ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಪಡುಬಿದ್ರಿ: ಪಿರ್ಯಾದಿದಾರರಾದ ಅಬ್ದುಲ್ ಸಮೀರ್, ಪ್ರಾಯ: 38 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಮನೆ ನಂಬ್ರ 1-70-7, ಹನೇಹಳ್ಳಿ ಗ್ರಾಮ, ರಂಗನಕೆರೆ, ಬಾರ್ಕೂರು ಅಂಚೆ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ: 09/04/2022 ರಂದು ಅವರ ಹೆಂಡತಿಯ ಮಾವನ ಮಗನ KA-20-C-7816 ನಂಬ್ರದ ಇಕೋ ಕಾರಿನಲ್ಲಿ, ಮಂಗಳೂರಿನ ಕೋಟೆಕಾರ್‌‌ನಲ್ಲಿರುವ ಮಾವನನ್ನು ನೋಡಲು ಅವರ ಹೆಂಡತಿ ಹಾಗೂ ಮಕ್ಕಳೊಂದಿಗೆ ಮನೆಯಿಂದ ಹೊರಟು 14:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬೀಡು ತಲುಪಿ, ಅಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯ ಪೂರ್ವದ ಅಂಚಿನ ಮಣ್ಣು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಅವರ ಪರಿಚಯದ ಅನ್ವರ್ ಎಂಬುವವರಿಗಾಗಿ ಕಾಯುತ್ತಿರುವ ಸಮಯ ಸುಮಾರು 14:30 ಗಂಟೆಗೆ KA-12-MB-1990 ನೇ ನಂಬ್ರದ ಕಾರು ಚಾಲಕ ಜೀವನ್ ತನ್ನ ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ನಿಂತಿದ್ದ ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಕಾರು ಮುಂದೆ ಚಲಿಸಿ ಎಡಭಾಗಕ್ಕೆ ಮಣ್ಣು ರಸ್ತೆಗೆ ಮಗುಚಿ ಬಿದ್ದಿದ್ದು, ಡಿಕ್ಕಿ ಹೊಡೆದ ಕಾರು ಅಲ್ಲೇ ಇದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ನಿಂತಿರುತ್ತದೆ. ಅಪಘಾತದಿಂದ ಎರಡೂ ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದ ಪಿರ್ಯಾದಿದಾರರ ತಲೆ ಹಿಂಬದಿ, ಎಡ ಕಣ್ಣಿನ ಹುಬ್ಬಿನ ಬಳಿ ಗಾಯ, ಪಿರ್ಯಾದಿದಾರರ ಹೆಂಡತಿ ಆಯಿಶತ್ ಶಮೀರ ರವರ ಕುತ್ತಿಗೆ, ಬೆನ್ನಿಗೆ, ಕೈಗೆ, ಎದೆಗೆ ಗುದ್ದಿದ ನೋವಾಗಿದ್ದು, ಅವರ ಮಗ ಮೊಹಮ್ಮದ್ ಶಹೀರ್‌‌ ನಿಗೆಬಲಕೈ ಮೂಳೆ ಮುರಿತದ ಒಳಜಖಂ, 2 ನೇ ಮಗ ಮೊಹಮ್ಮದ್ ಶಮೀಲ್ ನಿಗೆ ಕೆನ್ನೆಗೆ ಮತ್ತು ತುಟಿಗ ಗಾಯವಾಗಿರುತ್ತದೆ. ಎದ್ರಿ ಕಾರಿನ ಚಾಲಕ ಜೀವನ್ ಹಾಗೂ ಕಾರಿನಲ್ಲಿದ್ದವರಿಗೂ ಪೆಟ್ಟಾಗಿದ್ದು, ಎಲ್ಲರೂ ಚಿಕಿತ್ಸೆಯ ಬಗ್ಗೆ ಮುಕ್ಕಾ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ :279, 337 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಬ್ರಹ್ಮಾವರ : ಪಿರ್ಯಾದಿದಾರರಾದ ಸಂದೇಶ್‌ ಶೆಟ್ಟಿ (51), ತಂದೆ: ವಿ.