Feedback / Suggestions

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಅಜಿತ್ ಆಚಾರ್ಯ (32), ತಂದೆ : ಉಮಾನಾಥ ಆಚಾರ್ಯ, ವಾಸ : ಮನೆ ನಂಬ್ರ 8-1-206 ಬಿ1, ಮೂಕಾಂಬಿಕಾ ನಿಲಯ, ಮೀನು ಮಾರುಕಟ್ಟೆ ಬಳಿ, ಕುಂಜಿಬೆಟ್ಟು ಉಡುಪಿ ಇವರ ಅಣ್ಣ ಸುಜಿತ್ ಆಚಾರ್ಯ (35)ಇವರು ದಿನಾಂಕ 09/09/2022 ರಂದು ತನ್ನ KA-19-HE-2074 ನೇ ಸ್ಕೂಟರ್‌ನಲ್ಲಿ  ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕಾಪು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಸಮಯ ಸಂಜೆ 5:00 ಗಂಟೆಗೆ ಕೊತ್ತಲಕಟ್ಟೆಯ ಶ್ರೀ ಬೊಬ್ಬು ಸ್ವಾಮಿ ದೈವಸ್ಥಾನದ ಬಳಿ ತಲುಪುತ್ತಿದ್ದಂತೆ, ಅದೇ ರಸ್ತೆಯಲ್ಲಿ  ಮಂಜುನಾಥ ರವರು ತನ್ನ  ಟ್ಯಾಂಕರ್ ನಂಬ್ರ KA-59-1401 ನೇದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನ ಸ್ಕೂಟರ್‌ನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ಅಣ್ಣ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಅವರ ಎಡಕಾಲಿನ ಮೂಳೆ ಮುರಿತದ ತೀವೃ ಗಾಯ, ಎಡ ತೋಳಿಗೆ ಬಲತೋಳಿಗೆ ಮತ್ತು ಬಲಕಾಲಿನ ಮಣಿಗಂಟಿನ ಬಳಿ ತರಚಿದ ಗಾಯಗಳಾಗಿದ್ದು, ಕೂಡಲೇ ಅಲ್ಲಿನ ಸ್ಥಳೀಯರು ಉಪಚರಿಸಿ 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು. ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಗಾಯಾಳಾದ ತನ್ನ ಅಣ್ಣನ ಆರೈಕೆಯಲ್ಲಿರುವುದರಿಂದ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ದಿನಾಂಕ 10/09/2022  ರಂದು  ಬೆಳಿಗ್ಗೆ 11:45 ಗಂಟೆಗೆ,  ಕುಂದಾಪುರ  ತಾಲೂಕಿನ, ಕಸಬಾ  ಗ್ರಾಮದ ಪ್ರಥಮೇಶ್‌ ಅಪಾರ್ಟಮೆಂಟ್‌ ಬಳಿ ರಸ್ತೆಯಲ್ಲಿ ಪಿರ್ಯಾದಿದಾರರಾದ  ಉಮೇಶ ವಿ (38),  ತಂದೆ: ವಿಠಲ್‌ ‌ಪೂಜಾರಿಮ  ವಾಸ: ಕಡ್ಗಿರಸ್ತೆ, ಎನ್‌‌. ಹೆಚ್‌ 66 ಕಸಬಾ  ಗ್ರಾಮ, ಕುಂದಾಪುರ  ತಾಲೂಕು ಇವರು KA-20-X-9273ನೇ ಪಲ್ಸರ್‌‌ಬೈಕ್‌ ಸವಾರಿ ಮಾಡಿಕೊಂಡು ಕುಂದಾಪುರ ಪೇಟೆ ಕಡೆಯಿಂದ  ಶ್ರೀ  ನಾರಾಯಣ ಗುರು ಮಂದಿರಕ್ಕೆ ವೆಂಕಟರಮಣ ದೇವಸ್ಥಾನದ ರಸ್ತೆ (ಬೆನಗಲ್‌‌‌ರಸ್ತೆ) ಮುಖೇನ ಹೋಗುತ್ತಿರುವಾಗ, ಪ್ರಥಮೇಶ್‌ ಅಪಾರ್ಟಮೆಂಟ್‌ ಬಳಿಯ ರಸ್ತೆಯ ಎಡಬದಿಯಲ್ಲಿ ಆಪಾದಿತ ಪ್ರಸನ್ನ ನಿಲ್ಲಿಸಿಕೊಂಡಿದ್ದ  KA-20- P- 1553ನೇ ಮಾರುತಿ ಸ್ವಿಪ್ಟ್‌‌‌ಕಾರನ್ನು, ಯಾವುದೇ  