ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 09/09/2021 ರಂದು ಪಿರ್ಯಾದಿದಾರರಾದ ಸುಕುಮಾರ (24), ತಂದೆ: ಶಿವ ವಾಸ: ದುರ್ಗಾಶ್ರೀ ಸತ್ಯಸಾರಾಮಣಿ ಕಾಲೋನಿ ದಿಡಿಂಬಿರಿ  ಗುಡ್ಡೆ ಬಜಗೋಳಿ, ಮುಡಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ರಾತ್ರಿ 8:45 ಗಂಟೆಗೆ ಕಾರ್ಕಳ ತಾಲೂಕು, ಮುಡಾರು  ಗ್ರಾಮದ ಬಜಗೋಳಿ ಕಂಬಳ ಕ್ರಾಸ್ ನಿಂದ   ಸ್ವಲ್ಪ ಮುಂದಕ್ಕೆ ರಸ್ತೆ  ಬದಿಯಲ್ಲಿ ಬಜಗೋಳಿ ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅವರ ಎದುರಿನಿಂದ ಅಂದರೆ ಬಜಗೋಳಿ ಪೇಟೆಯಿಂದ ಕಂಬಳ ಕ್ರಾಸ್  ಕಡೆಗೆ ಪಿರ್ಯಾದಿದಾರರ  ದೊಡ್ಡಮ್ಮನ  ಮಗ ರತ್ನಾಕರ  ರವರು ನಡೆದುಕೊಂಡು ಬರುತ್ತಿದ್ದವರಿಗೆ  ಕಂಬಳ ಕ್ರಾಸ್ ನಿಂದ ಬಜಗೋಳಿ ಪೇಟೆ ಕಡೆಗೆ KA-19- EP-4210 ನೇ ಮ್ಯಾಟ್ರಿಕ್ಸ್ ಹೋಂಡಾ  ದ್ವಿಚಕ್ರ ವಾಹನದ  ಸವಾರನು ಆತನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರತ್ನಾಕರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯಾದ ರತ್ನಾಕರ ಮತ್ತು  ದ್ವಿಚಕ್ರ ವಾಹನದ ಸವಾರ ರಸ್ತೆಗೆ  ಬಿದ್ದಿದ್ದು, ರತ್ನಾಕರರವರ  ಎಡಕಾಲಿಗೆ ಪೆಟ್ಟಾಗಿ ತಲೆಗೆ ಗುದ್ದಿದ್ದ ಒಳ  ಜಖಂ  ಆಗಿರುತ್ತದೆ. ವಾಹನ ಸವಾರನ ಹಣೆ ಮತ್ತು ಮುಖಕ್ಕೆ  ರಕ್ತ ಗಾಯವಾಗಿರುತ್ತದೆ.  ರತ್ನಾಕರರವರು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 08/09/2021 ರಂದು KA-20-V-4265 ಮೋಟಾರು ಸೈಕಲ್ ಸವಾರ ರಾಮನರೇಶ ಜಾಕೋ ಯಾದವ್ ತನ್ನ ಮೋಟಾರ್ ಸೈಕಲನ್ನು ಮಲ್ಪೆ ಜಂಕ್ಷನ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ 169 (ಎ) ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ 9:30 ಗಂಟೆಗೆ ಅಂಬಲಪಾಡಿ ಗ್ರಾಮದ ಪಂದುಬೆಟ್ಟು ದುರ್ಗಾಂಬ ಗ್ಯಾರೇಜ್ ಬಳಿ ತಲುಪುವಾಗ ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲದ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮಾತನಾಡದೇ ಇದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 10-09-2021 09:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080