ಅಭಿಪ್ರಾಯ / ಸಲಹೆಗಳು

ಗಾಂಜಾ ಸೇವನೆ ಪ್ರಕರಣ

  • ಮಣಿಪಾಲ: ದಿನಾಂಕ: 26.03.2023 ರಂದು 10:30 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ಎಸ್ ನಾಯ್ಕ  ಹಾಗೂ ಠಾಣಾ ಸಿಬ್ಬಂದಿ ಯವರು ಗಸ್ತು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಡಿ ಸಿ ಕಛೇರಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ Ishan Mohammed (24) S/O Mahin Permanent Add: Silver Graden Apartment Villimadkunu Calicut Kerala State  Persent Add: Room NO 102, Loyal Apartmant, Eshwar Nagar, Manipal Herga Village ಎಂಬವವನ್ನು ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು  ಅದೇ ದಿನ ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್ ಸಿ 2168 ಸುಕುಮಾರ್ ಶೆಟ್ಟಿ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಡಲಾಗಿದೆ.   ಆರೋಪಿ Ishan Mohammed (24) S/O Mahin ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 12.04.2023 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 94/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ದಿನಾಂಕ: 26.03.2023 ರಂದು 10:30 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ಎಸ್ ನಾಯ್ಕ  ಹಾಗೂ ಠಾಣಾ ಸಿಬ್ಬಂದಿ ಯವರು ಗಸ್ತು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಡಿ ಸಿ ಕಛೇರಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ Mohammed Ajmal C H (23) S/O Abduil Rasheed C H Permanent Add: Chakingthodi  Malappuran Post Kerla State – 676504 Persent Add: Room NO 102, Loyal Apartmant, Eshwar Nagar, Manipal Herga Village  ಎಂಬವವನ್ನು ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು . ಅದೇ ದಿನ ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್ ಸಿ 2168 ಸುಕುಮಾರ್ ಶೆಟ್ಟಿ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತದೆ. ಆರೋಪಿ Mohammed Ajmal C H (23) S/O Abduil Rasheed C H ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 12.04.2023 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ   ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 92/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ದಿನಾಂಕ: 26.03.2023 ರಂದು 10:30 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ಎಸ್ ನಾಯ್ಕ  ಹಾಗೂ ಠಾಣಾ ಸಿಬ್ಬಂದಿ  ಯವರು ಗಸ್ತು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಡಿ ಸಿ ಕಛೇರಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ Pranav Srivastava ( 22) S/O A K  Srivastava Permanent