ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಮಣಿಪಾಲ: ದಿನಾಂಕ 10/09/2021 ರಂದು 16:10 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ಪಾಸ್‌ ಕುದ್ರು ರಾಜನ್ನರವರ ಜಾಗದ ಬಳಿ ಪಿರ್ಯಾದಿದಾರರಾದ ಮ್ಯಾಕ್ಸಿಮ್ ಡಿಸೋಜಾ (41) ತಂದೆ ಲಾರೆನ್ಸ್ ಡಿ ಸೋಜಾ, ವಾಸ:ಮ್ಯಾಕ್ಸಿಮ್ ವಿಲ್ಲಾ, ಪಾಸ್ ಕುದ್ರು, ಮೂಡುಪೆರಂಬಳ್ಳಿ,ಶಿವಳ್ಳಿ ಇವರು ತನ್ನ ಅಕ್ಟಿವಾ ದ್ವಿಚಕ್ರ ವಾಹನ ನಂ: ಕೆಎ-20-ಇಕ್ಯೂ-859 ರಲ್ಲಿ ನೆರೆ ಮನೆಯ ಮಹೇಶ್‌ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿರುವಾಗ ಆಪಾದಿತ ವಿನೋದ್‌ ಎಂಬವರು ತನ್ನ ಆಟೋರಿಕ್ಷಾ ನಂ: ಕೆಎ-20-ಬಿ-8541 ನೇದನ್ನು ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು ಅಕ್ಟಿವಾ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಮ್ಯಾಕ್ಸಿಮ್ ಡಿಸೋಜಾ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಒಡ್ಡಿ, ಕೈಯಿಂದ ಹಲ್ಲೆ ಮಾಡಿ, ಕಾಲಿಂದ ತುಳಿದ ಪರಿಣಾಮ ಮ್ಯಾಕ್ಸಿಮ್ ಡಿಸೋಜಾ ರವರು ಅಕ್ಟಿವಾ ಸಮೇತ ಬಿದ್ದು, ಅವರ ಬಲ ಕಾಲಿಗೆ ಅಕ್ಟಿವಾ ಬಿದ್ದು ಗಾಯ ಹಾಗೂ ಜಖಂ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2021 ಕಲಂ: 341,504,506,323,324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶಹನಾಜ್ (28) ಗಂಡ: ಬಿ.ಕೆ ಅನ್ಸರ್ ವಾಸ: ಎಎನ್ ಮಂಜಿಲ್ ಬೀಜಾಡಿ ಗ್ರಾಮ ಕುಂದಾಪುರ ಇವರ ವಾಸದ ಮನೆಯಾದ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಎ.ಎಂ ಮಂಜಿಲ್ ಮನೆಯ  ಒಂದು ಭಾಗದಲ್ಲಿ ಆರೋಪಿತರು ವಾಸವಿದ್ದು ಅವರೊಳಗೆ ಜಾಗದ ತಕರಾರು ಇದ್ದು ಇದೇ ಉದ್ದೇಶದಿಂದ ಆರೋಪಿ 1 ಮುಶ್ರಿಯತ್‌(40) ಗಂಡ: ಸಾದಿಕ್ ವಾಸ: ಎಎನ್ ಮಂಜಿಲ್ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 09/09/2021 ರಂದು 21:15 ಗಂಟೆಗೆ ಶಹನಾಜ್‌ ರವರು ಹಾಗೂ ಅವರ ಗಂಡನೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿದ್ದು, ಅಲ್ಲದೇ 2 ನೇ ಆರೋಪಿ ರಾಜಿ ತಂದೆ: ಸಾದಿಕ್ ವಾಸ: ಎಎನ್ ಮಂಜಿಲ್ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು. ಕೂಡ ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿ ಸಾಂಬಾರು ಮಸಾಲೆಯನ್ನು ಶಹನಾಜ್‌ ಇವರ ಮೈಗೆ ಬಿಸಾಡಿದ್ದು ಸದ್ರಿ ಹಲ್ಲೆಯಿಂದ ಗಾಯಗೊಂಡ ಶಹನಾಜ್‌ ರವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಘಟನೆಗೆ 3 ನೇ ಆರೋಪಿ ಸಿದ್ದಿಕ್ ಬಿಜಾಡಿ ಎಂಬವರ ಪ್ರಚೋದನೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021  ಕಲಂ:323, 504, 354, 109 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ಪಿರ್ಯಾದಿದಾರರಾದ ಮುಶ್ರಿಯತ್‌‌ (40) ಗಂಡ: ಮಹಮ್ಮದ್ ಸಿದ್ದಿಕ್  ವಾಸ: ಎಎನ್ ಮಂಜಿಲ್ ಬೀಜಾಡಿ ಗ್ರಾಮ ಕುಂದಾಪುರ ಇವರ ವಾಸದ ಮನೆಯಾದ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಎ.ಎನ್ ಮಂಜಿಲ್ ನ ಮನೆಯ ಒಂದು ಭಾಗದಲ್ಲಿ ಅವರ ತಮ್ಮ ಅನ್ಸರ್ ಹಾಗೂ ಶಹನಾಜ್ ಮಕ್ಕಳೊಂದಿಗೆ ವಾಸವಾಗಿದ್ದು ಅವರೊಳಗೆ ಜಾಗದ ತಕರಾರು ಇದ್ದು ದಿನಾಂಕ 09/09/2021 ರಂದು ರಾತ್ರಿ 21:15 ಗಂಟೆಗೆ ಮುಶ್ರಿಯತ್‌‌ ರವರಿಗೆ ಆರೋಪಿತರಾದ ಕಮರುನ್ನಿಸಾ, ನಬಿಷಾ, ನಜುವೆಲ, ಜೊಹಾರ ಹಾಗೂ ಇವರ ತಮ್ಮ ಹಾಗೂ ಆತನ ಹೆಂಡತಿ ಶಹನಾಜ್ ಎಲ್ಲರೂ ಸೇರಿಕೊಂಡು ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಕೈಯಿಂದ ಹೊಡೆದು ಆರೋಪಿ ಶಹನಾಜ್ ಳು ಮನೆಯಲ್ಲಿದ್ದ ಸಾರನ್ನು ಮುಶ್ರಿಯತ್‌‌ ರವರ ಮೈಗೆ ಎಸೆದು ಹಲ್ಲೆ ಮಾಡಿದ್ದು. ಮುಶ್ರಿಯತ್‌‌ ರವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2021 ಕಲಂ:323, 504, 354, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-09-2021 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080