ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/11/2022  ರಂದು ಸಂಜೆ ಸುಮಾರು 7:30 ಗಂಟೆಗೆ ಕುಂದಾಪುರ  ತಾಲೂಕಿನ, ಕಾವ್ರಾಡಿ  ಗ್ರಾಮದ ಕಂಡ್ಲೂರು ಪೇಟೆಯ ಬಳಿ ರಾಜ್ಯ ರಸ್ತೆಯಲ್ಲಿ, ಆಪಾದಿತ ವಿನಯ ಕುಮಾರ್‌ಎಂಬವರು KA-20-EM-5141ನೇ ಬೈಕನ್ನು ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು, ರಸ್ತೆಯ ದಕ್ಷಿಣ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತೋಷ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸಂತೋಷರವರ ತಲೆಗೆ ಒಳಜಖಂ ಗಾಯವಾಗಿ ಹತ್ತಿರದ ಕ್ಲಿನಿಕ್‌‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ದಿನಾಂಕ 08/11/2022 ರಂದು ಬೆಳಿಗ್ಗೆ ಸಂತೋಷರವರನ್ನು ಅವರ ಹೆಂಡತಿ ಕುಂದಾಪುರ ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಿ,  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ ರವರು ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 10/11/2022  ಬೆಳಿಗ್ಗೆ 09:12 ರಂದು ಗಂಟೆಗೆ ಮೃತಪಟ್ಟ ಈ ಬಗ್ಗೆ  ಡೆತ್‌ ಇಂಟಿಮೇಶನ್‌‌ ‌ನನ್ನು ದಿನಾಂಕ 10/11/2022 ರಂದು 11:30 ಗಂಟೆಗೆ ಠಾಣೆಯಲ್ಲಿ ಸ್ವೀಕರಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022  ಕಲಂ: 279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಕೃಷ್ಣಪೂಜಾರಿ (37) ತಂದೆ: ಪುಟ್ಟು ಪೂಜಾರಿ ವಾಸ: ಉಳ್ಳೂರು ಬೆಟ್ಟು, ಹಟ್ಟಿಕುದ್ರು, ಬಸ್ರೂರು ಗ್ರಾಮ ಕುಂದಾಪುರ ಇವರು ಬೆಂಗಳೂರಿನಲ್ಲಿ ಹೋಟೆಲ್‌ವ್ಯವಹಾರ ಮಾಡಿಕೊಂಡಿದ್ದು ದಿನಾಂಕ 07/11/2022 ರಂದು ಇವರ ಮನೆಯವರು ಪೋನ್‌ ಮಾಡಿ ತಂದೆ ಪುಟ್ಟು ಪೂಜಾರಿಯವರು ದಿನಾಂಕ:  07/11/2022 ರಂದು 10:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ತುಂಬಾ ಹೊತ್ತಾದರೂ ಮನೆಗೆ ವಾಪಾಸು ಬಾರದೇ ಇದ್ದುದರಿಂದ ಕೃಷ್ಣಪೂಜಾರಿ ರವರ ತಾಯಿಯು ಮಧ್ಯಾಹ್ನ 2:00 ಗಂಟೆಗೆ ದೈವದ ಮನೆಯ ಹತ್ತಿರ ಹೋಗಿ ನೋಡಿದಾಗ ಅಸ್ವಸ್ಥರಾಗಿದ್ದಂತೆ ಕಂಡು ಬಂದಿದ್ದು ಅವರಲ್ಲಿ ಏನಾಯಿತು ಎಂದು ಕೇಳಿದಾಗ ತಾನು ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದು ನಂತರ ಅವರನ್ನು ಚಿಕಿತ್ಸೆಗೆ ಕುಂದಾಪುರ ನ್ಯೂ ಮೆಡಿಕಲ್‌ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು ವಿಷಯ ತಿಳಿದು ಕೂಡಲೆ ಕೃಷ್ಣಪೂಜಾರಿ ರವರು ಊರಿಗೆ ಬಂದು ತಂದೆಯ ಆರೈಕೆ ಮಾಡಿಕೊಂಡಿದ್ದು ಆದರೆ ಪುಟ್ಟು ಪೂಜಾರಿ (72) ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 09/11/2022 ರಂದು 10:40 ಗಂಟೆಗೆ ಮೃತಪಟ್ಟಿರುತ್ತಾರೆ. ಪುಟ್ಟ ಪೂಜಾರಿಯವರು ವಿಪರೀತ ಮದ್ಯಪಾನ ಮಾಡುವ ಚಟದವರಾಗಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/11/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 2:00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್‌ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಗೆ ಪುಟ್ಟ ಪೂಜಾರಿಯವರು ಸ್ವಂದಿಸದೇ ಮೃತಪಟ್ಟಿದ್ದು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 32/2022 ಕಲಂ:174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಬಾಲಕೃಷ್ಣ ಕಾಮತ್ (69) ತಂದೆ: ದಿ|| ಬಡಿಯ ಕಾಮತ್ ವಾಸ: ಗುಂಡ್ಯಡ್ಕ ಹೌಸ್, ಕೊಡಿಬೆಟ್ಟು ಅಂಚೆ, ಕುದಿ – 82 ಗ್ರಾಮ ಉಡುಪಿ ಇವರು ದಿನಾಂಕ 31/10/2022 ರಂದು ಬೆಳಿಗ್ಗೆ  7 ಗಂಟೆಗೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ಪ್ರಸಾದ್ ಪೂಜಾರಿ, ರೂಪಾ ಮತ್ತು ಸುವಾಸಿನಿ ಪೂಜಾರಿಯವರು  ಸಮಾನ ಉದ್ದೇಶದಿಂದ ಬಾಲಕೃಷ್ಣ ಕಾಮತ್ ರವರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಮಾಡುತ್ತಿದ್ದ ಕೆಲಸಕ್ಕೆ ತಡೆಯನ್ನೊಡ್ಡಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಹಾಗೂ  ಬಾಲಕೃಷ್ಣ ಕಾಮತ್ ರವರನ್ನು ಉದ್ದೇಶಿಸಿ ನಿನ್ನ  ಕೈ ಕಾಲು ಮುರಿಯುತ್ತೇವೆ, ಯಾರು ತಡೆಯಲು ಬರುತ್ತಾರ ನೋಡುವ” ನಿನ್ನನ್ನು ಮತ್ತು ನಿನ್ನ ಮನೆಯವರನ್ನು  ಕೊಲ್ಲದೇ ಬಿಡುವುದಿಲ್ಲ” ಎಂದು ಅವಾಚ್ಯ  ಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ 74/2022 ಕಲಂ: 447, 341,323,354,504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 10-11-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080