ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಸುಲೋಚನಾ ಸಾಲ್ಯಾನ್‌‌(49), ತಂದೆ: ಶ್ಯಾಮ ಕುಂದರ್‌, ವಾಸ: ಶ್ರೀ ಗಣೇಶ್‌‌‌ನಿವಾಸ, ಮೂಡುಗಣಪತಿ ದೇವಸ್ಥಾನದಬಳಿ, ಕುಮ್ರಗೋಡು, ಕುಮ್ರಗೋಡು ಗ್ರಾಮ, ಬ್ರಹ್ಮಾವರ ಎಂಬವರು ದಿನಾಂಕ 10/02/2021 ರಂದು ಮೀನು ವ್ಯಾಪಾರ ಮುಗಿಸಿ ಮನೆಗೆ ಹೋಗುವ ಮುನ್ನ ಮಾರ್ಕೇಟ್‌ ‌ಹತ್ತಿರದ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ಬರಲು ಬ್ರಹ್ಮಾವರ ಸಾಯಿ ಮೆಡಿಕಲ್‌ ‌‌‌ಬಳಿ ರಥಬೀದಿ ರಸ್ತೆಯನ್ನು ದಾಟಲು ತಾರು ರಸ್ತೆಯ ದಕ್ಷಿಣ ಅಂಚಿನಲ್ಲಿ ನಿಂತುಕೊಂಡಿರುವಾಗ ರಾತ್ರಿ 8:15 ಗಂಟೆಗೆ ಆರೋಪಿ ಭಾಸ್ಕರ ಆಚಾರಿ ಎಂಬವರು ತನ್ನ KA-20-Y-6162 ನೇ ನಂಬ್ರದ BAJAJ DISCOVER ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಸುಲೋಚನಾ ಸಾಲ್ಯಾನ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ಸುಲೋಚನಾ ಸಾಲ್ಯಾನ್‌‌ ರವರು ರಸ್ತೆಗೆ ಬಿದ್ದು ತುಟಿಗೆ ರಕ್ತಗಾಯ, ಎದೆಗೆ ಗುದ್ದಿದ ನೋವು, ಎರಡೂ ಕಾಲುಗಳ ಮೊಣಗಂಟಿಗೆ, ಬಲ ತೊಡೆಯ ಬಳಿ, ಎಡಕೈ ಮೊಣಗಂಟಿನ ಕೆಳಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆಬಗ್ಗೆ ಬ್ರಹ್ಮಾವರ ಪ್ರಣವ್‌‌ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಾಸ್ಕರ ಆಚಾರಿ ಶ್ರೀಮತಿ ಸುಲೋಚನಾ ಸಾಲ್ಯಾನ್‌‌ ರವರ ಆಸ್ಪತ್ರೆಯ ಬಿಲ್ಲನ್ನು ನೀಡುವುದಾಗಿ ಹೇಳಿದ್ದು, ತದನಂತರ ಆಸ್ಪತ್ರೆಯ ಬಿಲ್ಲು ಜಾಸ್ತಿಯಾದ ಕಾರಣ ನೀಡಲು ಆಗುವುದಿಲ್ಲವಾಗಿ ತಿಳಿಸಿರುವುದರಿಂದ ದೂರು ನೀಡಲುವಿಳಂಭವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾಧ ಲಕ್ಷ್ಮಿ, (75) ಗಂಡ: ದಿ/ನಾರಾಯಣ, ವಾಸ: ಮೆಟ್ಟಿನಹೊಳೆ, ಕಾಲ್ತೋಡು ಗ್ರಾಮ, ಕುಂದಾಪುರ ಇವರು 11/02/2021 ರಂದು 17:10 ಗಂಟೆಗೆ ಕಟ್ ಬೇಲ್ತೂರಿನಲ್ಲಿರುವ ಮಗಳ ಮನೆಗೆ ಹೋಗಲು ಹೆಮ್ಮಾಡಿಯಿಂದ ಮೂಕಾಂಬಿಕಾ ಬಸ್ ಹತ್ತಿದ್ದು 17:20 ಗಂಟೆಗೆ ಕಟ್ ಬೇಲ್ತೂರು ಎಂಬಲ್ಲಿ ಬಸ್ ಇಳಿದು ನೋಡಲಾಗಿ ಲಕ್ಷ್ಮೀ ರವರ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರ ಇಲ್ಲದೇ ಇದ್ದು, ಬಸ್ ನಲ್ಲಿ ಯಾರೋ ಕಳ್ಳರು ಇವರ ಗಮನಕ್ಕೆ ಬಾರದೇ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.  ಕಳವಾದ ಸ್ವತ್ತಿನ ಮೌಲ್ಯ ಸುಮಾರು 1,00,000 ರೂಪಾಯಿಗಳಾಗಿರಬಹುದುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ಶ್ರೀಮತಿ ಸುರೇಖಾ ಶೆಟ್ಟಿ, (48) ಕೋಂ: ಅರುಣ್ ಕುಮಾರ್ ಶೆಟ್ಟಿ, ದುರ್ಗಾ ಹೌಸ್ ಅಂಕದಕಟ್ಟೆ,  ಕೋಟೇಶ್ವರ ಗ್ರಾಮ, ಕುಂದಾಪುರ ಇವರ ಗಂಡ ಮುಂಡಗೋಡದಲ್ಲಿ  ನಡೆಸುತ್ತಿರುವ ವೈನ್  ಶಾಪ್ ನ ಮಾಲೀಕತ್ವದ ವಿಚಾರದಲ್ಲಿ ಆಪಾದಿತರಾದ ಶ್ರೀಮತಿ ಮಮತಾ ಶೆಟ್ಟಿ, ಕೋಂ ದಿ ಸೀತಾರಾಮ ಶೆಟ್ಟಿ, ವಾಶ: ಹಕ್ಲಾಡಿ,  ಕುಂದಾಪುರ ಇವರು ಮತ್ತು ಶ್ರೀಮತಿ ಸುರೇಖಾ ಶೆಟ್ಟಿ ರವರಿಗೆ ವೈಮನಸ್ಸು ಉಂಟಾಗಿರುತ್ತದೆ. ಹೀಗಿರುತ್ತಾ ಇವರ ವಿರುದ್ದ ಆಪಾದಿತರು 15,00,000 ರೂಪಾಯಿಗಳ ಚೆಕ್ ಬೌನ್ಸ್ ನೋಟೀಸು ಕಳುಹಿಸಿದ್ದು , ಸದ್ರಿ ಚೆಕ್ ಅನ್ನು ಆಪಾದಿತರಿಗೆ ಶ್ರೀಮತಿ ಸುರೇಖಾ ಶೆಟ್ಟಿ ರವರು ನೀಡದೇ ಇದ್ದು, ಆಪಾದಿತರು ಶ್ರೀಮತಿ ಸುರೇಖಾ ಶೆಟ್ಟಿ ರವರ ಮನೆಯಲ್ಲಿದ್ದ  ಚೆಕ್‌ನ್ನು ಕಳ್ಳತನ ಮಾಡಿ  ವಂಚಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 379, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 12-02-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080