹೇಬ್ ವಾಸ: ಮರವಂತೆ ಶಾಲೆ ಹತ್ತಿರ, ಮರವಂತೆ ಗ್ರಾಮ, 7) ಹಬೀಬ್ ಪ್ರಾಯ 48 ವರ್ಷ ತಂದೆ ಮೊಹಿದ್ದೀನ್ ಸಾಹೇಬ್ ವಾಸ: ಟಿಟಿ ರಸ್ತೆ, ವಡೇರಹೋಬಳಿ 8) ಗಣೇಶ್ ಪಿ ಪ್ರಾಯ 49 ವರ್ಷ ತಂದೆ ನಾರಾಯಣ ಪೂಜಾರಿ ವಾಸ: ಲಕ್ಷ್ಮೀ ನಿವಾಸ, ಹಳೆಅಳಿವೆ, ಕೋಟೇಶ್ವರ 9) ಚಂದ್ರ ಪೂಜಾರಿ ಪ್ರಾಯ 52 ವರ್ಷ ತಂದೆ ದಿವಂಗತ ಕುಷ್ಠು ಪೂಜಾರಿ ವಾಸ: ದುಗ್ಗು ಮನೆ, ಹಳೆಅಳಿವೆ, ಕೋಟೇಶ್ವರ 10) ತಿಮ್ಮಪ್ಪ ಮೊಗವೀರ ಪ್ರಾಯ 51 ವರ್ಷ ತಂದೆ ದಿವಂಗತ ಸೋಮ ಪೂಜಾರಿ ವಾಸ: ದೊಟ್ಟಿ ಮನೆ, ಶ್ರೀದೇವಿ ನಿಲಯ, ಕೋಡಿ, ರನ್ನುಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡಿದ್ದು, 4 ಜನ 1). ದಿನೇಶ್ ಪ್ರಾಯ 35 ವರ್ಷ ತಂದೆ ಗೋವಿಂದ ಪೂಜಾರಿ ವಾಸ: ಅರಾಲುಗುಡ್ಡೆ, ಕೋಟೇಶ್ವರ 2). ಅನಿಲ್ ಪೂಜಾರಿ, ಪ್ರಾಯ:28 ವರ್ಷ ತಂದೆ: ಶೇಖರ ಪೂಜಾರಿ, ವಾಸ: ಅರಾಲುಗುಡ್ಡೆ, ಹಳೆಅಳಿವೆ, ಕೋಟೇಶ್ವರ . 3). ಸಂತೋಷ ದೇವಾಡಿಗ ಪ್ರಾಯ 35 ವರ್ಷ ತಂದೆ ನಾರಾಯಣ ದೇವಾಡಿಗ ವಾಸ: ಎಲ್‌ಐಸಿ ರೋಡ್ ಎದುರುಗಡೆ, ವಡೇರ ಹೋಬಳಿ 4) ರಾಜು ಪೂಜಾರಿ ಪ್ರಾಯ 48 ವರ್ಷ ತಂದೆ ದಿವಂಗತ ನಾರಾಯಣ ಪೂಜಾರಿ ವಾಸ: ದೋಣಿ ಮಾಡು ಮನೆ, ಕುಂಬ್ರಿ ಕೋಟೇಶ್ವರರು ಇವರುಗಳು ಓಡಿಹೋಗಿರುತ್ತಾರೆ. ಅವರ ಹೆಸರು ವಿಳಾಸ ವಿಚಾರಿಸಿ ಅವರುಗಳು ತಾವು ಇಸ್ಪೀಟ್ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದ ರಿಂದ ಅವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂ. 14000/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಆರೋಪಿತರು ಬಳಸಿದ4 ದ್ವಿಚಕ್ರ ವಾಹನಗಳನ್ನು (ವಾಹನಗಳ ಒಟ್ಟು ಮೌಲ್ಯ 1,45,000) ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಸಂಖ್ಯೆ 78/2021 ಕಲಂ: ಮತ್ತು 87 KP ACT ರಂತೆ ಮೊಕದ್ದಮೆ ದಾಖಲಿಸಲಾಗಿದೆ.

ಗಂಡಸು ಕಾಣೆ ಪ್ರಕರಣ

  • ಕಾಪು: ಪಿರ್ಯಾದಿ ಲಲಿತ ಪ್ರಾಯ : 36 ವರ್ಷ ಗಂಡ : ಗುರುರಾಜ ವಾಸ : ಸಂಪಿಗೆನಗರ ಉದ್ಯಾವರ ಗ್ರಾಮ ಇವರು ತನ್ನ ಗಂಡ ಗುರುರಾಜ ಪ್ರಾಯ : 47 ವರ್ಷ ರವರೊಂದಿಗೆ ದಿನಾಂಕ 11.04.2021 ರಂದು ಪಿರ್ಯಾದಿದಾರರ ಮನೆಯಾದ ಮೂಡುಬೆಳ್ಳೆಗೆ ಬಂದಿದ್ದು, ರಾತ್ರಿ ಸುಮಾರು 11.00 ಗಂಟೆಯ ಸಮಯಕ್ಕೆ ಆಶಾ ಎಂಬವರು ಪಿರ್ಯಾದಿದಾರರ ಗಂಡ ಗುರುರಾಜ ಇವರನ್ನು ಉದ್ಯಾವರ ಗ್ರಾಮ ಸಂಪಿಗೆನಗರಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಸುಶೀಲ ರವರ ಮನೆಯಲ್ಲಿ ಉಳಿದುಕೊಂಡು ದಿನಾಂಕ 12.04.2021 ರಂದು ಪಿರ್ಯಾದಿದಾರರ ಗಂಡ ಆಶಾ ಎಂಬವರೊಂದಿಗೆ ಬೆಳಗ್ಗೆ 08.00 ಗಂಟೆಯ ಸುಮಾರಿಗೆ ಹೊರಗಡೆ ಹೋಗುತ್ತಿರುವುದಾಗಿದೆ. ಎಂದು ಸುಶಿಲಾ ಪಿರ್ಯಾದಿದಾರರಿಗೆ ತಿಳಿಸಿದ್ದು, ಅದರ ನಂತರ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರಿಗೆ ಸಂಪರ್ಕಕ್ಕೆ ಸಿಗದೇ ಇದ್ದು, ಮನೆಗೂ ಬಂದಿರುವುದಿಲ್ಲ, ಈ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಮನೆಯವರು ಸಂಬಂಧಿಕರ ಮನೆ ಎಲ್ಲ ಕಡೆ ಹುಡುಕಾಡಿದಲ್ಲಿ ಪಿರ್ಯಾದಿದಾರರ ಗಂಡ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಠಾಣಾ ಅಪರಾಧ ಸಂಖ್ಯೆ 103/2021 ಕಲಂ ಗಂಡಸು ಕಾಣೆ.ಯಂತೆ ಮೊಕದ್ದಮೆ ದಾಖಲಿಸಲಾಗಿದೆ.

Last Updated: 12-06-2021 01:28 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080