ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  •  ಪಡುಬಿದ್ರಿ: ಪಿರ್ಯಾದಿದಾರರಾದ ಅಬೂಬಕ್ಕರ್ ಸಿದ್ದಿಕ್ (39), ತಂದೆ: ಅಬ್ದುಲ್  ರಹಮಾನ್, ವಾಸ: ಸಿರಾಜುದ್ದಿನ್ ಮಂಜಿಲ್, ಮಾಸ್ತಿಕಟ್ಟೆ, ಹೆಜಮಾಡಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 09/11/2022 ರಂದು ತನ್ನ ಸ್ಕೂಟರಿನಲ್ಲಿ ಅವರ ತಂದೆ ಅಬ್ದುಲ್ ರಹಮಾನ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಗೆ ಬಂದು 10:00 ಗಂಟೆಯ ವೇಳೆಗೆ ಪಡುಬಿದ್ರಿ ಪೇಟೆಯ ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರನ್ನು ಇಳಿಸಿದ್ದು, ನಂತರ ಪಿರ್ಯಾದಿದಾರರ ತಂದೆ ಸೊಸೈಟಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯ ಬಳಿ ರಸ್ತೆ ದಾಟಲು ನಿಂತಿದ್ದ ಸಮಯ KA-15-A-2203 ನೇ ನಂಬ್ರದ  ಕಾರು ಚಾಲಕ ರಮೇಶ್ ತನ್ನ ಕಾರನ್ನು ಅತೀ ವೇಗವಾಗಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ತಂದೆ ಅಬ್ದುಲ್ ರಹಮಾನ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಅಬ್ದುಲ್ ರೆಹಮಾನ್ ರವರು ರಸ್ತೆಗೆ ಬಿದ್ದು, ಅವರ ಬಲಬದಿ ಸೊಂಟ, ಕೆನ್ನೆಗೆ ಹಾಗೂ ತಲೆಗೆ ತೀವ್ರ ಒಳ ಜಖಂ ಆಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಪ್ರಜ್ಞಾ ಹಂದೆ (17), ತಂದೆ: ಸುಬ್ರಹ್ಮಣ್ಯ ಹಂದೆ ವಾಸ: ಅನಂತ ಕಮಲ ನಿಲಯ, ಸಾಲಿಗ್ರಾಮ ಅಂಚೆ ಚಿತ್ರಪಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 10/11/2022 ರಂದು ಮಧ್ಯಾಹ್ನ ಕೋಟ ವಿವೇಕ ಜ್ಯೂನಿಯರ್  ಕಾಲೇಜಿನಿಂದ  ಮನೆಗೆ  ಊಟಕ್ಕೆ ಬಂದಿದ್ದು ನಂತರ ಊಟ ಮುಗಿಸಿ ಮನೆಯಿಂದ ಕಾಲೇಜಿಗೆ ಹೊರಟು ಮಧ್ಯಾಹ್ನ 01:15 ಗಂಟೆಗೆ ಕೋಟ ಮೂರ್  ಕೈಯ ಎಡಬದಿಯಲ್ಲಿರುವ ವಿವೇಕಾ ಬುಕ್ ಹೌಸ್ ಎದುರು ಬಂದು ಅಲ್ಲಿಂದ ಎದುರಿನ ಕಾಲೇಜ್ ಕಡೆಗೆ ರಸ್ತೆಯ ಎಡಬದಿಯಿಂದ ಬಲಬದಿಗೆ ಹೋಗಲು ರಾಷ್ಟ್ರೀ ಹೆದ್ದಾರಿ 66 ರಲ್ಲಿ ರಸ್ತೆಯನ್ನು ದಾಟಿ ಡಿವೈಡರ್ ಮೇಲೆ ಹತ್ತುತ್ತಿರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-20-AA-2022 ನೇದರ ಚಾಲಕನಾದ ಅವೇಜ್ ಅಹಮ್ಮದ್, ಅತೀವೇಗ, ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲೆ ಹತ್ತುತ್ತಿದ್ದ ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಬಿದ್ದು ಬಲಕೈ ಭುಜದ ಮೂಳೆಗೆ ತೀವೃ ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 