ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಪಿರ್ಯಾಧಿದಾರರಾದ ಸುಬ್ರಹ್ಮಣ್ಯ ಖಾರ್ವಿ (33) ತಂದೆ; ದಿ. ನಾರಾಯಣ ಖಾರ್ವಿ, ವಾಸ; ಹುಂಡನಮನೆ, ಮಡಿಕಲ್ ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 10/06/2021 ರಂದು ಬೆಳಿಗ್ಗೆ 05:30 ಗಂಟೆಗೆ ಮನೆಯಿಂದ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆ ಹೋಗಿದ್ದು ವಿಪರೀತ ಗಾಳಿ ಮಳೆ ಇರುವುದರಿಂದ ಮೀನುಗಾರಿಕೆಗೆ ಹೋಗದೇ ವಾಪಾಸ್ ಮನೆಗೆ ಬರಲು ಲೋಕೇಶ್ ಖಾರ್ವಿರವರ ಮನೆಯಿಂದ ವೀರ ಮಾರುತಿ ಭಜನಾ ಮಂದಿರಕ್ಕೆ ಹೋಗುವ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು 06:00 ಗಂಟೆಗೆ ಹೊನ್ನುಮನೆ ಮೋಹನ ಖಾರ್ವಿರವರ ಮನೆಯ ಹತ್ತಿರ ತಿರುವುನಲ್ಲಿ ನಿಂತುಕೊಂಡಿರುವಾಗ ತಿರುವುನಿಂದ ಸ್ವಲ್ಪ ಮುಂದೆ ಮೋರಿಯ ಬಳಿ ರಸ್ತೆ ಎಡಬದಿಯಲ್ಲಿ ಇವರ ನೆರೆಕರೆಯವರಾದ ಉದಯ ಖಾರ್ವಿರವರು ನಡೆದುಕೊಂಡು ಹೋಗುತ್ತಿದ್ದು ಆಗ ವೀರ ಮಾರುತಿ ಭಜನಾ ಮಂದಿರದ ಕಡೆಯಿಂದ ಲೋಕೇಶ ಖಾರ್ವಿರವರ ಮನೆಯ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ಪಿಕಪ್ ವಾಹನದ ಚಾಲಕನು ಆತನ ಪಿಕಪ್ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಉದಯ ಖಾರ್ವಿರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಉದಯ ಖಾರ್ವಿರವರು ರಸ್ತೆಗೆ ಬಿದ್ದಿದ್ದು ಪಿಕಪ್ ವಾಹನವು ರಸ್ತೆಯ ಬದಿಯ ಚರಂಡಿಗೆ ಎಡ ಮಗ್ಗುಲಾಗಿ ಬಿದ್ದಿದ್ದು, ನಂತರ ಸುಬ್ರಹ್ಮಣ್ಯ ಖಾರ್ವಿ ರವರು ಹಾಗೂ ಲೋಕೇಶ್ ಖಾರ್ವಿರವರು ಸೇರಿ ಉಪಚರಿಸಿದ್ದು ಉದಯ ಖಾರ್ವಿರವರಿಗೆ ತಲೆಗೆ ಜಜ್ಜಿದ ಗಾಯವಾಗಿದ್ದು, ಗಾಯಗೊಂಡ ಉದಯ ಖಾರ್ವಿರವರನ್ನು ಒಂದು ಅಂಬುಲೆನ್ಸ್ ನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದ್ದಲ್ಲಿ ಪರೀಕ್ಷಿಸಿದ ವೈದ್ಯರು ಉದಯ ಖಾರ್ವಿರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಅಪಘಾತಪಡಿಸಿದ ಪಿಕಪ್ ವಾಹನದ ನಂಬರ್ ನೋಡಲಾಗಿ ಕೆಎ-20-ಎಎ-3907 ಆಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 08/06/2021 ರಂದು ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬಸ್ರಿ ಶಾಲೆಯ ಸಮೀಪ ಹಾದು ಹೋಗುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸರಕು ಸಾಗಾಣಿಕಾ ಲಾರಿ ನಂಬ್ರ KA-20-AB-0925 ನೇಯದರ ಚಾಲಕನು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ರಾಜರಾಮ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ರಿಕ್ಷಾ ನಂಬ್ರ KA-20-AA-2631 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಗೂಡ್ಸ್ ರಿಕ್ಷಾ ಡಾಮಾರು ರಸ್ತೆಯಲ್ಲಿ ಮಗುಚಿಬಿದ್ದು, ಗೂಡ್ಸ್ ರಿಕ್ಷಾ ಚಾಲಕನ ಕಿಬ್ಬೊಟ್ಟೆ, ಬೆನ್ನಿಗೆ ಮತ್ತು ಬೆನ್ನು ಮೂಳೆಗೆ ರಕ್ತಗಾಯವಾಗಿರುತ್ತದೆ, ಎಂಬುದಾಗಿ ದಿನೇಶ ಕಿಣಿ, (60) ತಂದೆ: ದಿ. ಪಾಂಡುರಂಗ ಕಿಣಿ, ವಾಸ: ಶ್ರೀ ಮಹಾಲಸ, ಜಾರ್ಕಳ, ಕುಕ್ಕುಂದೂರು ಗ್ರಾಮ ಮತ್ತು ಅಂಚೆ, ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 76/2021 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 10-06-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080