ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 09/01/2023  ರಂದು  ಮಧ್ಯಾಹ್ನ 3:00  ಗಂಟೆಗೆ, ಕುಂದಾಪುರ  ತಾಲೂಕಿನ, ಕಸಬಾ   ಗ್ರಾಮದ  ಮೀನು ಮಾರ್ಕೆಟ್‌ರಸ್ತೆಯ, ಶ್ರೀ ನಾಗ ಬೊಬ್ಬರ್ಯ  ದೇವಸ್ಥಾನದ ಬಳಿ ರಸ್ತೆಯಲ್ಲಿ , ಆಪಾದಿತ ರೋಹನ್‌ ‌ಹವಲ್ದಾರ್‌ ರವರು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದ MH-04-LH-6289ನೇ ಕಾರನ್ನು ಯಾವುದೇ  ಸೂಚನೆ ನೀಡದೇ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ  ಬಲಬದಿಗೆ ತಿರುಗಿಸಿ, ಹಳೇ ಆದರ್ಶ ಆಸ್ಪತ್ರೆ ಕಡೆಯಿಂದ ಕುಂದಾಪುರ ಪೇಟೆ ಕಡೆಗೆ ಪಿರ್ಯಾದಿದಾರರಾದ   ಕು. ಪ್ರೀತಿಕಾ ಡಿಸೋಜಾ (19), ತಂದೆ: ಪೀಯೂಸ್‌ ಡಿಸೋಜಾ,  ವಾಸ:  ಹೆಗ್ಗೋಟ ತೋಟ,  ಆನೆಗಳ್ಳಿ ಗ್ರಾಮ, ಕುಂದಾಪುರ ತಾಲೂಕು  ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ  KA-19-ES-3087 TVS Jupiter ಸ್ಕೂಟರ್‌‌‌ಗೆ  ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ  ಒಳನೋವು ಹಾಗೂ ಬಲಕೈ, ಬಲಭುಜಕ್ಕೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಅಜೆಕಾರು: ಪಿರ್ಯಾದಿದಾರರಾದ ಅಶೋಕ ಪೂಜಾರಿ (39), ತಂದೆ: ದಾದು ಪೂಜಾರಿ, ವಾಸ: ನಂದಾರು ದರ್ಖಾಸು ಮನೆ, ಮರ್ಣೇ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 09/01/2023 ರಂದು ಬೆಳಿಗ್ಗೆ 10:30 ಗಂಟೆಗೆ  ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ, ಅಂಗಡಿ ಎದುರಿನಲ್ಲಿ ಹಾದು ಹೋಗು ಹೋಗುವ ಮರ್ಣೆ ಗ್ರಾಮದ ಕಡ್ತಲ ರಸ್ತೆಯ ಗುಡ್ಡೆಯಂಗಡಿ ತಿರುವಿನಲ್ಲಿ ವಾಹನ ಡಿಕ್ಕಿಯಾದ ಶಬ್ದ ಕೇಳಿದ್ದು, ಪಿರ್ಯಾದಿದಾರರು ಹೋಗಿ ನೋಡಲಾಗಿ, ಕಾಡುಹೊಳೆ ಕಡೆಯಿಂದ ಕಡ್ತಲ ಕಡೆಗೆ ಆನಂದ ಕೊರಗ ಎನ್ನುವವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಪರಿಚಯದ ಸುಂದರ ನಾಯ್ಕ್ ರವರ KA-20-EP-2404 ನೇ ಹೋಂಡಾ ಆಕ್ಟಿವಾ ಸ್ಕೂಟರಿಗೆ ಕಡ್ತಲ ಕಡೆಯಿಂದ ಬಂದ KA-20-Z-3839 ನೇ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ಸುಂದರ ನಾಯ್ಕ್ ಹಾಗೂ ಸಹಸವಾರನಾದ ಆನಂದ ಕೊರಗ ಎಂಬುವವರು ರಸ್ತೆಯ ಎಡಬದಿಗೆ ಬಿದ್ದಿದ್ದು, ಅವರನ್ನು ಉಪಚರಿಸಿ ನೋಡಲಾಗಿ ಇಬ್ಬರಿಗೂ ತಲೆ ಭಾಗಕ್ಕೆ ರಕ್ತಗಾಯ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತದಿಂದ KA-20-EP-2404 ನೇ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದಲ್ಲದೇ,  KA- 20-Z-3839 ನೇ ಕಾರಿನ ಮುಂಭಾಗ ಮತ್ತು ಬಲಭಾಗ ಜಖಂಗೊಂಡಿರುತ್ತದೆ.  ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  
