ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ :ಪಿರ್ಯಾದಿದಾರರಾದ ಸನತ್ ಕುಮಾರ್ (57), ತಂದೆ: ರಮಾನಾಥ ಕೆ, ವಾಸ: ಸೌಭಾಗ್ಯ ನಿಲಯ, ಹಾಡಿಮನೆ, ಹವಾಲ್ದಾರ್ ಬೆಟ್ಟು, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ಮಗ ಅಗ್ನೀಶ್ ಕುಮಾರ್ (16) ರವರು ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವ್ಯಾಸಾಂಗ ಮಾಡುತಿದ್ದು, ದಿನಾಂಕ 09/08/2021 ರಂದು ಪರೀಕ್ಷೆಯ ಫಲಿತಾಂಶ ಬಂದಿರುತ್ತದೆ. ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂದಿರುತ್ತದೆ ಎಂಬ ಕಾರಣಕ್ಕಾಗಿ ಆತನು ಬೇಸರದಿಂದ ಇದ್ದು ಪಿರ್ಯಾದಿದಾರರು ದಿನಾಂಕ 10/08/2021 ರಂದು ಬೆಳಗ್ಗೆ 09:30 ಗಂಟೆಗೆ ಮನೆಯಿಂದ ಬೈಕ್ ರಿಪೇರಿ ಬಗ್ಗೆ ಕಾಬೆಟ್ಟಿಗೆ ಹೋಗಿ ವಾಪಾಸು 11:30 ಗಂಟೆಗೆ ಮನೆಗೆ ಬಂದಾಗ ಮನೆಯ ಗೇಟ್ ಹಾಗೂ ಬಾಗಿಲು ತೆರೆದುಕೊಂಡಿದ್ದು ಮನೆಯ ಓಳಗೆ ಹೋದಾಗ ಅಗ್ನೀಶ್ ಕುಮಾರ್ ದೇವರ ಕೋಣೆಯಲ್ಲಿ ಕಬ್ಬಿಣದ ಹುಕ್ ಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಕವಿತಾ (40), ಗಂಡ: ಲಕ್ಷ್ಮೀಶ ಹೆಬ್ಬಾರ, ವಾಸ: ಮಜ್ಜಿಗುಡ್ಡೆ ಕಬ್ಬಿನಾಲೆ ಗ್ರಾಮ ಹೆಬ್ರಿ ತಾಲೂಕು ಇವರ ಗಂಡ ಲಕ್ಷ್ಮೀಶ್ ಹೆಬ್ಬಾರ್ (54) ರವರು ದಿನಾಂಕ 10/08/2021 ರಂದು ಬೆಳಿಗ್ಗೆ 09:20 ಗಂಟೆಗೆ ಕಬ್ಬಿನಾಲೆ ಗ್ರಾಮದ ಮಜ್ಜಿಗುಡ್ಡೆ ಎಂಬಲ್ಲಿ ಅವರ ತಮ್ಮ ಬಾಲಕೃಷ್ಣ ಹೆಬ್ಬಾರ್ ರವರ ತೋಟದಲ್ಲಿದ್ದ ಅಡಿಕೆ ಮರ ಹತ್ತುವ ಕಬ್ಬಿಣದ ಏಣಿಯನ್ನು ಎತ್ತರದ ಜಾಗದಲ್ಲಿ ನಿಂತು ದರೆಯ ಮೇಲಿದ್ದ ಕಬ್ಬಿಣದ ಏಣಿಯನ್ನು ಕೊಂಡು ಹೋಗಲು ಕೈಯಿಂದ ಮೇಲಕ್ಕೆತ್ತಿದಾಗ ಏಣಿಯ ತುದಿಯು 22 ಅಡಿ ಎತ್ತರದಲ್ಲಿ ಹಾದು ಹೋಗಿರುವ ಹೆಚ್.ಟಿ. ವಿದ್ಯುತ್ ವಯರ್ ಗೆ ಅಕಸ್ಮಿಕವಾಗಿ ತಾಗಿದ ಪರಿಣಾಮ ಕಬ್ಬಿಣದ ಏಣಿಯಲ್ಲಿ ವಿದ್ಯುತ್ ಹರಿದು ಅವರ ಮೈ ಮೇಲೆ ಹರಿದ ಪರಿಣಾಮ ಅವರು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳಿಗ್ಗೆ 11:20 ಗಂಟೆಗೆ ಹೆಬ್ರಿ ರಾಘವೇಂದ್ರ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ದಾರಿ ಮದ್ಯೆ ಮೃತ ಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 26/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     
     

ಇತ್ತೀಚಿನ ನವೀಕರಣ​ : 10-08-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080