196/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ  ಪ್ರಸಾದ್‌ ಪೂಜಾರಿ (45), ತಂದೆ: ತುಕ್ರ ಪೂಜಾರಿ, ವಾಸ: ಶೆಟ್ಟಿ ಕಂಪೌಂಡ್‌, ಬೊಬ್ಬನಪಾದೆ, ಕೊರಂಗ್ರಪಾಡಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ತನ್ನ ಸಂಸಾರದೊಂದಿಗೆ ಉಡುಪಿ ತಾಲೂಕು ಕೊರಂಗ್ರಪಾಡಿ ಬೊಬ್ಬನಪಾದೆ ಶೆಟ್ಟಿ ಕಂಪೌಂಡ್‌ ಎಂಬಲ್ಲಿ ಅಶ್ವಿನ್‌ ಪೀರೇರ ಎಂಬುವವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ದಿನಾಂಕ 10/11/2022 ರಂದು ಬೆಳಿಗ್ಗೆ 09:00 ಗಂಟೆಯಿಂದ 16:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು ಒಳಪ್ರವೇಶಿಸಿ, ಮನೆಯೊಳಗಿದ್ದ ಗೋದ್ರೇಜ್‌ ನ ಲಾಕರ್‌ನಲ್ಲಿದ್ದ 10 ಗ್ರಾಮ್‌ ತೂಕದ ಚಿನ್ನದ ನೆಕ್ಲೆಸ್‌-1 ಹಾಗೂ ನಗದು ರೂಪಾಯಿ 18,000/- ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ. 63,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  162/2022 ಕಲಂ:  454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಫಿರೋಜ್‌ (21), ತಂದೆ: ಶೇಖ್‌ ಫಿರೋಜ್‌ , ವಾಸ: ಅಲ್‌ ಫೈಸಲ್‌ ಮಂಜಿಲ್‌, ಅಲಂಗಾರ, ಪೆರ್ಡೂರು ಅಂಚೆ, ಉಡುಪಿ ತಾಲೂಕು ಇವರು ದಿನಾಂಕ 10/11/2022 ರಂದು ಅವರ ತಾಯಿ, ತಂಗಿ, ಅತ್ತಿಗೆ ಹಾಗೂ ಅವರ ಮಗಳನ್ನು KA-20-Z-7613 ನೇ ಕಾರಿನಲ್ಲಿ ಕೂರಿಸಿಕೊಂಡು,  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯೋದಯ ಪಿಯು ಕಾಲೇಜಿನ ಬಳಿ ಬರುತ್ತಿರುವಾಗ 17:30 ಗಂಟೆಗೆ ಮೋಟಾರ್‌ ಸೈಕಲ್‌ ನಲ್ಲಿ ಬಂದ 1ನೇ ಆಪಾದಿತ ಅಸ್ರಾರ್‌  ಕಾರಿನ ಮುಂದಕ್ಕೆ ಬಂದು ಅಡ್ಡಗಟ್ಟಿ, ಪಿರ್ಯಾದಿದಾರರು ಕಾರಿನಿಂದ ಹೊರಗೆ ಬಂದಾಗ ಆಪಾದಿತನು ಒಮ್ಮೇಲೆ ದೂಡಿ, ಕುತ್ತಿಗೆಗೆ ಕೈ ಹಾಕಿ ಹಲ್ಲೆ ಮಾಡಿದ್ದಲ್ಲದೆ  ಅವಾಚ್ಯ ಶಬ್ದಗಳಿಂದ ಬೈದು, ತಡೆಯಲು ಬಂದ ಪಿರ್ಯಾದಿದಾರರ ತಾಯಿ, ತಂಗಿ ಹಾಗೂ ಅತ್ತಿಗೆಗೂ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ನಂತರ ಪೋನ್‌ ಮಾಡಿ 6 ರಿಂದ 8 ಜನರನ್ನು ಕರೆಯಿಸಿ, ಅವರೆಲ್ಲಾ 2) ತೌಸಿಫ್ , 3) ತನ್ವೀರ್, 4) ಶಮುನ್ ಮತ್ತು ಇತರರು  ಸೇರಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  163/2022 ಕಲಂ:  143, 147, 341, 323, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

     

ಇತ್ತೀಚಿನ ನವೀಕರಣ​ : 11-11-2022 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080