ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪಾಂಡುರಂಗ ಎಮ್ ಚಂದನ್ (38), ತಂದೆ: ಮೋಹನ ಮೊಗವೀರ , ವಾಸ: ಹಾವಳಿ ಮನೆ, ಹೊಸಹಿತ್ಲು ,ನಾಗೂರು ,ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರು ನಾಗೂರು ಗೋಪಾಲಕೃಷ್ಣ ಕಲಾ ಮಂದಿರದ ಬಳಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ 08/03/2022 ರಂದು ಸಂಜೆ 07:05 ಗಂಟೆಗೆ ಪಿರ್ಯಾದಿದಾರರು ಅಂಗಡಿಯ ಎದುರುಗಡೆ ನಿಂತುಕೊಂಡಿರುವಾಗ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಸಂಘದ ಎದುರುಗಡೆ ಪಿರ್ಯಾದಿದಾರರ ಪರಿಚಯದ ಗಣೇಶ ಐತಾಳರವರು ಪೂರ್ವ ಬದಿಯ ರಸ್ತೆಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಅವರ ಮನೆ ಕಡೆಗೆ ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಕುಂದಾಪುರದ ಕಡೆಗೆ ಒಂದು  ಕಾರು ಚಾಲಕನು ಆತನ  ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ಗಣೇಶ ಐತಾಳರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಅದರ ಪರಿಣಾಮ ಗಣೇಶ ಐತಾಳರವರು ಮಣ್ಣು ರಸ್ತೆಯಲ್ಲಿ ಬಿದ್ದಿದ್ದು ಪಿರ್ಯಾದಿದಾರರು ಅಲ್ಲಿಗೆ ಹೋಗಿ  ಎತ್ತಿ ಉಪಚರಿಸಿದ್ದು ಗಣೇಶ ಐತಾಳರವರಿಗೆ ಬಲ ಬದಿ ಕಾಲಿಗೆ ರಕ್ತ ಗಾಯವಾಗಿರುವುದರಿಂದ  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ನಿತೀನ್ ಜೆ. ಸಾಲ್ಯಾನ್ (39), ತಂದೆ: ದಿ. ಜಗನ್ನಾಥ ಸಾಲ್ಯಾನ್, ವಾಸ:”ಶ್ರೀ ಬಾಲಾಜಿ” ತೇಂಪ ಬಾಕ್ಯಾರ್ ಉದ್ಯಾವರ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ದಿನಾಂಕ 09/03/2022  ರಂದು  ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರು ಊಟ ಮಾಡಿ  ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ ಉದ್ಯಾವರ ಗ್ರಾಮದ  ಬೊಳ್ಜೆ ಗರಡಿ ಸಮೀಪದ ಸ್ಥಳೀಯರೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ಬೊಳ್ಜೆ ಗರಡಿ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ  ಒಂದು ಗಂಡಸಿನ ಶವವು  ಬಿದ್ದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಅಪರಿಚಿತ ಗಂಡಸಿನ ಶವವು  ರೈಲ್ವೆ ಹಳಿಯಲ್ಲಿ  ತಲೆ ಒಂದು ಕಡೆ, ಮುಂಡ ಒಂದು ಕಡೆ,  ಕಾಲುಗಳು ಒಂದೊಂದು ಕಡೆ, ತುಂಡು ತುಂಡಾಗಿ ಬಿದ್ದಿರುವುದು   ಕಂಡು ಬಂದಿದ್ದು,  ವ್ಯಕ್ತಿಯ ಮುಖವನ್ನು ಪರಿಶೀಲಿಸಿ ನೋಡಲಾಗಿ ಆತನು ಪಿರ್ಯಾದಿದಾರರಿಗೆ ಹಾಗೂ ಅಲ್ಲಿ ಸೇರಿದ ಸ್ಥಳಿಯರಿಗೆ ಯಾರಿಗೂ ಕೂಡ  ಆತನ  ಪರಿಚಯವಾಗಿರುವುದಿಲ್ಲ. ಆತನು ಸುಮಾರು 60-65  ವರ್ಷದ ಪ್ರಾಯದವರಾಗಿದ್ದು, ದಿನಾಂಕ 09/03/2022 ರಂದು ಬೆಳಿಗ್ಗೆ 8:00 ಗಂಟೆಯಿಂದ 12:00 ಗಂಟೆಯ ಮದ್ಯಾವಧಿಯಲ್ಲಿ ರೈಲ್ವೆ ಹಳಿಯಲ್ಲಿ ನೆಡೆದುಕೊಂಡು ಹೋಗುವಾಗ ಯಾವುದೋ ರೈಲು ಡಿಕ್ಕಿ ಹೊಡೆದು ಅಥವಾ ಚಲಿಸುತ್ತಿರುವ ರೈಲಿಗೆ  ತಲೆಕೊಟ್ಟು ಆತ್ಮಹತ್ಯೆ  ಮಾಡಿಕೊಂಡು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-03-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080