Feedback / Suggestions

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/11/2022  ರಂದು ಸಂಜೆ ಸುಮಾರು 7:30 ಗಂಟೆಗೆ ಕುಂದಾಪುರ  ತಾಲೂಕಿನ, ಕಾವ್ರಾಡಿ  ಗ್ರಾಮದ ಕಂಡ್ಲೂರು ಪೇಟೆಯ ಬಳಿ ರಾಜ್ಯ ರಸ್ತೆಯಲ್ಲಿ, ಆಪಾದಿತ ವಿನಯ ಕುಮಾರ್‌ಎಂಬವರು KA-20-EM-5141ನೇ ಬೈಕನ್ನು ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು, ರಸ್ತೆಯ ದಕ್ಷಿಣ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತೋಷ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸಂತೋಷರವರ ತಲೆಗೆ ಒಳಜಖಂ ಗಾಯವಾಗಿ ಹತ್ತಿರದ ಕ್ಲಿನಿಕ್‌‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ದಿನಾಂಕ 08/11/2022 ರಂದು ಬೆಳಿಗ್ಗೆ ಸಂತೋಷರವರನ್ನು ಅವರ ಹೆಂಡತಿ ಕುಂದಾಪುರ ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಿ,  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ ರವರು ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 10/11/2022  ಬೆಳಿಗ್ಗೆ 09:12 ರಂದು ಗಂಟೆಗೆ ಮೃತಪಟ್ಟ ಈ ಬಗ್ಗೆ  ಡೆತ್‌ ಇಂಟಿಮೇಶನ್‌‌ ‌ನನ್ನು ದಿನಾಂಕ 10/11/2022 ರಂದು 11:30 ಗಂಟೆಗೆ ಠಾಣೆಯಲ್ಲಿ ಸ್ವೀಕರಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022  ಕಲಂ: 279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಕೃಷ್ಣಪೂಜಾರಿ (37) ತಂದೆ: ಪುಟ್ಟು ಪೂಜಾರಿ ವಾಸ: ಉಳ್ಳೂರು ಬೆಟ್ಟು, ಹಟ್ಟಿಕುದ್ರು, ಬಸ್ರೂರು ಗ್ರಾಮ ಕುಂದಾಪುರ ಇವರು ಬೆಂಗಳೂರಿನಲ್ಲಿ ಹೋಟೆಲ್‌ವ್ಯವಹಾರ ಮಾಡಿಕೊಂಡಿದ್ದು ದಿನಾಂಕ 07/11/2022 ರಂದು ಇವರ ಮನೆಯವರು ಪೋನ್‌ ಮಾಡಿ ತಂದೆ ಪುಟ್ಟು ಪೂಜಾರಿಯವರು ದಿನಾಂಕ:  07/11/2022 ರಂದು 10:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ತುಂಬಾ ಹೊತ್ತಾದರೂ ಮನೆಗೆ ವಾಪಾಸು ಬಾರದೇ ಇದ್ದುದರಿಂದ ಕೃಷ್ಣಪೂಜಾರಿ ರವರ ತಾಯಿಯು ಮಧ್ಯಾಹ್ನ 2:00 ಗಂಟೆಗೆ ದೈವದ ಮನೆಯ ಹತ್ತಿರ ಹೋಗಿ ನೋಡಿದಾಗ ಅಸ್ವಸ್ಥರಾಗಿದ್ದಂತೆ ಕಂಡು ಬಂದಿದ್ದು ಅವರಲ್ಲಿ ಏನಾಯಿತು ಎಂದು ಕೇಳಿದಾಗ ತಾನು ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದು ನಂತರ ಅವರನ್ನು ಚಿಕಿತ್ಸೆಗೆ ಕುಂದಾಪುರ ನ್ಯೂ ಮೆಡಿಕಲ್‌ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು ವಿಷಯ ತಿಳಿದು ಕೂಡಲೆ ಕೃಷ್ಣಪೂಜಾರಿ ರವರು ಊರಿಗೆ ಬಂದು ತಂದೆಯ ಆರೈಕೆ ಮಾಡಿಕೊಂಡಿದ್ದು ಆದರೆ ಪುಟ್ಟು ಪೂಜಾರಿ (72) ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 09/11/2022 ರಂದು 10:40 ಗಂಟೆಗೆ ಮೃತಪಟ್ಟಿರುತ್ತಾರೆ. ಪುಟ್ಟ ಪೂಜಾರಿಯವರು ವಿಪರೀತ ಮದ್ಯಪಾನ ಮಾಡುವ ಚಟದವರಾಗಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/11/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 2:00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್‌ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಗೆ ಪುಟ್ಟ ಪೂಜಾರಿಯವರು ಸ್ವಂದಿಸದೇ ಮೃತಪಟ್ಟಿದ್ದು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 32/2022 ಕಲಂ:174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಬಾಲಕೃಷ್ಣ ಕಾಮತ್ (69) ತಂದೆ: ದಿ|| ಬಡಿಯ ಕಾಮತ್ ವಾಸ: ಗುಂಡ್ಯಡ್ಕ ಹೌಸ್, ಕೊಡಿಬೆಟ್ಟು ಅಂಚೆ, ಕುದಿ – 82 ಗ್ರಾಮ ಉಡುಪಿ ಇವರು ದಿನಾಂಕ 31/10/2022 ರಂದು ಬೆಳಿಗ್ಗೆ  7 ಗಂಟೆಗೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ಪ್ರಸಾದ್ ಪೂಜಾರಿ, ರೂಪಾ ಮತ್ತು ಸುವಾಸಿನಿ ಪೂಜಾರಿಯವರು  ಸಮಾನ ಉದ್ದೇಶದಿಂದ ಬಾಲಕೃಷ್ಣ ಕಾಮತ್ ರವರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಮಾಡುತ್ತಿದ್ದ ಕೆಲಸಕ್ಕೆ ತಡೆಯನ್ನೊಡ್ಡಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಹಾಗೂ  ಬಾಲಕೃಷ್ಣ ಕಾಮತ್ ರವರನ್ನು ಉದ್ದೇಶಿಸಿ ನಿನ್ನ  ಕೈ ಕಾಲು ಮುರಿಯುತ್ತೇವೆ, ಯಾರು ತಡೆಯಲು ಬರುತ್ತಾರ ನೋಡುವ” ನಿನ್ನನ್ನು ಮತ್ತು ನಿನ್ನ ಮನೆಯವರನ್ನು  ಕೊಲ್ಲದೇ ಬಿಡುವುದಿಲ್ಲ” ಎಂದು ಅವಾಚ್ಯ  ಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ 74/2022 ಕಲಂ: 447, 341,323,354,504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

Last Updated: 10-11-2022 06:12 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080