ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ದಿನಾಂಕ  09/12/2022 ರಂದು ಪಿರ್ಯಾದಿ ರವೀಂದ್ರ ನಾಥ್ ಎನ್ ಶೆಟ್ಟಿ (65) ತಂದೆ: ದಿ. ನಂದಪ್ಪ ಶೆಟ್ಟಿ, ವಾಸ: ಸಪ್ನ ಕಮ್ಯುನಿಟಿ ಹಾಲ್‌ಎದುರು ಕೊಪ್ಪಲಂಗಡಿ ಮಲ್ಲಾರು ಗ್ರಾಮ ಇವರು ತನ್ನ ಹೆಂಡತಿ ಶ್ರೀಮತಿ ಸ್ವಪ್ನ ಆರ್ ಶೆಟ್ಟಿ (56) ರವರೊಂದಿಗೆ ಸ್ವಪ್ನ ರವರ ತಾಯಿ ಮನೆ ಕಾಪು ಪಡು ಗ್ರಾಮಕ್ಕೆ ಬಂದು  ವಾಪಾಸು ಸಂಜೆ 5:00 ಗಂಟೆಗೆ ಪಿರ್ಯಾದಿದರರು ಹಾಗೂ ಅವರ ಪತ್ನಿ  ಪಿರ್ಯಾದಿದಾರರ ಮನೆ ಕೊಪ್ಪಲಂಗಡಿಗೆ ರಾ ಹೆ 66 ಮಂಗಳೂರು ಉಡುಪಿ ಏಕಮುಖ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ  ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಪ್ಪಲಂಗಡಿ ಮಸೀದಿ ಬಳಿ ಪಿರ್ಯಾದಿದಾರರ ಮನೆಗೆ ಹೋಗಲು ಮಂಗಳೂರು –ಉಡುಪಿ ಏಕಮುಖ ರಸ್ತೆಯನ್ನು ದಾಟುತ್ತಿದ್ದಾಗ ಸಂಜೆ ಸುಮಾರು 6:00 ಗಂಟೆಗೆ ಕೆ.ಎ 51 9700 ನೇ ಬಸ್ಸು ಚಾಲಕ ಶ್ರೀನಿವಾಸ ಶೆಟ್ಟಿ ಎಂಬಾತನು ತನ್ನ ಬಾಬ್ತು ಬಸ್ಸನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದದನ್ನು ಕಂಡು ಪಿರ್ಯಾದಿದಾರರ ಹೆಂಡತಿ ಸ್ವಪ್ನ ರವರು ಗಾಬರಿಯಿಂದ ರಸ್ತೆಗೆ ಬಿದ್ದಿದ್ದು ಬಸ್ಸು ಚಾಲಕನು ಬಸ್ಸನ್ನು ನಿಲ್ಲಿಸದೇ ಸ್ವಪ್ನಳ ತಲೆಯ ಮೇಲೆ ಹಾಯಿಸಿದ್ದು, ಇದರಿಂದ ಸ್ವಪ್ನಳ ತಲೆ ಸಂಪುರ್ಣವಾಗಿ ಜಜ್ಜಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ.  ಅಪರಾಧ ಕ್ರಮಾಂಕ 133/2022 ಕಲಂ 279,  304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು, ಮಟಪಾಡಿ ಗ್ರಾಮದ  ಶಿವಕೃಪಾ  ಎಂಬ ಫಿರ್ಯಾದಿ ಎಂ. ಚಂದ್ರಶೇಖರ್‌ ನಾಯರಿ (51), ತಂದೆ: ಎಂ. ಮಹಾಬಲ ನಾಯರಿ, ವಾಸ: ಶಿವಕೃಪಾ, ಮಟಪಾಡಿ ಗ್ರಾಮ, ಇವರ ಮನೆಯ ಸಮೀಪ ವಾಸವಾಗಿರುವ ಅವರ ಚಿಕ್ಕಪ್ಪನ ಮಗನಾದ ಗೋಪಾಲ ಕೃಷ್ಣ ನಾಯರಿ (ಪ್ರಾಯ: 52 ವರ್ಷ) ಎಂಬವರು ಮದುವೆ ಆಗಿ ಒಬ್ಬ ಮಗನನ್ನು ಹೊಂದಿದ್ದು, ಅವರು ಕಳೆದ 10-12 ವರ್ಷಗಳ ಹಿಂದೆ ಹೆಂಡತಿಯನ್ನು ಬಿಟ್ಟು ತಾಯಿಯೊಂದಿಗೆ ವಾಸವಾಗಿದ್ದು, ಅವರು ಹೆಂಡತಿಯನ್ನು ಬಿಟ್ಟ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ವೈಧ್ಯರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಅವರ ತಾಯಿ ಬೆಂಗಳೂರಿಗೆ ಹೋಗಿದ್ದು, ಗೋಪಾಲ ಕೃಷ್ಣ ನಾಯರಿ ಅವರು ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲೆ ಒಬ್ಬರೇ ಇದ್ದು, ಅವರಿಗಿರುವ ಮಾನಸಿಕ ಖಿನ್ನತೆಯಿಂದ ದಿನಾಂಕ 09.12.2022 ರಂದು ಬೆಳಿಗ್ಗೆ 11:00 ಗಂಟೆಯಿಂದ  ಮಧ್ಯಾಹ್ನ 3:00 ಗಂಟೆಯ ಮಧ್ಯಾವಧಿಯಲ್ಲಿಮನೆಯ ರೂಮ್‌ ನ ಅಡ್ಡೆಗೆ ನೈಲಾನ್‌ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 64/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ದಾವಲಸಾಬ ಶ್ರೀ ಟಿ ವಿಜಯ ಕುಮಾರ ಎಂಬವರ ಬಾಡಿಗೆ ಶೆಡ್‌, ಇಂದ್ರಾಳಿ, ಶಿವಳ್ಳಿ ಗ್ರಾಮ , ಉಡುಪಿ ತಾಲೂಕು ಇವರು ಹಾಗೂ ಮೃತ ತಮ್ಮಣ್ಣ ಬೋರನಟ್ಟಿ ಪ್ರಾಯ: 23 ವರ್ಷ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿಯ ಶ್ರೀ ಟಿ ವಿಜಯ ಕುಮಾರ ಎಂಬವರ ಬಾಡಿಗೆ ಶೆಡ್‌ ನಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು ಈ ದಿನ ದಿನಾಂಕ: 09.12.2022 ರಂದು ಬೆಳಿಗ್ಗೆ 10:30 ಗಂಟೆಗೆ ಕೆಲಸಕ್ಕೆಂದು ಉಡುಪಿ ಗೆ ಹೋಗಿದ್ದು, ಮದ್ಯಾಹ್ನ 02:00 ಗಂಟೆಗೆ ಕೆಲಸ ಮುಗಿಸಿಕೊಂಡು ರೂಮಿಗೆ ಬಂದು ನೋಡಿದಾಗ ತಮ್ಮಣ್ಣ ಬೋರನಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೃತನು ದಿನಾಂಕ 09.12.2022 ರಂದು ಬೆಳಿಗ್ಗೆ 10.30 ಗಂಟೆಯಿಂದ ಮದ್ಯಾಹ್ನ 02.00 ಗಂಟೆಯ ನಡುವಿನ ಸಮಯದಲ್ಲಿ ಹಣದ ಅಡಚಣೆಯಿಂದಲೂ ಅಥವಾ ಇನ್ನಾವುದೋ ವೈಯಕ್ತಿಕ ಕಾರಣದಿಂದ ಅವರ ವಾಸವಿರುವ  ಶೆಡ್ಡಿನ ಮಾಡಿನ ಕಬ್ಬಿಣದ ಪಕ್ಕಾಸಿಗೆ ಕೇಬಲ್‌ ವೈಯರ್‌ ನಿಂದ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 43/2022 ಕಲಂ: 174 ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-12-2022 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080