ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರಾಘವ ಶೆಟ್ಟಿ (80)ತಂದೆ: ದಿ. ಪದ್ಮಯ್ಯ ಶೆಟ್ಟಿ ವಾಸ: ಕೃಷ್ಣದೇವ ಚಿತ್ರಪಾಡಿ ಗ್ರಾಮ ಬ್ರಹ್ಮಾವರ ತಾಲೂಕ ಇವರು ದಿನಾಂಕ 10/02/2022  ರಂದು  ಬೆಳಿಗ್ಗೆ 09:20  ಗಂಟೆಗೆ  ತನ್ನ KA-20-ET-1056 ನೇ ಸ್ಕೂಟಿಯಲ್ಲಿ ಬೇಳೂರಿಗೆ ಹೊರಟು  ಕೋಟ ಮೂರುಕೈ ಜಂಕ್ಷನ್ ಹತ್ತಿರ ರಸ್ತೆ ದಾಟಲು ಸ್ಕೂಟಿ ನಿಲ್ಲಿಸಿಕೊಂಡು ನಿಂತಿರುವಾಗ ಮಧುವನ ಕಡೆಯಿಂದ KA-20-MC-1690 ನೇ ಕಾರು ಚಾಲಕ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ಸ್ಕೂಟಿಯಲ್ಲಿ ನಿಂತಿದ್ದ ರಾಘವ ಶೆಟ್ಟಿ ರವರ ಎಡಕಾಲ ಪಾದದ ಗಂಟಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಇವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಎಡಕಾಲಿನಲ್ಲಿ ಮೂಳೆ ಮುರಿತದ ಗಾಯವಾಗಿರುತ್ತದೆ ಅಪಘಾತಪಡಿಸಿದ ಕಾರಿನ ಚಾಲಕ ಸುಜನ್ ಎಂಬುದಾಗಿ ತಿಳಿದಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನಿತೇಶ್‌ಪೂಜಾರಿ (19) ತಂದೆ: ಚಂದ್ರ ಪೂಜಾರಿ, ವಾಸ: ಮಾತಾಶ್ರೀ, ಹೊಸಮನೆ, ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 09/02/2023 ರಂದು ಮುಂಜಾನೆ 00:10 ಗಂಟೆಗೆ ರಾ.ಹೆ. 66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ತೆಕ್ಕಟ್ಟೆ ಗ್ರಾಮದ ಭಾರತ್‌ಪೆಟ್ರೋಲ್‌ಬಂಕ್‌ಎದುರು ಬರುವಾಗ, ರಸ್ತೆಯ ವಿರುದ್ದ ಪಾರ್ಶ್ವದಲ್ಲಿ ಕುಂದಾಪುರ ಕಡೆಯಿಂದ ಸಂಜಯ್‌ಎಂಬಾತನು ಸವಾರಿ ಮಾಡಿಕೊಂಡು ಬರುತ್ತಿದ್ದ ನಂ KA-30 W-9101 ನೇ ಟಿವಿಎಸ್‌ಸ್ಕೂಟಿಯನ್ನು, ಹಿಂದಿನಿಂದ ಬಂದ ಸವಾರ ಅಶೋಕ್‌ಎಂಬಾತನು ತನ್ನ ನಂ KA-20 EF-8379 ನೇ ಯಮಹ FZ ಬೈಕ್‌ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟಿಯನ್ನು ಎಡಬದಿಯಿಂದ ಒವರ್‌ಟೇಕ್‌ಮಾಡುವ ಭರದಲ್ಲಿ ಸ್ಕೂಟಿಯ ಎಡಬದಿಗೆ ಢಿಕ್ಕಿ ಹೊಡೆದಿದ್ದು, ಆಗ ಸ್ಕೂಟಿ ಸವಾರನು ಆಯತಪ್ಪಿ ರಸ್ತೆಯ ಡಿವೈಡರ್‌ಗೆ ಗುದ್ದಿ ಡಿವೈಡರ್‌ಮೇಲೆ ಚಲಾಯಿಸಿಕೊಂಡು ಬಂದು ಸ್ಕೂಟಿ ಸಮೇತ ಬಿದ್ದು, ತಲೆಗೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ರಕ್ತಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಮೋಹನ್ ಕುಮಾರ್ (43) ತಂದೆ: ದಿ. ಶೀನ, ವಾಸ: ಮಾತೃ ಛಾಯ, ಮುಳ್ಳಗುಡ್ಡೆ, ಉಚ್ಚಿಲ ಅಂಚೆ, ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಇವರ ತಮ್ಮ ಸುಭಾಶ್ ಕುಮಾರ್(42) ಎಂಬುವರು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಈ ಮೊದಲು ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮದ್ಯಪಾನ ಮಾಡುವುದನ್ನು ಬಿಟ್ಟವರು, ಇದೇ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ 10/02/2023 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಕಾಪು ತಾಲೂಕು ಬಡಾ ಗ್ರಾಮದ ಮುಳ್ಳಗುಡ್ಡೆಯಲ್ಲಿರುವ ಅವರ ಮನೆಯ ಚಾವಡಿಯ ಕಬ್ಬಿಣದ ಅಂಗ್ಲರ್‌‌ಗೆ ಸೀರೆಯನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡವರನ್ನು 16:00 ಗಂಟೆಯ ವೇಳೆಗೆ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಸಮಯ 16:50 ಗಂಟೆಗೆ ಅಲ್ಲಿನ ವೈದ್ಯರು ಪರೀಕ್ಷಿಸಿ ಸುಭಾಶ್‌ ಕುಮಾರ್‌‌ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ (30) ಗಂಡ: ಕಿರಣ ಕುಮಾರ್ ವಾಸ: ಮನೆ ನಂಬ್ರ 6-494 ಶ್ರೀ ಮಂಜುನಾಥ ನಿಲಯ ಚಿಕನ್‌ ಸಾಲ್‌ ರಸ್ತೆ ಕಸಬಾ ಗ್ರಾಮ ಕುಂದಾಪುರ ಇವರ ತಂದೆಯಾದ ರಘುನಾಥ ಶೇರೆಗಾರ (60) ರವರು ಲಿವರ್‌ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸುತ್ತಿದ್ದು ಇದರಿಂದ ಮನನೊಂದು ಜೀವನದಲ್ಲಿ  ಜುಗುಪ್ಸೆಗೊಂಡು ದಿನಾಂಕ 10/02/2023  ರಂದು 17:00   ಗಂಟೆಯಿಂದ ದಿನಾಂಕ 10/02/2023  ರಂದು 18:40  ಗಂಟೆಯ ಮಧ್ಯಾವದಿಯಲ್ಲಿ  ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಮನೆಯ ರೂಮಿನಲ್ಲಿ ಫ್ಯಾನಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 08/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ನೀಲಮ್ ರಾಯ್ (40) ಗಂಡ: ಅಮಿತ್ ರಾಯ್ ವಾಸ: ಜೀಜೂರು ಅಂಚೆ, ಕಾಳಿ ಮಂದಿರದ ಬಳಿ, ಅಮರ್ ಗಾಚಿಯ, ಹೂಗ್ಲಿ ಜಿಲ್ಲೆ, ಪಶ್ಚಿಮ ಬಂಗಾಳ ಇವರು  ಮತ್ತು ಅವರ ಮಗ ಹಾಗೂ ಇವರ ಗಂಡನಾದ ಅಮಿತ್ ರಾಯ್ (52) ರವರು  ದಿನಾಂಕ 07/02/2023 ರಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಅಮರ್ ಗಾಚಿಯಾದಿಂದ ಸಂಭಂದಿಕರ ಮದುವೆಗೆಂದು  ಕುಂದಾಪುರಕ್ಕೆ ಬಂದವರು ಬೀಜಾಡಿಯಲ್ಲಿರುವ ಓಷನ್ ನೆಕ್ಸ್ಟ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದು, ದಿನಾಂಕ 10/02/2023 ರಂದು ಮದ್ಯಾಹ್ನ 13:30 ಗಂಟೆಯ ಸುಮಾರಿಗೆ ನೀಲಮ್ ರಾಯ್ ರವರ ಗಂಡನಿಗೆ ತೀವೃವಾದ ಎದೆನೋವು ಕಾಣಿಸಿಕೊಂಡಿದ್ದು,ಕೂಡಲೇ ಅವರನ್ನುಕೋಟೇಶ್ವರದ ನಾರಾಯಣ ಹೆಲ್ತ್ ಕೆರ್ ಸೆಂಟರ್ ನಲ್ಲಿ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಸಂಜೆ 17:30 ಗಂಟೆಗೆ ಕರೆದುಕೊಂಡು ಹೋದಾಗ  ಪರೀಕ್ಷಿಸಿದ ವೈದ್ಯರು ನೀಲಮ್ ರಾಯ್ ರವರ ಗಂಡ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ನೀಲಮ್ ರಾಯ್ ರವರ ಗಂಡನಿಗೆ ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಕಾಯಿಲೆ ಹಾಗೂ ಹೃದಯ ಸಂಬಂದಿ ಕಾಯಿಲೆಯಿದ್ದು, ಹೃದಯ ಸಂಭಂದಿ ಅಥವಾ ಇತರ ಯಾವುದೋ ಆರೋಗ್ಯ ಸಮಸ್ಯೆಯಿಂದ  ಮೃತ ಪಟ್ಟಿದ್ದು,ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 09/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-02-2023 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080