ಅಭಿಪ್ರಾಯ / ಸಲಹೆಗಳು

.ಅಪಘಾತ ಪ್ರಕರಣ 

  • ಕುಂದಾಪುರ : ದಿನಾಂಕ 08/04/2021 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು, ಹಂಗಳೂರು ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದ ಕ್ರಾಸ್‌ ಹತ್ತಿರ, ರಸ್ತೆಯಲ್ಲಿ, ಆಪಾದಿತ ಪ್ರೆಸ್ಲಿ ಅಗಷ್ಟಿನ್‌ ಡೇಸಾ ಎಂಬುವವರು KA-20-EV-6278ನೇ ಸ್ಕೂಟರ್ ನ್ನು ಹಂಗಳೂರು ವಿನಾಯಕ ಟಾಕೀಸ್ ಕಡೆಯಿಂದ ಕೋಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ನರಸಿಂಹ (65), ತಂದೆ: ದಿ ವೆಂಕಪ್ಪ ಪೂಜಾರಿ, ವಾಸ: ಕೋಟಿಮನೆ, ಕೋಟ್ಯಾನ್‌‌‌ ಬೆಟ್ಟು, ಹಂಗಳೂರು ಗ್ರಾಮ, ಕುಂದಾಪುರ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನರಸಿಂಹ ರವರ ಎಡ,ಬಲ ಹುಬ್ಬಿಗೆ, ಹಣೆಗೆ ರಕ್ತಗಾಯ ಹಾಗೂ ಎದೆಗೆ ಒಳ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಆಪರಾಧ ಕ್ರಮಾಂಕ 45/2021 ಕಲಂ :279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ರತ್ನಾ (49), ಗಂಡ: ಮಹಾಬಲ, ವಾಸ: ಅಂಬಡೆಮಾರ್‌ ಮನೆ, ದುರ್ಗಾ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಪತಿ ಮಹಾಬಲ (55) ಇವರು ಬಿಪಿ, ಥೈರಾಡ್‌ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 09/04/2021 ರಂದು ಕಾರ್ಕಳ ತಾಲೂಕು ದುರ್ಗಾ ಗ್ರಾಮದ ತೆಂಗಿನ ಹಿತ್ಲು ಎಂಬಲ್ಲಿ ಇರುವ ದಿನೇಶ್‌ ಶೆಟ್ಟಿಯವರ ಮನೆಗೆ ಕೆಲಸಕ್ಕೆ ಹೋದವರು ಬೆಳಿಗ್ಗೆ 09:30 ಗಂಟೆಗೆ ತಲೆತಿರುಗುತ್ತದೆ ಎಂದು ತೋಟದ ಕಡೆ ಹೋದವರು ವಾಪಾಸ್ಸು ಬಾರದಾಗ ಹುಡುಕಾಡುತ್ತಾ ಹೋದಾಗ ಬೆಳಿಗ್ಗೆ 11:00 ಗಂಟೆಗೆ ದಿನೇಶ್ ಶೆಟ್ಟಿರವರ ತೋಟದ ತೋಡಿನ ಬಳಿ ಮಹಾಬಲ ರವರ ಮೃತ ಶರೀರವು ದೊರೆತಿದ್ದು ಮಹಾಬಲ ರವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ 

  • ಕುಂದಾಪುರ : ಪಿರ್ಯಾದಿದಾರರಾದ ನಾಗರಾಜ ಎಂ ನಾಯ್ಕ್, (53), ತಂದೆ: ಮಂಜಪ್ಪ ನಾಯ್ಕ್, ವಾಸ: ಹಾಮಕ್ಕಿ ಕ್ರಾಸ್ ಕೂಳಿಮನೆ, ಕೆಳಗಿನ ಇಡಗುಂಜಿ, ಹೊನ್ನಾವರ ತಾಲೂಕು, ಉತ್ತರಕನ್ನಡ ಜಿಲ್ಲೆ ಇವರು ದಿನಾಂಕ 07/04/2021 ರಂದು ರಾತ್ರಿ 8.15 ಗಂಟೆ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ಸು ನಂಬ್ರ KA-19-F-3461 ನ್ನು ಕುಂದಾಪುರದಿಂದ ಮೈಸೂರಿಗೆ ಚಲಾಯಿಸಿಕೊಂಡು ಹೋಗಲು ಕುಂದಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ತಂದು ನಿಲ್ಲಿಸಿದಾಗ ಕೆ.ಎಸ್.ಆರ್.ಟಿ.ಸಿ ಕುಂದಾಪುರ ಡಿಪೋದ ಚಾಲಕನಾಗಿರುವ ಸಹದ್ಯೋಗಿ ರವಿ ಎಂಬುವವರು ಪಿರ್ಯಾದಿದಾರರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 10-04-2021 08:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080