ಎಸ್‌ ಶೆಟ್ಟಿ, ವಾಸ: ವಿಲ್ಲಾ ನಂ 56, ಸಾಯಿ ರಾಧಾ ಗ್ರೀನ್‌ ವ್ಯಾಲ್ಯೂ, ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಲಕ್ಷ್ಮೀ ಸ್ಟೋನ್‌ ಕ್ರಶರ್‌ ಕಳೆದ 6 ತಿಂಗಳಿನಿಂದ ಬಂದ್‌ ಆಗಿ ಕ್ರಶರ್‌ಗೆ ಸಂಬಂಧಪಟ್ಟ ಯಂತ್ರೋಪಕರಣಗಳು ಅಲ್ಲಿಯೇ ಇದ್ದು, ಪಿರ್ಯಾದಿದಾರರು ಆಗಾಗ ಹೋಗಿ ನೋಡಿಕೊಂಡು ಬರುತ್ತಿರುವುದಾಗಿದೆ. ಕ್ರಶರ್‌ನಲ್ಲಿ ದಿನಾಂಕ: 25/03/2022 ರಂದು ಮಧ್ಯಾಹ್ನ 1:00 ಗಂಟೆಯಿಂದ ದಿನಾಂಕ 04/04/2022 ರಂದು ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕ್ರಶರ್‌ ಯಂತ್ರಕ್ಕೆ ಸಂಬಂಧಿಸಿದ 50 HP ABB ಮೋಟಾರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರ್‌ನ ಅಂದಾಜು ಮೌಲ್ಯ ರೂಪಾಯಿ. 60000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದ ವೆಂಕಟೇಶ್ ಆಚಾರ್ಯ (32) ,ತಂದೆ: ಮಂಜುನಾಥ ಆಚಾರ್ಯ, ವಾಸ: ನಾರಾಯಣ ಕೃಪಾ ಮುಂಡುಕೋಡು ಆಲೂರು ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕ ಶ್ರೀಮತಿ ಆಶಾ (34) ರವರು ತನ್ನ ಗಂಡ ಕೃಷ್ಣಯ್ಯ ಆಚಾರ್ಯ ರವರೊಂದಿಗೆ ಸುಮಾರು 2 ವರ್ಷಗಳಿಂದ ಬೈಂದೂರು ತಾಲೂಕು ಯಡ್ತರೆ ಗ್ರಾಮದ ರಿತೇಶ್ ನಾಟೇಕಾರ್ ರವರಿಗೆ ಸಂಬಂದಿಸಿದ ಮನೆಯಲ್ಲಿ ಬಾಡಿಗೆದಾರರಾಗಿ ವಾಸ ಮಾಡಿಕೊಂಡಿದ್ದು ಮನೆ ವಾರ್ತೆ ಹಾಗೂ ಟೈಲರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 10/04/2022 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರ ಅಕ್ಕನ ಗಂಡ ಕೃಷ್ಣಯ್ಯ ಆಚಾರ್ಯ ರವರು ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ವಾಪಾಸ್ಸು 10:45 ಗಂಟೆಗೆ ಮನೆಗೆ ಬಂದಾಗ ಆಶಾ ರವರು ಮನೆಯ ಉಪ್ಪರಿಗೆಯ ಜಂತಿಗೆ ಸೀರೆಯನ್ನು ಬಿಗಿದು ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದವರನ್ನು ಪಿರ್ಯಾದಿದಾರರ ಬಾವ ಕೃಷ್ಣಯ್ಯ ಆಚಾರ್ಯ ರವರು ಕೆಳಗಿಳಿಸಿ ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿದ್ದು, ಮೃತರು ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/04/2022 ರಂದು ಬೆಳಿಗ್ಗೆ 08:00 ಗಂಟೆಯಿಂದ ಬೆಳಿಗ್ಗೆ 10:45 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 10-04-2022 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080