ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಶಿಧರ ಎಲ್. ಶೇರ್ವೆಗಾರ (49)  ತಂದೆ : ದಿ. ಲಕ್ಷ್ಮಣ ಶೇರ್ವೆಗಾರ ವಾಸ : ಮನೆ ನಂಬ್ರ 237/2 ಕೊಂಬಗುಡ್ಡೆ, ಮಲ್ಲಾರು ಗ್ರಾಮ ಕಾಪು ತಾಲ್ಲೂಕು ಉಡುಪಿ ಇವರು ದಿನಾಂಕ 11/03/2023 ರಂದು ಮನೆಯಿಂದ ಹಳೇ ಮಾರಿಗುಡಿಯ ಸಮೀಪದ ಸೈಟ್‌ನೋಡಲು ಹೊರಟಿ ರಾ ಹೆ  66 ರಸ್ತೆಯ ಬಳಿ ತಲುಪಿದಾಗ ರಾ ಹೆ 66 ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗಿದ ಹೆದ್ದಾರಿಯ ರಸ್ತೆಯಲ್ಲಿ ದ್ವಿಮುಖದಲ್ಲಿ ವಾಹನಗಳು ಸಾಗುತ್ತಿದ್ದು, ಶಶಿಧರ ಎಲ್. ಶೇರ್ವೆಗಾರ ರವರು ಉಡುಪಿ ಮಂಗಳೂರು ಕಡೆಗೆ ಸಾಗಿದ ಹೆದ್ದಾರಿಯ ಏಕಮುಖ ರಸ್ತೆಯನ್ನು ದಾಟಿ ಇನ್ನೊಂದು ಬದಿಯ ಹೆದ್ದಾರಿಯನ್ನು ದಾಟಲು ನಿಂತುಕೊಂಡಿದ್ದ ಸಮಯ ಮಂದಾರ ಹೋಟೆಲ್‌ನ ಮುಂಭಾಗ ಉಡುಪಿಯಿಂದ ಮಂಗಳೂರು ಕಡೆಗೆ ಸಾಗಿದ ಹೆದ್ದಾರಿಯಲ್ಲಿ ಹಲವಾರು ಮಂದಿ ರಸ್ತೆ ದಾಟುವರೇ ನಿಂತುಕೊಂಡಿದ್ದು, ಆಗಾ ಸಮಯ ಸುಮಾರು 08:25 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ-20 ಎಎ-7033 ನೇ ಬಸ್ಸಿನ ಚಾಲಕ ಶಾಹೀದ್‌‌ನು ತನ್ನ ಬಾಬ್ತು ಬಸ್ಸನ್ನು ಹೆದ್ದಾರಿಯಲ್ಲಿ ನಿರ್ಲಕ್ಷತನದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು, ಮಂದಾರ ಹೋಟೆಲ್‌‌ನ ಮುಂಭಾಗ ಹೆದ್ದಾರಿಯನ್ನು ದಾಟಲು ನಿಂತಿದ್ದವರ ಪೈಕಿ ಶಾಲಾ ವಿದ್ಯಾರ್ಥಿನಿ ವರ್ಷಿತಾಳಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದನು ಪರಿಣಾಮ ವರ್ಷಿತಾಳು ರಸ್ತೆಗೆ ಬಿದ್ದಿದ್ದು, ಢಿಕ್ಕಿ ಹೊಡೆದು ಬಸ್ಸನ್ನು ಅದರ ಚಾಲಕನು ಮುಂದಕ್ಕೆ ಚಾಲಾಯಿಸಿ ನಿಲ್ಲಿಸಿ ಸ್ಥಳಕ್ಕೆ ಬಂದನು. ಇದನ್ನು ಕಂಡ ಶಶಿಧರ ಎಲ್. ಶೇರ್ವೆಗಾರ ಇವರು ಹಾಗೂ ಆಸುಪಾಸಿನವರು ಸ್ಥಳಕ್ಕೆ ತೆರಳಿ ನೋಡಲಾಗಿ ವರ್ಷಿತಾಳ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಸ್ಥಳಕ್ಕೆ 108 ಅಂಬುಲೇನ್ಸ್ ನಲ್ಲಿ ಉಡುಪಿ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋದರು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವರ್ಷಿತಾಳು ದಾರಿ ಮಧ್ಯ ಮೃತ ಪಟ್ಟಿರುತ್ತಾಳೆಂದು ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2023 ಕಲಂ 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.
