Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗಣೇಶ (38), ತಂದೆ: ಗೋವಿಂದ, ವಾಸ:ಮನೆ ನಂಬ್ರ 1/233 ಜನನಿ, ಕಾಳಾವರ ಜನತಾ ಕಾಲೋನಿ ಕಾಳಾವರ  ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ಗೋವಿಂದ(70) ರವರು ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ದಿನಾಂಕ 10/12/2022 ರಂದು ಬೆಳಿಗ್ಗೆ 11:00 ಗಂಟೆಯಿಂದ 14:15 ಗಂಟೆಯ ನಡುವೆ ಯಾರು ಇಲ್ಲದ ಸಮಯ ಮನೆಯ ಬಚ್ಚಲ ಕೋಣೆಯಲ್ಲಿ ಗೋಡೆಗೆ ಅಡ್ಡವಾಗಿ ಇರಿಸಿದ ಬಾಗಿಲ ದಿಂಡಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 03/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿದಾರರಾದ ಸುರೇಶ್ ಬಹುದೋರು (30), ತಂದೆ: ಜೀತ್ ಬಹುದೋರು, ವಾಸ: ಜೋಯ್ ಕಲ್ಲೋಲಿಕಲ್  ಹೌಸ್ , ಯಡ್ತರೆ ಗ್ರಾಮ, ಬೈಂದೂರು ತಾಲೂಕು ಇವರು ಯಡ್ತರೆ  ಗ್ರಾಮದ ಮದ್ದೋಡಿ ಕಲ್ಲೋಲಿಕಲ್  ಜೋಯಿರವರ  ಮನೆಯಲ್ಲಿ  ಹೆಂಡತಿ ಬಸಂತಿ ಮಕ್ಕಳಾದ ಅರುಣ, ಅನಿಲ (7 ವರ್ಷ) ಇವರೊಂದಿಗೆ ವಾಸಮಾಡಿಕೊಂಡಿದ್ದು, ದಿನಾಂಕ 10/01/2023 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರ ಹೆಂಡತಿ ಬಸಂತಿ ರವರು ಜೋಯ್ ರವರ ತೋಟದ ಬದಿಯಲ್ಲಿರುವ ಮದ್ದೋಡಿ ಹೊಳೆಗೆ  ಬಟ್ಟೆಯನ್ನು ಒಗೆಯಲು  ಹೋಗುವ ಸಮಯ ಮಗ ಅನಿಲ್ ತಾಯಿಯ ಜೊತೆ ಹೋಗಿದ್ದು  ಪಿರ್ಯಾದಿದಾರರ ಹೆಂಡತಿ  ಮಗ ಅನಿಲ್ ನನ್ನು  ಹೊಳೆ ಬದಿಯಿಂದ  ವಾಪಾಸು ಮನೆಗೆ ಹೋಗುವಂತೆ  ಹೇಳಿ ಕಳುಹಿಸಿದ್ದು  ಅನಿಲ್ ನು ಮನೆಗೆ  ಹೋಗುವಾಗ  ಆಟವಾಡುತ್ತಾ ಹೋಗುವ ಸಮಯ ಬಟ್ಟೆ ಒಗೆಯುವ ಸ್ಥಳದಿಂದ ಸ್ವಲ್ಪ ದೂರ  ಹೊಳೆಯಲ್ಲಿ ನೀರು  ಬೀಳುವ ಜಾಗದಲ್ಲಿ  ಚಿಕ್ಕ  ನೀರಿನ ಗುಂಡಿಗೆ  ಅನಿಲ ನು ಆಕಸ್ಮಿಕವಾಗಿ  ಬಿದ್ದು ನೀರಿನಲ್ಲಿಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 03/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಸುರೇಶ  ನಾಯ್ಕ(38), ತಂದೆ: ಬಾಬು  ನಾಯ್ಕ, ವಾಸ: ಈರಕ್ಲಾಡಿ ಯಡಮೊಗ್ಗೆ  ಸಿದ್ದಾಪುರ  ಗ್ರಾಮ ಕುಂದಾಪುರ  ತಾಲೂಕು ಇವರ ತಂದೆ ಬಾಬು ನಾಯ್ಕ (60) ಇವರು ದಿನಾಂಕ 09/01/2023 ರಂದು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ ಚೀನಾಬೇರು ಎಂಬಲ್ಲಿ   ಭಾಸ್ಕರ  ಶೆಟ್ಟಿ ಇವರ  ಮನೆಯ ಕೃಷಿ ಕೆಲಸದ  ಬಗ್ಗೆ  ಹೋಗಿದ್ದು,   ನಂತರ  ಬೆಳಿಗ್ಗೆ 10:00  ಗಂಟೆಗೆ   ಅಡಿಕೆ  ತೋಟದಲ್ಲಿ ಇರುವ  ಅಡಿಕೆ  ಮರದಿಂದ ಅಡಿಕೆ ಕೊಯ್ಯುತ್ತಿರುವಾಗ ಅಕಸ್ಮಾತ ಆಗಿ ಅಡಿಕೆ  ಮರದಿಂದ  ಕಳಗಡೆ  ಬಿದ್ದು, ಗಂಭೀರ   ಗಾಯಗೊಂಡಿದ್ದು, ಚಿಕಿತ್ಸೆ  ಬಗ್ಗೆ  ಸಿದ್ದಾಪುರದ  ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಲ್ಲಿಂದ   ಕುಂದಾಪುರ  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಅಲ್ಲಿ  ಪ್ರಥಮ ಚಿಕಿತ್ಸೆ   ನೀಡಿ  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ ಉಡುಪಿ ಜಿಲ್ಲಾ  ಸರಕಾರಿ   ಆಸ್ಪತ್ರೆಗೆ  ಹೋಗಿದ್ದು.ಅಲ್ಲಿ  ಹೋಗುವ ಮೊದಲೆ  ದಾರಿ ಮದ್ಯದಲ್ಲಿ  ಬಾಬು ನಾಯ್ಕ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ  01/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜುಗಾರಿ ಪ್ರಕರಣ

  • ಕೋಟ: ದಿನಾಂಕ 10/01/2023 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿಯಿರುವ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ದೊರೆತ ವರ್ತಮಾನದಂತೆ ದಾಳಿ ನಡೆಸಿ ಇಸ್ಪಿಟು ಜುಗಾರಿ ಆಟ ಆಡುತ್ತಿದ್ದ 1) ಮಂಜುನಾಥ (31 ), 2) ಪಳನಿ ಕುಮಾರ್‌(31), 3) ಬಸವರಾಜ್‌(41), 4) ನಾಗರಾಜ್‌(46) ಇವರನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 4,350/- ಮತ್ತು 52 ಇಸ್ಪೀಟು ಎಲೆಗಳು & ಹಳೆಯ ಪೇಪರ್‌ ಒಂದನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ .

Last Updated: 11-01-2023 09:26 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080