ಸೂಚನೆ ನೀಡದೇ ಒಮ್ಮೇಲೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ  ಬೈಕಿಗೆ  ಅಪಘಾತಪಡಿಸಿದ ಪರಿಣಾಮ, ಅವರ ಎಡಭುಜಕ್ಕೆ ಒಳ ಪೆಟ್ಟಾಗಿದ್ದು, ಮೈ ಕೈಗೆ ತರಚಿದ ಗಾಯವಾಗಿ, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಬಂದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ  .  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರೇಮ (58), ಗಂಡ: ಭುಜಂಗಶೆಟ್ಟಿ , ವಾಸ: ಇಸೋಳ್ಳಿ  ಮನೆ ನಡೂರು ಗ್ರಾಮ ಇವರ ಗಂಡ ಭುಜಂಗ ಶೆಟ್ಟಿ (63) ರವರು ಐದಾರು ವರ್ಷಗಳಿಂದ  ತಲೆಯ  ನರ ಸಮಸ್ಯೆ ಇರುವುದರಿಂದ ಆಗಾಗ ವಿಪರೀತಿ ತಲೆನೋವು ಬಂದು ತೀವ್ರ ಅಸ್ವಸ್ಥರಾಗುತ್ತಿದ್ದು  ಈ ಬಗ್ಗೆ ಉಡುಪಿಯ ಹೈ ಟೆಕ್‌ ಆಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿದೆ. ಆದರೂ   ತಲೆಯ ಸಮಸ್ಯೆ  ಉಲ್ಬಣವಾಗುತಿತ್ತು  ಹಾಗೂ 4 ತಿಂಗಳ ಹಿಂದೆ ದಿನಸಿ ಅಂಗಡಿ ಮಾಡಿಕೊಂಡಿದ್ದು ಅದರ ಸಾಲದಿದಲೋ ಅಥವಾ  ಅವರಿಗೆ ಇರುವ ಕಾಯಿಲೆಯಿಂದಲೋ  ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ  09/09/20202 ರಂದು  ರಾತ್ರಿ 9:00 ಗಂಟೆಯಿಂದ  ದಿನಾಂಕ 10/09/2022 ಮಧ್ಯಾಹ್ನ 2:30 ಗಂಟೆ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ  ಮನೆಯ ಪಕ್ಕದ ಪ್ರತಾಪ ಶೆಟ್ಟಿಯವರ ಗದ್ದೆಯ ಬಾವಿಯಲ್ಲಿ  ಬಾವಿಗೆ ಹಾರಿ ಅತ್ಯಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 44/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ಆರೀಫ ( 50),  ಗಂಡ: ಶೌಕತ್‌ ಆಲಿ, ವಾಸ: ಮನೆನಂಬ್ರ 21/54 76ನೇ  ಬಡಗುಬೆಟ್ಟು  ಗ್ರಾಮದ ದುಗ್ಲಿಪದವು, ಉಡುಪಿ  ತಾಲೂಕು ಇವರೊಂದಿಗೆ ವಾಸವಿದ್ದ ಅವರ  ಗಂಡ  ಶೌಕತ್‌ ಆಲಿ (53)ರವರು  ಉಬ್ಬಸ  ಖಾಯಿಲೆಯಿಂದ  ಬಳಲುತ್ತಿದ್ದವರು, ಇದೇ  ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/09/2022 ರಂದು ಬೆಳಿಗ್ಗೆ 8:00 ಗಂಟೆಯಿಂದ  ಮಧ್ಯಾಹ್ನ  2:30  ಗಂಟೆಯ ಮಧ್ಯಾವಧಿಯಲ್ಲಿ ಮನೆಯ  ಹಾಲ್‌ನ ಆ್ಯಂಗ್ಲರ್‌ಗೆ  ಸರ್ವೀಸ್‌ ವಯರ್‌ನಿಂದ  ಕುತ್ತಿಗೆಗೆ  ನೇಣು  ಬಿಗಿದುಕೊಂಡು  ಆತ್ಮಹತ್ಯೆಯನ್ನು  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 39/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಹೆಂಗಸು ಕಾಣೆ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಮುರಗನ್ (52), ತಂದೆ: ಬಾಲಕೃಷ್ಣ ಪುಳ್ಳ, ವಾಸ:  ಪೋರಂ  ನಿವಾಸ ಚಕ್ಕಪಾಲ್ ವಿಳಪಿಲ್ಲೆ ಅಂಚೆ  ಮತ್ತು ಗ್ರಾಮ ಕಾಚಾಗಡ  ತಾಲೂಕು ತಿವೇಂಡ್ರಂ ಜಿಲ್ಲೆ. ಕೇರಳ ರಾಜ್ಯ ಇವರು ಮತ್ತು ಅವರ ಹೆಂಡತಿ ಚಾಂದಿ ಶೇಖರ್ (42) ಮತ್ತು ಮಗ ಆದಿತ್ಯನ್, ಹಾಗೂ  ಪಿರ್ಯಾದಿದಾರರ ರಕ್ತ ಸಂಬಂಧಿಗಳು ಇತರ ಕುಟುಂಬ ವರ್ಗದವರೂ ಒಣಂ ಹಬ್ಬದ ಪ್ರಯುಕ್ತ ಕೇರಳ ರಾಜ್ಯದಿಂದ  ಹೊರಟು ದಿನಾಂಕ 10/09/2022 ರಂದು ಕೊಲ್ಲೂರು ಶ್ರೀ.ಮೂಕಾಂಬಿಕಾ ದೇವಸ್ಥಾನಕ್ಕೆ ಯಾತ್ರೆಗೆ ಬಂದು ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡು ಸಂಜೆ ವೇಳೆ ಕುಟುಂಬದವ ರೊಂದಿಗೆ ಕೊಲ್ಲೂರು ಗ್ರಾಮದ ಸೌರ್ಪಾಣಿಕ ಸ್ನಾನ  ಘಟ್ಟಕ್ಕೆ ಬಂದು ಸಂಜೆ 5:15 ಗಂಟೆಗೆ  ಪಿರ್ಯಾದಿದಾರರು  ಸೌರ್ಪಾಣಿಕ ನದಿಯ ದಡದಲ್ಲಿ ಸ್ನಾನ ಮಾಡಲು ನೀರಿಗೆ ಇಳಿದವರು  ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದು ಪಿರ್ಯಾದಿದಾರರನ್ನು ರಕ್ಷಣೆ ಮಾಡಲು ಅವರ ಮಗ ಆದಿತ್ಯನ್ ನದಿಯ ನೀರಿಗೆ ಇಳಿದಾಗ ಆತನು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು  ಆದಿತ್ಯನ್‌ನನ್ನು  ರಕ್ಷಣೆ ಮಾಡಲು ಈಜು ಬಾರದ ಆತನ ತಾಯಿ ಚಾಂದಿಶೇಖರ್ ರವರು ನದಿಯ ನೀರಿಗೆ ಧುಮುಕಿ ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿ ರುತ್ತಾರೆ. ಪಿರ್ಯಾದಿದಾರರನ್ನು ಮತ್ತು  ಆದಿತ್ಯ ರವರನ್ನು ಸ್ಥಳೀಯರು ರಕ್ಷಣೆ ಮಾಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: ಹೆಂಗಸು  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಮಟ್ಕಾ ಜುಗಾರಿ ಪ್ರಕರಣ

  • ಪಡುಬಿದ್ರಿ: ದಿನಾಂಕ 10/09/2022 ರಂದು ಪುರುಷೋತ್ತಮ, ಪೊಲೀಸ್‌ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ಸಾಂತೂರು ಗ್ರಾಮದ ಮುದರಂಗಡಿ ಮೀನು ಮಾರ್ಕೆಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು, ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಾ ಹಣ ಸಂಗ್ರಹಿಸುತ್ತಿದ್ದ, ದಿನೇಶ್ ಶೆಟ್ಟಿ ಎಂಬಾತನನ್ನು ದಸ್ತಗಿರಿ ಮಾಡಿ, ಅವನ  ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,050/-, ಮಟ್ಕಾ ನಂಬ್ರ ಬರೆದ ಚೀಟಿ-01, ಬಾಲ್ ಪೆನ್ನು-01 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022  ಕಲಂ:  78 (I) (III) ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಉಡುಪಿ: ದಿನಾಂಕ 09/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು,ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಬಂದ ಮಾಹಿತಿ ಮೇರೆಗೆ ಸಾಲಿಗ್ರಾಮದ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು,   ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 10/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ ವರದಿಯಲ್ಲಿ  ಆಪಾದಿತ ಗಣೇಶ್ ಉಪಾಧ್ಯಾಯ ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:  ದಿನಾಂಕ 09/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು ,ಸೆನ್ ಅಪರಾಧ ಪೊಲೀಸ್ ಠಾಣೆ,ಉಡು ಇವರಿಗೆ ಬಂದ ಮಾಹಿತಿ ಮೇರೆಗೆ ಬ್ರಹ್ಮಾವರ ತಾಲೂಕು,  ಪೆರಂಪಳ್ಳಿ ಗ್ರಾಮದ ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಸಾರ್ವಜನಿಕಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 10/09/2022ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ ವರದಿಯಲ್ಲಿ ಆಪಾದಿತ ಆದಂ ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 09/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು,ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಬಂದ ಮಾಹಿತಿ ಮೇರೆಗೆ ಬ್ರಹ್ಮಾವರ ತಾಲೂಕು, ಸಾಲಿಗ್ರಾಮದ ಪೆರಂಪಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 10/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ ವರದಿಯಲ್ಲಿ  ಆಪಾದಿತ ತಬ್ರೇಜ್ ಇತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ದಿನಾಂಕ 10/09/2022 ರಂದು 14:00 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ  ಮಾರ್ಕೆಟ್ ನಲ್ಲಿರುವ ಪಿರ್ಯಾದಿದಾರರಾದ     ಜಿನೇಶ್ (29), ತಂದೆ: ಸುಜಯ ಕುಮಾರ್,  ವಾಸ: ಹೆಬ್ಬಾರ್ ಬೆಟ್ಟು ಮನೆ ನೂರಾಳ್ ಬೆಟ್ಟು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ಅಂಗಡಿಗೆ ಎದುರಿನ ಅಂಗಡಿಯಲ್ಲಿರುವ  ಮುಡಾರು ಗ್ರಾಮದ ನಿವಾಸಿ ಪ್ರಸನ್ನ ಇವರು ಬಂದು 2 ಕಟ್ಟು ಸ್ಟ್ರೀಂಗ್  ಒನಿಯನ್ ಕೇಳಿದ್ದು, ಪಿರ್ಯಾದಿದಾರರು ಆತನಿಗೆ ಸ್ಟ್ರೀಂಗ್  ಒನಿಯನ್ ಕೊಟ್ಟು 40 ರೂಪಾಯಿ ಕೇಳಿದ್ದು,  ಏಕಾಏಕಿ ಸಿಟ್ಟುಗೊಂಡ ಆರೋಪಿ ಪ್ರಸನ್ನ ನ್ನು  “ಯಾರಿಗೆ ಬೇಕು ನಿನ್ನ ಸ್ಟ್ರೀಂಗ್  ಒನಿಯನ್” ಎಂದು ಬಿಸಾಡಿ ಅಲ್ಲಿಯೇ ಕ್ರೇಟ್ ನಲ್ಲಿದ್ದ ಚೂರಿ ತೆಗೆದು ಪಿರ್ಯಾದಿದಾರರಿಗೆ ಚುಚ್ಚಲು ಬಂದಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪಿರ್ಯಾದಿದಾರರ ಬೆನ್ನಿಗೆ ಹಲ್ಲೆ ಮಾಡಿದ್ದು ಪಿರ್ಯಾದಿದಾರರ ಬೆನ್ನಿಗೆ ಚೂರಿ ತಾಗಿ ಗಿರಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿತನು ಬೆದರಿಕೆ ಹಾಕಿದ್ದು , ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ: 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 10/09/2022 ರಂದು 14:00 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯ ಪಿರ್ಯಾದಿದಾರರ ಅಂಗಡಿಯ ಎದುರಿನ ಮಾರ್ಕೆಟ್ ನಲ್ಲಿರುವ ಆರೋಪಿತ ಜಿನೇಶ್ ಇವರ ಅಂಗಡಿಗೆ ಪಿರ್ಯಾದಿದಾರರಾದ ಪ್ರತಿಮಾ (35), ಗಂಡ: ಪ್ರಸನ್,ನ ವಾಸ: 8 ನೇ ಅಡ್ಡ ರಸ್ತೆ ದಿಡಿಂಬಿರಿ ಮುಡಾರು  ಗ್ರಾಮ ಕಾರ್ಕಳ ತಾಲೂಕು ಇವರ ಗಂಡ ಪ್ರಸನ್ನ ರವರು  ಸ್ಟ್ರೀಂಗ್ ಆನಿಯನ್ ತರಲು ಹೋಗಿದ್ದು, ಆ ಸಮಯ ಪಿರ್ಯಾದಿದಾರರ ಗಂಡನಿಗೂ ಆರೋಪಿ ಜೀನೇಶ್ ನಿಗೂ ಸ್ಟ್ರೀಂಗ್ ಆನಿಯನ್ ನ ಹಣವನ್ನು ಕೊಡುವ ವಿಚಾರದಲ್ಲಿ ಗಲಾಟೆ ಆಗಿದ್ದು, ಜಿನೇಶ್ ಪಿರ್ಯಾದಿದಾರರ ಗಂಡನನ್ನು  ನೆಲಕ್ಕೆ ದೂಡಿಹಾಕಿ ಕೊರಳನ್ನು  ಹಿಡಿದು ಕೈಯಿಂದ ಮುಖಕ್ಕೆ, ತಲೆಗೆ ಹಾಗೂ  ಎದೆಗೆ ಗುದ್ದಿದ್ದು,  ತಡೆಯಲು ಹೋದ ಪಿರ್ಯಾದಿದಾರರ ಭುಜಕ್ಕೆ ಆರೋಪಿ ಕೈ ಹಾಕಿ ನೆಲಕ್ಕೆ ದೂಡಿ ಹಾಕಿದ್ದು, ಅಲ್ಲದೇ ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುವುದಾಗಿದೆ.   ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2022 ಕಲಂ : 323, 354,504,  506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ: ಪಿರ್ಯಾದಿದಾರರಾದ ಸುಲೋಚನಾ ಶೆಡ್ತಿ (76),  ಕೃಷ್ಣ ಶೆಟ್ಟಿ, ವಾಸ: ಶ್ರೀ ಮಾತಾ  ನಿಲಯ  ಆಗುಂಬೆಯ  ರಸ್ತೆ  ಬಾಳೆಬೈಲು  ತೀರ್ಥ ಹಳ್ಳಿ  ಇವರು ತೀರ್ಥಹಳ್ಳಿಯ ಬಾಳೆಬೈಲ್ಲು ಎಂಬಲ್ಲಿ ವಾಸ ಮಾಡಿಕೊಂಡಿದ್ದು. ಅವರ ಮೂಲ ಮನೆ ಚಾರಾ ಗ್ರಾಮದ ಹಂದಿಕಲ್ಲು ಅಗಿರುತ್ತದೆ.  