ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬೈಂದೂರು: ಫಿರ್ಯಾದಿದಾರರಾದ ಸುಬ್ರಮಣ್ಯ (22) ,ತಂದೆ: ನಾರಾಯಣ ದೇವಾಡಿಗ ,ವಾಸ: ಬಾಯಂ ಹಿತ್ಲು ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ ಮಾವ ವಾಸುದೇವ ಎಂಬುವವರು ಉಪ್ಪುಂದ ಗ್ರಾಮ ಪಂಚಾಯತ್ ನಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 09/12/2022 ರಂದು ಬೆಳಿಗ್ಗೆ 10:45 ಗಂಟೆಗೆ ಶಾಲೆ ಬಾಗಿಲು ಮಾರ್ಗದಿಂದ ಅಮ್ಮನವರತೊಪ್ಲು ಎಂಬಲ್ಲಿಗೆ ನೀರು ಬಿಡಲು ಅವರ ಸೈಕಲ್ ನಲ್ಲಿ ಶಾಲೆಬಾಗಿಲಿನಿಂದ ಅಮ್ಮನವರತೊಪ್ಲು ರಸ್ತೆಯಲ್ಲಿ ಹೋಗುತ್ತಾ ಉಪ್ಪುಂದ ಗ್ರಾಮದ ಬಾಯಂಮಿತ್ಲು ಎಂಬಲ್ಲಿ ತಲುಪಿದಾಗ ಅಮ್ಮನವರ ತೊಪ್ಲು ಕಡೆಗೆಯಿಂದ KA-20-EF-8265 ನೇ ಮೋಟಾರು ಸೈಕಲ್ ಸವಾರ ಅಣ್ಣಪ್ಪ ಆತನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾಸು ದೇವ ರವರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ವಾಸುದೇವ ರವರು ಹಾಗೂ ಮೋಟಾರು ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಹಾಗೂ ಭಾಸ್ಕರ , ಗೌತಮ ಎಂಬುವವರು ವಾಸುದೇವ ಹಾಗೂ ಮೋಟಾರು ಸೈಕಲ್ ಸವಾರನನ್ನು ಎತ್ತಿ ಉಪಚರಿಸಿದ್ದು ವಾಸುದೇವರ ರವರಿಗೆ ಕೆನ್ನೆಯ ಎಡಭಾಗ ಗಾಯವಾಗಿ ಒಳನೋವು , ಎಡ ಕಾಲಿಗೆ ರಕ್ತಗಾಯ , ಎಡ ಕಣ್ಣಿಗೆ ,ಹುಬ್ಬಿಗೆ ಗಾಯವಾಗಿದ್ದು ಹಲ್ಲು ಮುರಿದು ಹೋಗಿದ್ದು ಗಲ್ಲಕ್ಕೆ ಚರ್ಮ ಸುಲಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಹಾಗೂ ಮೋಟಾರು ಸೈಕಲ್ ಸವಾರನಿಗೂ ಮುಖಕ್ಕೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 239/2022 ಕಲಂ:279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಹಿರಿಯಡ್ಕ: ಉಡುಪಿ ಜಿಲ್ಲಾ ಕಾರಗೃಹ ವಿಚಾರಣಾ ಬಂದಿ ಸಂಖ್ಯೆ 8263 ನೇ ಸದಾನಂದ ಶೇರಿಗಾರ (52) ,ತಂದೆ: ಗೋಪಾಲ ಶೇರಿಗಾರ, ವಾಸ: ಲಲಿತ ಮಹಲ, ಪೇರಡ್ಕಾ ಮಾಳ ಊರು, ಹತ್ತಿರ, ಕಾರ್ಕಳ ನಗರ ಉಡುಪಿ ಜಿಲ್ಲೆ ಇವರು ದಿನಾಂಕ: 11/12/2022 ರಂದು ಸಮಯ ಸುಮಾರು 05:00 ಗಂಟೆಗೆ ಕಬ್ಬಿಣದ ಬಾಗಿಲಿಗೆ ನೇಣು ಬಿಗಿದು ಕೊಂಡು ಅತ್ಮಹತ್ಯೆಗೆ ಪ್ರಯತ್ನಸಿರುವುದಾಗಿ ಆತನ ಬ್ಯಾರಕ್‌ನಲ್ಲಿದ್ದ ಸಿಬ್ಬಂದಿಗಳು ತಿಳಿಸಿದ ತಕ್ಷಣ ಆತನಿರುವ ಬ್ಯಾರಕ್ ನಂ 06 ಕ್ಕೆ ಕರ್ತವ್ಯ ನಿರತ ಸಿಬ್ಬಂದಿ ಮೋಹನ್ ಮತ್ತು ವೀಕ್ಷಕರು ನೀಡಿದಾಗ ಸದಾನಂದ ಶೇರಿಗಾರ  06 ಬ್ಯಾರಕ್‌ನ ಕಬ್ಬಿಣದ ಬಾಗಿಲಿಗೆ ಕುತ್ತಿಗೆಗೆ ಆತನು ಉಪಯೋಗಿಸುವ ಲುಂಗಿಯನ್ನು ಬಿಗಿದುಕೊಂಡು ಆತ್ಮಹತ್ಯೆ ಗೆ ಪ್ರಯತ್ನಿಸಿದ್ದು ಆತನು ಜೀವಂತವಾಗಿರುವುದು ಕಂಡು ಬಂದಿದ್ದು ತಕ್ಷಣ ಆತನನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು ವೈದ್ಯಾಧಿಕಾರಿಯವರು ಪರೀಶಿಲಿಸಲಾಗಿ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 44/2022 ಕಲಂ: 176 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 11-12-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080