ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ: ಪಿರ್ಯಾದಿದಾರರಾದ ನರೇಂದ್ರ ಕಾಮತ್ (47), ತಂದೆ: ಸುರೇಂದ್ರ ಕಾಮತ್‌, ವಾಸ: ಮಾರುತಿ ನಿಲಯ, ಮಹಾಲಕ್ಷ್ಮೀ ಟೆಂಪಲ್ ಲೇನ್, ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು ಕಸಬಾ ಗ್ರಾಮದ ಶಾಂಭವಿ ಹೆರಿಟೇಜ್ ಕಟ್ಟಡದಲ್ಲಿ ಮೆಡಿಕಲ್ ಶಾಪ್ ಉದ್ಯಮ ಮಾಡಿಕೊಂಡಿದ್ದು, ದಿನಾಂಕ: 09/07/2022 ರಂದು ಸಂಜೆ 7:00 ಗಂಟೆಗೆ ಮೆಡಿಕಲ್ ಶಾಪ್ ನಲ್ಲಿರುವಾಗ ಕಾರ್ಕಳ ಮಾರ್ಕೆಟ್ ರಸ್ತೆಯ ಕಡೆಯಿಂದ ಪೆರ್ವಾಜೆ ರಸ್ತೆಯ ಕಡೆಗೆ KA-19-ML-7330 ನೇ ನೋಂದಣಿ ಸಂಖ್ಯೆಯ ಜೀಪ್ ಕಂಪೆನಿಯ WRANGLER ಮಾದರಿಯ ಕಾರನ್ನು ವಿಕಾಸ್ ವಿಕ್ಟರ್ ರೇಗೋ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಓಮ್ಮೆಲೆ ಬ್ರೇಕ್ ಹಾಕಿದ್ದರಿಂದ ಕಾರು ಆತನ ನಿಯಂತ್ರಣ ತಪ್ಪಿ ಮಗುಚಿ ರಸ್ತೆಯ ಬಲಬದಿಯಲ್ಲಿರುವ MESCOM ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ವಿಕಾಸ್ ವಿಕ್ಟರ್ ರೇಗೋ ರವರಿಗೆ ಮುಖದ ಬಲಬದಿ ತರಚಿದ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಜಿಲ್ಲಾ ಅಸ್ಪತ್ರೆ ಮಂಗಳೂರಿಗೆ ದಾಖಲು ಮಾಡಿರುವುದಾಗಿದೆ. ಈ ಅಪಘಾತದಿಂದ ಕಾರು ಜಖಂಗೊಂಡಿದ್ದು, MESCOM ವಿದ್ಯುತ್ ಇಲಾಖೆಗೆ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2022 ಕಲಂ: 279, 337, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 10/07/2022 ರಂದು ಬೆಳಿಗ್ಗೆ 11:00 ಗಂಟೆಗೆ ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಕೊಟೇಶ್ವರ- ಹಾಲಾಡಿ ರಸ್ತೆಯ ಅಂಶು ಮೆಡಿಕಲ್‌‌ ಬಳಿ, ಆಪಾದಿತ ವಿಷ್ಣುಮೂರ್ತಿ KA-20-EV-5769ನೇ ಬೈಕಿನಲ್ಲಿ ಅವರ ತಮ್ಮ ಸುದರ್ಶನ್‌ ಎಂಬುವವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹಾಲಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ರಾಜೀವ ಪೂಜಾರಿ ಎಂಬುವವರು ಹಾಲಾಡಿ ಕಡೆಗೆ ಹೋಗಲು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದ KA-20-EK-3994ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಾಜೀವ ಪೂಜಾರಿಯವರ ಬಲಕಾಲಿಗೆ ಮೂಳೆ ಮುರಿತವಾದ ಒಳಜಖಂ, ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ವಿಷ್ಣುಮೂರ್ತಿಯವರಿಗೆ ಮೂಗಿಗೆ, ಎಡಕಣ್ಣಿಗೆ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿದ್ದು, ರಾಜೀವ ಪೂಜಾರಿ ರವರು ಕೊಟೇಶ್ವರ ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಗೆ ಹೋಗಿರುತ್ತಾರೆ ಹಾಗೂ ಆಪಾದಿತ ವಿಷ್ಣುಮೂರ್ತಿ ರವರು ಕೊಟೇಶ್ವರ ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ : ಪಿರ್ಯಾದಿದಾರರಾದ ಆಶಾಲತಾ (42), ಗಂಡ: ವಿಕ್ಟರ್‌ ವಾಜ್‌, ವಾಸ: ಕೊಳಂಬೆ ಮಾರಿಕಟ್ಟೆ ಹತ್ತಿರ, 3 ಸೆಂಟ್ಸ್‌ ಮನೆ, ಕೊಳಂಬೆ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿಗೆ ಸಂಬಂಧಿಸಿದ ಮನೆಯ ಪಕ್ಕದಲ್ಲಿ ಇರುವ ಇನ್ನೊಂದು ಮನೆಯಲ್ಲಿ ವಾಸವಾಗಿರುವ ಅವರ ಸಂಬಂಧಿಯಾದ ಅನಿಲ್‌ (58) ಎಂಬುವವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿರುತ್ತಾರೆ. ದಿನಾಂಕ 08/07/2022 ರಂದು ಅನಿಲ್‌ ರವರು ಮದ್ಯ ಸೇವನೆ ಮಾಡಿ ಬ್ರಹ್ಮಾವರದಲ್ಲಿ ಬಿದ್ದಿದ್ದವರನ್ನು ಮನೆಗೆ ತಂದು ಬಿಟ್ಟಿದ್ದು, ಮನೆಯಲ್ಲಿ ಮಲಗಿದ್ದ ಅನಿಲ್‌ ರವರು ದಿನಾಂಕ: 09/07/2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 10/07/2022 ರಂದು ಬೆಳಿಗ್ಗೆ 07:30 ಗಂಟೆಯ ಮಧ್ಯಾವದಿಯಲ್ಲಿ ಮನೆಯ ಹಾಲ್‌ನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಅನಿಲ್‌ ರವರು ವಿಪರೀತ ಮದ್ಯ ಸೇವನೆಯಿಂದ, ಸರಿಯಾಗಿ ಊಟ ಮಾಡದೆ ನಿತ್ರಾಣದಲ್ಲಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 30/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-07-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080