  • ಪಡುಬಿದ್ರಿ: ಪಿರ್ಯಾದಿದಾರರಾದ ಎಂ ಪಿ ಮೋಯಿದಿನಬ್ಬ (57), ತಂದೆ: ದಿ. ಅಬ್ದುಲ್ ಖಾದರ್,  ವಾಸ: ಮಸಿದಿ ಬಳಿ, ಪಡು ಇನ್ನಾ ಅಂಚೆ , ಇನ್ನಾ ಗ್ರಾಮ ಕಾರ್ಕಳ ತಾಲೂಕು ಇವರು ಸಮಾಜ ಸೇವಕನಾಗಿ ಕೆಲಸ ಮಾಡುತ್ತಿದ್ದು,  ದಿನಾಂಕ 09/01/2023 ರಂದು ಪಿರ್ಯಾದಿದಾರರ ಮೊಮ್ಮಗ ಮುಹಮ್ಮದ್ ಇಹಾನ್ 9 ವರ್ಷ ಬೆಳ್ಮಣ್ಣು ಶಾಲೆಗೆ ಹೋಗಲು ಪಲಿಮಾರು ಗ್ರಾಮದ ಸುಭಾಸ್ ನಗರ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ಬೆಳಗ್ಗೆ 08:30 ಗಂಟೆಗೆ ಶಾಬಾನ್ KA-19-EP-8471  ನೇ ನಂಬ್ರದ  ಹೋಂಡಾ ಆಕ್ಟಿವಾ ದ್ವಿಚಕ್ರ  ವಾಹನದಲ್ಲಿ  ಹಿಂದುಗಡೆ ಕುಳಿತು, ಅಪೀಫಾಳಿಗೆ  KA-19-EP-8471   ಹೋಂಡಾ ಆಕ್ಟಿವಾ ದ್ವಿಚಕ್ರ  ವಾಹನ ಚಲಾಯಿಸಲು ನೀಡಿದ್ದು, ಕಾನೂನು ಸಂಘರ್ಷಕ್ಕೊಳಗಾದ ಬಾಲಕಿ ಅಫೀಫಾಳು ದ್ವಿಚಕ್ರ ವಾಹನವನ್ನು ಇನ್ನಾ ಕೊರಗರ ಕಾಲನಿ ರಸ್ತೆಯಿಂದಾಗಿ ಸುಭಾಸ್ ನಗರಕ್ಕೆ ಅತೀವೇಗ ಹಾಗೂ ನಿರ್ಲಕ್ಷವಾಗಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮುಹಮ್ಮದ್ ಇಹಾನ್ ನಿಗೆ ಡಿಕ್ಕಿ ಹೊಡೆದ ಪರಿಣಾಮ ಮುಹಮ್ಮದ್ ಇಹಾನ್ ಕೆಳಗೆ ಬಿದ್ದು ಆತನ ಮುಖಕ್ಕೆ, ಕಾಲಿಗೆ, ಎಡಕೈಗೆ ಗಾಯ ಉಂಟಾದವನನ್ನು, ಅಪಘಾತ ಕಂಡ ರಿಕ್ಷಾ ಚಾಲಕ ಟಿ ಉಸ್ಮಾನ್ ಎಂಬವರು ಗಾಯಾಳುವನ್ನು ಪಿರ್ಯಾದಿದಾರರ ಮನೆಗೆ ಕರೆದುಕೊಂಡು ಬಂದು ಅಪಘಾತದ ವಿಚಾರವನ್ನು ತಿಳಿಸಿದ್ದು, ಪಿರ್ಯಾದುದಾರರು ಗಾಯಾಳುವನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆ ತಂದು ರೋಗಿಯಾಗಿ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023, ಕಲಂ: 279, 337 ಐಪಿಸಿ ಮತ್ತು 3(1) R/w 181 ಮೋ.ವಾ. ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರಾಜೇಶ್ ವಿಲ್ಸನ್ ಡಿಸೋಜ (43), ತಂದೆ : ಲಾಜರಸ್ ಡಿಸೋಜ,  ವಾಸ: ಡೋನ್ ಬಿಸ್ಕೋ ಮನೆ ಪೆರ್ನಾಲು  ಸೂಡ  ಗ್ರಾಮ,ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ಲಾಜರಸ್ ಡಿಸೋಜ  (78 ) ಇವರಿಗೆ 2 ತಿಂಗಳ ಹಿಂದೆ ಪಾರ್ಶ್ವವಾಯು ಹಾಗೂ ಸರ್ಪಸುತ್ತು ಆಗಿದ್ದು,  ಈ  ಬಗ್ಗೆ ಉಡುಪಿ ಟಿ ಎಂ ಎ ಪೈ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಜರಸ್ ಡಿಸೋಜ ರವರು ಅನಾರೋಗ್ಯ ಕಾರಣ ಜೀವನದಲ್ಲಿ  ಮನನೊಂದು ದಿನಾಂಕ 09/01/2023 ರಂದು 07:30 ಗಂಟೆಯಿಂದ 16:30 ಗಂಟೆಯ ನಡುವಿನ ಅವಧಿಯಲ್ಲಿ ಗಣೇಶ್ ಆಚಾರ್ಯ ಎಂಬುವವರ ಜಾಗದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ  07/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಪವನ್ ಪೂಜಾರಿ(21), ತಂದೆ : ಬೋಜ ಎಂ ಪೂಜಾರಿ,  ವಾಸ: ನಿತ್ಯಾನಂದ ನಿಲಯ ತಿಲಕನಗರ ಸಚ್ಚರೀಪೇಟೆ ಅಂಚೆ ಮುಂಡ್ಕೂರು , ಗ್ರಾಮ,ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಾಯಿ ಶ್ರೀಮತಿ ಸುಮತಿ (56) ಇವರು  10 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಎ ವಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖ ಆಗದ ಕಾರಣ ಮನನೊಂದು  ದಿನಾಂಕ 09/01/2023 ರಂದು 14:00 ಗಂಟೆಯಿಂದ 15:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಶೌಚಾಲಯದ ಪಕ್ಕಾಸಿಗೆ ನೈಲಾನ್ ಹಗ್ಗದಿಂದಕುತ್ತಿಗೆಗೆ ನೇಣು ಬಿಗಿದುಕೊಮಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ಪಿರ್ಯಾದಿದಾರರಾದ ಸದಾಶಿವ ಶೆಟ್ಟಿ (60), ತಂದೆ: ನಾಗಯ್ಯ ಶೆಟ್ಟಿ, ವಾಸ: ಅಸೋಡು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 09/01/2023 ರಂದು ಮಧ್ಯಾಹ್ನ 02:10 ಗಂಟೆಗೆ ಸೊಪ್ಪು ತರಲಿಕ್ಕೆ ಹಾಡಿಗೆ ಹೋಗುವಾಗ ಮನೆಯ ಎದುರಿನ ಬಾವಿಯಲ್ಲಿ ದೇವಕಿ ಶೆಡ್ತಿ(58) ರವರು ಕವುಚಿ ಬಿದ್ದಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು. ಕೂಡಲೆ ಸುತ್ತಮುತ್ತಲಿನ ಮನೆಯವರನ್ನು  ಕರೆಯಿಸಿ ನೋಡಿದಾಗ ದೇವಕಿ ಶೆಡ್ತಿ ರವರ ತಾಯಿ ಗುಲಾಬಿ ಶೆಡ್ತಿ(85) ರವರು ಕೂಡಾ ಬಾವಿಯಲ್ಲಿ ಮುಳುಗಿರುವುದು ಕಂಡು ಬಂದಿರುತ್ತದೆ. ನಂತರ ಬಾವಿಯ ಬದಿಯಲ್ಲಿ ನೋಡಿದಾಗ ಕಾಲು ಜಾರಿದ ಗುರುತು ಕಂಡು ಬಂದಿದ್ದು, ಗುಲಾಬಿ ಶೆಡ್ತಿರವರು ಪ್ರಾಯಸ್ಥರಾಗಿದ್ದು ಸರಿಯಾಗಿ ಕಣ್ಣು ಕಾಣಿಸದೇ ಇದ್ದು. ಮದ್ಯಾಹ್ನ ಸಮಯ ಗುಲಾಬಿ ಶೆಡ್ತಿರವರು ಆಕಸ್ಮಿಕವಾಗಿ ಕಣ್ಣು ಕಾಣಿಸದೇ ನೀರಿಗೆ ಬಿದ್ದಿದ್ದು ಅವರನ್ನು ರಕ್ಷಿಸಲು ಅವರ ಮಗಳು ದೇವಕಿ ಶೆಡ್ತಿರವರು ಪ್ರಯತ್ನಿಸಿದಾಗ ಅವರು ಕೂಡಾ ಆಯತಪ್ಪಿ ನೀರಿಗೆ ಬಿದ್ದು ತಾಯಿ ಮಗಳು ಇಬ್ಬರು ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ 09/01/2023 ರಂದು ಗಂಗೊಳ್ಳಿ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ವಿನಯ ಕೊರ್ಲಹಳ್ಳಿ ರವರು ರೌಂಡ್ಸ್‌ನಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಓರ್ವ ವ್ಯಕ್ತಿ ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ  ಸ್ಥಳಕ್ಕೆ  ಹೋಗಿ  ಪರಿಶೀಲಿಸಲಾಗಿ ಓರ್ವ ವ್ಯಕ್ತಿ ಕುಳಿತು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಜಮಾಲುದ್ದಿನ್ (28) ಎಂಬುವುದಾಗಿ ತಿಳಿಸಿದ್ದು, ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 10-01-2023 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080