2015 ಮತ್ತು 2016 ಹಾಗೂ 2016 ಮತ್ತು 2017 ನೇ ಸಾಲಿನಲ್ಲಿ ಚಾರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಯಲ್ಲಿ ಸರ್ಕಾರಿ ಯೋಜನೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಇದರ ಯೋಜನೆ ಅಡಿಯಲ್ಲಿ ಬರುವ ಬಸವ ಯೋಜನೆ ಆಧಾರದಲ್ಲಿ ಫಲಾನುಭವಿ ಅಪಾದಿತೆ ಉಷಾ, ಗಂಡ: ಸುಭಾಷ್ ಚಂದ್ರ ಇವರ ಫಲಾನುಭವಿ ಸಂಖ್ಯೆ 81238, ಶ್ರೇಣಿ 2015-2016 ನೇ ಇಸವಿಯಲ್ಲಿ ಚಾರಾ ಗ್ರಾಮ ಪಂಚಾಯತ್ ಗೆ  ನಮೂನೆ -1 ರಲ್ಲಿ ಅರ್ಜಿ ಸಲ್ಲಿಸಿ ಅರ್ಜಿಯಲ್ಲಿ ಕುಟುಂಬ ಮುಖ್ಯಸ್ಥರ/ ಸದ್ಯಸರ ಸಹಿ ಇರುವ ಜಾಗದಲ್ಲಿ  ಪಿರ್ಯಾದಿದಾರರ ಸಹಿಯನ್ನು ನಕಲು ಮಾಡಿ ಪಿರ್ಯಾದಿದಾರರ ಅನುಮತಿ ಇಲ್ಲದೇ  ಅವರ  BPL ಕಾರ್ಡ್ ನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಗೆ ಆಧಾರವಾಗಿ ನೀಡಿ ಸರ್ಕಾರದಿಂದ ದೊರೆಯುವ ಹಣವನ್ನು ಪಡೆದು  ಪಿರ್ಯಾದಿದಾರರಿಗೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 419, 420, 468, 471 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಉಷಾ ಶೆಟ್ಟಿ (36), ಗಂಡ: ಸುಭಾಶ್ಚಂದ್ರ ಶೆಟ್ಟಿ, ವಾಸ: ಹಂದಿಕಲ್ಲು ಚಾರ ಗ್ರಾಮ ಹೆಬ್ರಿ ತಾಲೂಕು ಇವರು ತನ್ನ ಸಂಸಾರದೊಂದಿಗೆ ಚಾರಾ ಗ್ರಾಮದ ಹಂದಿಕಲ್ಲು ಎಂಬಲ್ಲಿ ವಾಸವಾಗಿದ್ದು.  ದಿನಾಂಕ 10/09/2022 ರಂದು ಮದ್ಯಾಹ್ನ 13:30 ಗಂಟೆಗೆ ಚಾರಾ ಗ್ರಾಮದ ಹಂದಿಕಲ್ಲು ಎಂಬಲ್ಲಿ ಪಿರ್ಯಾದಿದಾರರು ಊಟ ಮಾಡಿ ಬಟ್ಟಲಿನ ಎಂಜಲು ನೀರನ್ನು ಹೊರಗಡೆ ಚೆಲ್ಲಿ ಅಂಗಳದಲ್ಲಿ ನಿಂತುಕೊಂಡಿರುವಾಗ ಪಿರ್ಯಾದಿದಾರರ ಗಂಡನ ಅಕ್ಕನ ಗಂಡ ಕೃಷ್ಣ ಶೆಟ್ಟಿ ಇವರು ಕಾರಿನಲ್ಲಿ ಬಂದು ಮನೆಯ ಎದುರುಗಡೆ ಕಾರು ನಿಲ್ಲಿಸಿ ಪಿರ್ಯಾದಿದಾರರಲ್ಲಿ ಗಂಡನು ಎಲ್ಲಿಗೆ ಹೋಗಿದಾನೆ ಎಂದು ಕೇಳಿದ್ದು. ಅಗ ಪಿರ್ಯಾದಿದಾರರು ಅವರಲ್ಲಿ ಕೆಲಸಕ್ಕೆ ಹೋಗಿದ್ದಾರೆಂದು ತಿಳಿಸಿದ್ದು. ಅಗ ಅಪಾದಿತ ಕೃಷ್ಣ ಶೆಟ್ಟಿಯು ಪಿರ್ಯಾದಿದಾರರಿಗೆ  ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 354, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 11-09-2022 10:23 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080