Add: 146/65 B H S Allapur, Alahabad, Uttar Pradesh – 211006 Persent Add: Room NO 304, Loyal Apartmant, Eshwar Nagar, Manipal Herga Village ಎಂಬವವನ್ನು ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ. ಅದೇ ದಿನ ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್ ಸಿ 2168 ಸುಕುಮಾರ್ ಶೆಟ್ಟಿ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆರೋಪಿ Pranav Srivastava ( 22) S/O A K  Srivastava  ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 12.04.2023 ರಂದು ದೃಢಪತ್ರವನ್ನು ನೀಡಿದ್ದು ಈ ಬಗ್ಗೆ   ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 93/2023, ಕಲಂ: 27(b) NDPS Actರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ: ಬಿ,ಪಿ ರಂಗಪ್ಪ ಪ್ರಾಯ: 67 ವರ್ಷ ತಂದೆ: ಫಕೀರಪ್ಪ ಎಕ್ಸಿಕ್ಯೂಟೀವ್‌ರಿಲಾಯನ್ಸ್‌ಇನ್‌ಪ್ರಾ ಟೆಲ್‌ಲಿಮಿಟೆಡ್‌ ಬೆಂಗಳೂರು ಇವರು  ರಿಲಾಯನ್ಸ್‌ ಇನ್‌ಪ್ರಾ ಟೆಲ್‌ ಲಿಮಿಟೆಡ್‌ ಕಂಪೆನಿಯಲ್ಲಿ ಎಕ್ಸಿಕ್ಯೂಟೀವ್‌ ಕೆಲಸ ಮಾಡಿಕೊಂಡಿದ್ದು ರಿಲಾಯನ್ಸ್‌ ಟೆಲಿಕಾಮ್‌ ಇನ್‌ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌ವತಿಯಿಂದ ಅಖೀಲಾ ಸಿ ಶೆಟ್ಟಿ ಗಂಡ: ಚಂದ್ರಶೇಖರ ಶೆಟ್ಟಿ ರವರ ಸರ್ವೆ ನಂಬ್ರ: 379/4A2 No Cbis /AIn/Cr/398-36-97  ಪೆರ್ಡೂರುರವರಿಗೆ ಸೇರಿದ ವಿಳಾಸದಲ್ಲಿ ಮಾಲಿಕರೊಂದಿಗೆ ದಿ: 1/07/2007 ರಿಂದ 31/08/2027 ರವರೆಗೆ 20 ವರ್ಷಗಳ ಅವದಿಗೆ ತಿಂಗಳಿಗೆ 3025-00ರೂ ನಂತೆ ಒಪ್ಪಂದ ಮಾಡಿಕೊಂಡು ದಿನಾಂಕ: 01/09/2007 ರಂದು ಮಾಲಿಕರಿಗೆ ಭದ್ರತಾ ಠೇವಣಿ 15,000-00 ನೀಡಿ ಟವರ್‌ ನಿರ್ಮಿಸಲಾಗಿದ್ದು  ಸದ್ರಿ ಮಾಲಿಕರಿಗೆ ಕಂಪೆನಿಯಿಂದ ಎಪ್ರೀಲ್‌2019 ರವರೆಗೆ ಬಾಡಿಗೆ ಪಾವತಿ ಮಾಡಿದ್ದು ಕಂಪೆನಿಯ Insolvency Transition  period ಇದ್ದುದರಿಂದ ಎಪ್ರಿಲ್‌2019 ರಿಂದ ಜನವರಿ 2023 ರವರೆಗೆ ಬಾಕಿ ಪಾವತಿ ಮಾಡಬೇಕಾಗಿತ್ತು ದಿನಾಂಕ: 17/08/2022 ರಂದು ಜಾಗದ ಮಾಲಿಕರು ಕಂಪೆನಿಗೆ ಟವರ್‌ ಚಾಲನೆಯಲ್ಲಿ ಇಲ್ಲದ ಕಾರಣ ಸದ್ರಿ ಜಾಗವನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಲು  ಇಚ್ಚಿಸುವುದಾಗಿ 15 ದಿನಗಳ ಒಳಗೆ ಬಾಕಿ ಪಾವತಿ ಮಾಡಿ ಟವರ್‌ತೆರೆವುಗೊಳಿಸಿ ಮಾಲಿಕರಿಗೆ ನೀಡುವುದು ತಪ್ಪಿದಲ್ಲಿ ಮಾಲಿಕರು ಟವರ್‌ತೆಗೆಯಿಸಿ ಟವರ್‌ನ ಸ್ಥಳವನ್ನು ವಶಕ್ಕೆ ಪಡೆಯಲಾಗುವುದು ಎಂದು ಲೀಗಲ್‌ ನೋಟಿಸ್‌ನೀಡಿದ್ದು  ಸದ್ರಿ ನೋಟಿಸ್‌ಗೆ ಸಂಬಂದಿಸಿ ಕಂಪೆನಯ ಮುಖ್ಯ ಕಛೇರಿಯಿಂದ  3/12/2020 ರಂದು Plan Approval Order ಆಗಿದ್ದು ಇದು ಕಾರ್ಯರೂಪಕ್ಕೆ ತರಬೇಕಾಗಿರುವುದರಿಂದ ಸದ್ರಿ ಟವರ್‌ತಗೆಯುವ ಬಗ್ಗೆ ಕ್ರಮ ಕೈಗೊಳ್ಳದಂತೆ ಜಾಗದ ಮಾಲಿಕರಿಗೆ ದಿನಾಂಕ: 6-09-2022 ರಂದು ಲೀಖೀತವಾಗಿ ನೀಡಿದ್ದರೂ  ದಿನಾಂಕ: 27/01/2023 ರಂದು ಕಂಪೆನಿಯ ಟೆಕ್ನಿಷಿಯನ್‌ಶ್ರೀ ಹರ್ಷರವರು ಸೈಟ್‌ಗೆ ಬಂದು ಪರಿಶೀಲಿಸಲಾಗಿ ಅಖೀಲಾ ಸಿ ಶೆಟ್ಟಿಯವರೊಂದಿಗೆ ಒಪ್ಪಂದ ಮಾಡಿಕೊಂಡು ನಿರ್ಮಿಸಲಾದ  ಟವರ್‌ಹಾಗೂ ಅದರ  ವಸ್ತುಗಳನ್ನು ಆಪಾದಿತರು  ವಿಲೆ ಮಾಡಿ ಕಂಪೆನಿಗೆ ಮೊಸ ಮಾಡಿರುತ್ತಾರೆ . ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ ನಂ. 26/2023  ಕಲಂ:  420, 406 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಹೆಬ್ರಿ: ದಿನಾಂಕ: 11/04/2023 ರಂದು ಪಿರ್ಯಾದಿ: ರವೀಂದ್ರ ( 36 ವರ್ಷ) ತಂದೆ: ಕೃಷ್ಣ ಶೆಟ್ಟಿಗಾರ್ ವಾಸ: ಶಾಲದ ಪಲ್ಕೆ, ಮುದ್ರಾಡಿ ಗ್ರಾಮ, ಹೆಬ್ರಿ ಇವರು ಸ್ನೇಹಿತ ನವೀನ ರವರೊಂದಿಗೆ ಮೋಟಾರ್ ಸೈಕಲ್ ನಲ್ಲಿ ಕುಳಿತು ಕೊಂಡು ಉಪ್ಪಳದಿಂದ ಮುದ್ರಾಡಿ ಕಡೆಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ರಾತ್ರಿ 08:30 ಗಂಟೆಗೆ ಮುದ್ರಾಡಿ ಗ್ರಾಮದ ಭಕ್ರೆಮಠ ಎಂಬಲ್ಲಿ ತಲುಪುವಾಗ ಅಲ್ಲಿಗೆ ಸತೀಶ ಎಂಬುವವರು ಅವರ ಬಾಬ್ತು ಕಪ್ಪು ಬಣ್ಣದ ಪಲ್ಸರ್ ಮೋಟಾರ್ ಸೈಕಲ್  ನಲ್ಲಿ ಬಂದು ಪಿರ್ಯಾದಿದಾರರು ಬರುತ್ತಿದ್ದ ಮೋಟಾರ್ ಸೈಕಲ್ ನ್ನು ತಡೆದು ನಿಲ್ಲಿಸಿ ರವೀಂದ್ರ ರವರಲ್ಲಿ ಹೊಯಿಗೆ ತೆಗೆಯುವ ವಿಚಾರದಲ್ಲಿ ತಕರಾರು ಮಾಡಿ ಅವಾಚ್ಯ ಶಬ್ದದಿಂದ ಬೈಯ್ದು  ಕತ್ತಿಯನ್ನು ತೋರಿಸಿ ಹೆದರಿಸಿ ಕತ್ತಿಯಿಂದ ರವೀಂದ್ರ ರವರ ಎಡಭುಜದ ಬಳಿ ಗೀರಿ ನಂತ್ರ ಅರೋಪಿತ ಸತೀಶ್ ನು ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಮುದ್ರಾಡಿ ಕಡೆಗೆ ಹೋಗಿರುವುದಾಗಿರುತ್ತದೆ. ಈ ಬಗ್ಗೆ   ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 21/2023 US 341, 504,506, 324, IPC ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ: ಸತೀಶ ಮಲ್ಯ, ಪ್ರಾಯ: 64 ವರ್ಷ, ವಾಸ: ಸುಮುಖ, 1 ನೇ ಕ್ರಾಸ್‌, ಮಾರ್ಕೆಟ್‌ ರಸ್ತೆ, ಪರ್ಕಳ ಗ್ರಾಮ ಇವರ ಅಣ್ಣ ಪ್ರಕಾಶ್‌ ಮಲ್ಯ, ಪ್ರಾಯ: 74 ವರ್ಷ ರವರು ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾರ್ಪೋರೇಶನ್‌ ಬ್ಯಾಂಕ್‌ ಎದುರು, ವೆಂಕಟರಮಣ ದೇವಸ್ಥಾನದ ಬಳಿ ಹೆಂಡತಿಯೊಂದಿಗೆ ವಾಸವಾಗಿರುತ್ತಾರೆ. ದಿನಾಂಕ: 08.04.2023 ರಂದು ಬೆಳಗಿನ ಜಾವ 04:45 ಗಂಟೆಗೆ ಪ್ರಕಾಶ್‌ ಮಲ್ಯ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ತಾನು ಮನೆಯಲ್ಲಿ ಬೆಳಗಿನ ಜಾವ 04:30 ಗಂಟೆಗೆ ಸ್ನಾನ ಮಾಡುತ್ತಿರುವಾಗ ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್‌ ಗೀಜರ್‌ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ತನ್ನ ಮೈಗೆ ಬೆಂಕಿ ತಗುಲಿದ್ದು ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಬರುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಆಸ್ಪತ್ರೆಗೆ ಬಂದಾಗ ಪ್ರಕಾಶ್‌ ಮಲ್ಯ ರವರ ಕೈ ಮೇಲೆ, ಹೊಟ್ಟೆಯ ಭಾಗದಲ್ಲಿ, ಬೆನ್ನಿನ ಮೇಲೆ, ಮುಖಕ್ಕೆ ತೀವ್ರ ಸ್ವರೂಪದ ಸುಟ್ಟ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ದಿನ ದಿನಾಂಕ: 12.04.2023 ರಂದು ಬೆಳಗಿನ ಜಾವ 01:10 ಗಂಟೆಗೆ ಪ್ರಕಾಶ್‌ ಮಲ್ಯ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 14/2023ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-04-2023 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080