  • ಕಾರ್ಕಳ: ದಿನಾಂಕ 10/03/2023 ರಂದು 17:10 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಕೆಮ್ಮಣ್ಣು ದ್ವಾರದ ಬಳಿ ಹಾದುಹೋಗುವ ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ಧಾರಿಯಲ್ಲಿ KA20S2366 ನೇ ನಂಬ್ರದ ಬೈಕ್ ಸವಾರ ರಮೇಶ್ ಶೆಟ್ಟಿ ಎಂಬಾತನು ತನ್ನ ಬಾಬ್ತು ಬೈಕ್ ನ್ನು ನಿಟ್ಟೆ ಕಡೆಯಿಂದ ಹಾಳೆಕಟ್ಟೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಹತೋಟಿ ತಪ್ಪಿ ಓಮ್ಮೇಲೆ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ರಮೇಶ್ ಶೆಟ್ಟಿರವರ ತಲೆಗೆ, ಕೈಕಾಲುಗಳಿಗೆ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ನಿಟ್ಟೆ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದು,ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ, ಎಂಬುದಾಗಿಗೌರವ್ (20) ತಂದೆ: ದಯಾನಂದ ಪೂಜಾರಿ ವಾಸ: ಗಣೇಶ್ ನಿವಾಸ್ ಕೆಮ್ಮಣ್ಣು ನಿಟ್ಟೆ ಗ್ರಾಮ ಮತ್ತು ಅಂಚೆ ಕಾರ್ಕಳ ಇವರು ನೀಡಿದ ದೂರಿನ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2023 ಕಲಂ 279,337 ಐಪಿಸಿಯಂತೆ ಪಕರಣ ದಾಖಲಿಸಿರುವುದಾಗಿದೆ.
  • ಶಂಕರನಾರಾಯಣ: ಫಿರ್ಯಾದಿದಾರ ಪ್ರಣತಿ (29) ಗಂಡ, ಪ್ರದೀಪ ಶೆಟ್ಟಿ ವಾಸ, ತೊಂಬತ್ತು ಚಾವಡಿ ಮನೆ ಹೆಂಗವಳ್ಳಿ ಗ್ರಾಮ ಕುಂದಾಪುರ ಇವರು ದಿನಾಂಕ 10/03/2023 ರಂದು ಕೆಎ.35 ಎನ್. 9511 ನೇ ನಂಬ್ರದ ಕಾರಿನಲ್ಲಿ ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ ಹಾಲಾಡಿ ಮಧುಧರ್ಶಿನಿ ಬಾರ್ ಬಳಿ ಹಾಲಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ಹೋಗುತ್ತಿರುವಾಗ ಆರೋಪಿಯು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಆರೋಪಿಯ ಹತೋಟಿ ತಪ್ಪಿ ರಸ್ತೆಯ ಬದಿಯ ಹಲಸಿನ ಮರಕ್ಕೆ ಡಿಕ್ಕಿ ಹೊಡೆದಿರುತ್ತದೆ, ಇದರ ಪರಿಣಾಮ ಸದ್ರಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಫಿರ್ಯಾಧುದಾರರ ಎಡಕೈ ಗಂಟಿಗೆ ಗುದ್ದಿದ ಒಳ ನೋವು ಉಂಟಾಗಿರುತ್ತದೆ, ಹಾಗೂ ಕಾರಿನಲ್ಲಿ ಇದ್ದವರಿಗೆ ಎಡಕಾಲಿಗೆ ಮೂಳೆ ಮುರಿತದ ಹಾಗೂ ಎಡ ಕಣ್ಣಿಗೆ ಪೆಟ್ಟಾಗಿರುತ್ತದೆ, ಹಾಗೂ ಆರವ್ ಈತನ ಮುಖಕ್ಕೆ ಮತ್ತು ಹೊಟ್ಟೆಗೆ ತರಚಿದ ಗಾಯವಾಗಿರುತ್ತದೆ, ಮತ್ತು ಕಾರು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ 279,337,338 ಐಪಿಸಿಯಂತೆ ಪಕರಣ ದಾಖಲಿಸಿರುವುದಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ರಾಘವೇಂದ್ರ (47) ಟ್ರಾಕ್ ಮೆಂಟೇನರ್  ತಂದೆ: ಶ್ಯಾಮರಾಯ ಆಚಾರ್ , ವಾಸ ಕಾಳಾವರ ಸಳ್ವಾಡಿ ಅಂಚೆ ಕುಂದಾಪುರ ಇವರು ರೈಲ್ವೆ ಇಲಾಖೆಯಲ್ಲಿ T.S.M (TRACK MAINTAINER) ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಅವರು ಕರ್ತವ್ಯದಲ್ಲಿದ್ದಾಗ  ಬೆಳಿಗ್ಗೆ 10:10 ಗಂಟೆ ಸುಮಾರಿಗೆ ಉಡುಪಿ ರೈಲ್ವೆ ಸ್ಟೇಷನ್ ಮಾಸ್ಟರ್ ಟ್ರಾಕ್ ಮೆನ್ ನಾಗರಾಜ ಅವರಿಗೆ ಕರೆ ಮಾಡಿ ಉಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿ ರೈಲ್ವೆ ಟ್ರಾಕ್ ಸಂಖ್ಯೆ 684/6-7 ರ ಮಧ್ಯೆ ಮಡ್‌ಗಾಂವ್ ಮಂಗಳೂರು ಮೆಮೋ ಟ್ರೈನಿಗೆ ಬೆಳಿಗ್ಗೆ 10:05 ಗಂಟೆ ಸುಮಾರಿಗೆ ಗಂಡಸೊಬ್ಬನು ರೈಲಿಗೆ ಅಡ್ಡ ಬಂದು ಡಿಕ್ಕಿಯಾಗಿ ಎಸೆಯಲ್ಪಟ್ಟು ಟ್ರ್ಯಾಕ್ ನ ಬದಿಯಲ್ಲಿ ಬಿದ್ದಿರುವ ಬಗ್ಗೆ ರೈಲಿನ ಚಾಲಕರು ಹೇಳಿರುವಂತೆ, ನಾಗರಾಜ ರವರು ಕರೆ ಮಾಡಿ ರಾಘವೇಂದ್ರ ರವರಿಗೆ ತಿಳಿಸಿರುವ ಮೇರೆಗೆ ಇವರು ಬೆಳಿಗ್ಗ 10:45 ಗಂಟೆಯ ಸುಮಾರಿಗೆ ಸದ್ರಿ ಜಾಗಕ್ಕೆ ಬಂದು ನೋಡಿದಾಗ ಸುಮಾರು 40 ರಿಂದ 45 ವರ್ಷದ ಅಪರಿಚಿತ ಗಂಡಸಿನ ಮೃತ ಶರೀರ ರೈಲ್ವೆ ಟ್ರಾಕ್ ನ ಬದಿಯಲ್ಲಿ ಬಿದ್ದುಕೊಂಡಿದ್ದು , ಮೃತ ದೇಹದ ಕೈ, ಕಾಲು, ತಲೆ, ದೇಹ ಸಂಪೂರ್ಣ ಜಜ್ಜಿ ಹೋಗಿ, ಮೃತರ ತಲೆ ಮತ್ತು ದೇಹ ಬೇರ್ಪಟ್ಟಿರುತ್ತದೆ. ಸದ್ರಿ ವ್ಯಕ್ತಿಯು ರೈಲಿಗೆ ಅಡ್ಡ ಬಂದು ರೈಲು ತಾಗಿ ಎಸೆಯಲ್ಪಟ್ಟು ಆದ ಗಾಯದಿಂದ ಮೃತ ಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 18/2023 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾರ್ಕಳ: ಫಿರ್ಯಾದಿದಾರರಾದ ಶ್ರೀಮತಿ ಕೆ ಗಾಯತ್ರಿ ಕಾಮತ್, (64) ಗಂಡ ಕೆ ಗೋಕುಲ್‌ದಾಸ್ ಕಾಮತ್,  ವಾಸ ಶ್ರೀನಿವಾಸ ನಿಲಯ, ಎಮ್‌ಐಜಿ 2, ಮನೆ ನಂಬ್ರ 27 ,ಕುಕ್ಕುಂದೂರು ಗ್ರಾಮ , ಕಾರ್ಕಳ ಇವರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ MIG-II ಮನೆ ನಂಬ್ರ-27 ಶ್ರೀನಿವಾಸ ನಿಲಯ ಎಂಬಲ್ಲಿ ಗಂಡನೊಂದಿಗೆ ವಾಸವಾಗಿದ್ದು, ದಿನಾಂಕ 10/03/2023 ರಂದು ಕಾರ್ಕಳ ಮಾರಿಗುಡಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಬಗ್ಗೆ ಸಂಜೆ 16:00 ಗಂಟೆಗೆ ಮನೆಯಿಂದ ಗಂಡನೊಂದಿಗೆ ಹೊರಟು ವೆಂಕಟರಮಣ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಭಾಗವಹಿಸಿ ದೇವಸ್ಥಾನದ ಕಾರ್ಯಕ್ರಮ ಮತ್ತು ನಾಟಕ ಮುಗಿದ ನಂತರ ರಾತ್ರಿ 22:30 ಗಂಟೆಗೆ ಗಂಡನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟು ಮನೆಗೆ ಬಂದು ಫಿರ್ಯಾದುದಾರರ ಗಂಡ ಅಂಗಳದಲ್ಲಿ ಸ್ಕೂಟರ್ ನಿಲ್ಲಿಸಿ ರಾತ್ರಿ 22:50 ಗಂಟೆಗೆ ಮನೆಯ ಬೀಗ ತೆಗೆಯುತ್ತಿರುವ ಸಮಯ ಫಿರ್ಯಾದುದಾರರು ಮನೆಯ ಗೇಟು ಹಾಕಿದ್ದು ಆ ಸಮಯ ಒಂದು ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಫಿರ್ಯಾದುದಾರರ ಮನೆಯ ಸ್ವಲ್ಪ ಮುಂದೆ ಹೋಗಿ ವಾಪಾಸು ತಿರುಗಿಸಿ ಬಂದು ಮನೆಯ ಹತ್ತಿರ ಮೋಟಾರ್ ಸೈಕಲ್ ನಿಲ್ಲಿಸಿ ಹಿಂಬದಿ ಕುಳಿತಿದ್ದ ವ್ಯಕ್ತಿ ಬೈಕಿನಿಂದ ಇಳಿದು ಗೇಟಿನ ಬಳಿ ಬಂದು ‘33 ನಂಬ್ರ ಮಂಗಮ್ಮನ ಮನೆ ಎಲ್ಲಿ’ ಎಂದು ಕೇಳಿ ಗೇಟನ್ನು ದೂಡಿಕೊಂಡು ಬಂದು ಫಿರ್ಯಾದುದಾರರ ಕುತ್ತಿಗೆಗೆ ಕೈಹಾಕಿ ಬಲವಂತವಾಗಿ ತಳ್ಳಿ ಬೀಳಿಸಿ ಕುತ್ತಿಗೆಯಲ್ಲಿದ್ದ ನಾಲ್ಕುವರೆ ಪವನ್ ತೂಕದ, ಚಿನ್ನದಗುಂಡು, 2 ಹವಳ ಮತ್ತು 2 ಲಕ್ಷ್ಮಿ ತಾಳಿ ಇರುವ ಚಿನ್ನದ ಕರಿಮಣಿ ಸರ ಮತ್ತು ಐದೂವರೆ ಪವನ್ ತೂಕದ ಚಿನ್ನದ ತಾಳಿ ಇರುವ ಹವಳದ ಚಿನ್ನದ ಮಾಂಗಲ್ಯ ಸರಗಳನ್ನು ಅಪಾದಿತರು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆ ಮಾಡಿದ 2 ಸರಗಳ ಅಂದಾಜು ಮೌಲ್ಯ 2 ಲಕ್ಷ ರೂ ಆಗುಬಹುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 26/2023 ಕಲಂ: 392, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಇತ್ತೀಚಿನ ನವೀಕರಣ​ : 11-03-2023 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080