ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ವಿನೋದ (47) ತಂದೆ: ಶ್ರೀಧರ್ ವಾಸ: ಶ್ರೀ ದುರ್ಗಾಂಬಿಕೆ. ಪಡುಮುಂಡು ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲ್ಲೂಕು, ಉಡುಪಿ ಇವರ ಮಾವನಾದ ನರಸಿಂಹ (60) ಎಂಬವರು ದಿನಾಂಕ 10/01/2022 ರಂದು ಬೆಳಿಗ್ಗೆ 8:00 ಗಂಟೆಗೆ ಇವರ ಮನೆಗೆ ಬಂದಿದ್ದು, ವಿನೋದ ರವರು ಅವರಿಗೆ ಊಟ ಹಾಕಿದ ನಂತರ ನರಸಿಂಹರವರು ಮನೆಯ ಹೊರಗೆ ಕುಳಿತಿದ್ದವರು ಬೆಳಿಗ್ಗೆ ಸಮಯ ಸುಮಾರು 10:00 ಗಂಟೆಗೆ ಒಮ್ಮೇಲೆ ಮನೆಯ ಹೊರಗೆ ಇರುವ ಆವರಣವಿಲ್ಲದ ಬಾವಿಗೆ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಇವರು ವಿಪರಿತ ಕುಡಿತದ ಚಟಹೊಂದಿದ್ದು ಅಲ್ಲದೇ ಯಾವಾಗಲೂ ಸಹ ಮನೆಯಲ್ಲಿ ತಾನು ಸಾಯುತ್ತೆನೆಂದು ಹೇಳುತ್ತಿದ್ದು ಇದೇ ಕಾರಣದಿಂದ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತರ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ, ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಸುಚಿತ್ರ, (38) ತಂದೆ: ಅಚ್ಯುತ ಆಚಾರ್ಯ,  ವಾಸ: ನಂ.203, ಸನ್ ಶೈನ್ ರೆಸಿಡೆನ್ಸಿ, ಕಟ್ಟಿಂಗೇರಿ ಗ್ರಾಮ, ಕಾಪು ತಾಲೂಕು ಇವರ ತಾಯಿ ಶೋಭಾ ಆಚಾರ್ಯ (68) ರವರು ದಿನಾಂಕ 20/10/2019 ರಂದು ತನ್ನ ಗಂಡ ಅಚ್ಯುತ ಆಚಾರ್ಯರವರು ಕೆಎ-20 ಎಎಲ್- 7602 ನೇ ಎಕ್ಸೆಲ್ ಮೋಟಾರು ಸೈಕಲ್ ನಲ್ಲಿ ಸಹ ಸವಾರಳಾಗಿ ಕುಳಿತು ಮಟ್ಟಾರು ನಿಂದ ನಾಲ್ಕುಬೀದಿ ಕಡೆಗೆ ಬಂದು ಮನೆ ಕಡೆ ಹೋಗುವರೇ ಮೋಟಾರು ಸೈಕಲ್ ನ್ನು ಸೂಚನೆ ನೀಡಿ ನಿಂತುಕೊಂಡಿರುವಾಗ ಪಳ್ಳಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ  ಕೆಎ-20 ಇಎ-5721 ನೇದರ ಮೋಟಾರು ಸೈಕಲ್ ಸವಾರ ನವೀನ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು ಬಂದು ತನ್ನ ತಂದೆಯವರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ತಂದೆಯವರಿಗೆ ತರಚಿದ ಗಾಯ ಹಾಗೂ ತಾಯಿಯವರಿಗೆ ತಲೆಗೆ ತೀವ್ರತರಹದ ಗಾಯವಾಗಿರುತ್ತದೆ. ಈ ಘಟನೆ ಬಗ್ಗೆ ತಂದೆಯವರು ನೀಡಿದ ದೂರಿನಂತೆ ಪ್ರಕರಣ ದಾಲಾಗಿರುತ್ತದೆ. ನಂತರ ತನ್ನ ತಾಯಿ ಆದರ್ಶ ಆಸ್ಪತ್ರೆಯಲ್ಲಿ ಆರು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದು, ಮನೆಯಲ್ಲಿ ಆರೈಕೆಯಲ್ಲಿದ್ದು, ಹೈದರಾಬಾದ್ ಕೇರ್ ಆಸ್ಪತ್ರೆಯಲ್ಲಿ ಐದು ದಿನಗಳ ಚಿಕಿತ್ಸೆ ಪಡೆದಿದ್ದು, ಆ ಸಮಯ  ತನ್ನ ತಾಯಿಯವರು ತಲೆಗೆ ಆದ ಗಾಯದಿಂದ ಚೇತರಿಕೆಯಾಗದೇ ನೆನಪು ಶಕ್ತಿ ಇಲ್ಲದೇ ಸರಿಯಾಗಿ ಮಾತನಾಡುತ್ತಿರಲಿಲ್ಲ. ನಂತರವೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ, ಮನೆಯಲ್ಲಿ ಆರೈಕೆಯಲ್ಲಿದ್ದು, ದಿನಾಂಕ 10/01/2022 ರಂದು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ತಾಯಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 20/10/2019 ರಂದು ಮದ್ಯಾಹ್ನ 02.30 ಗಂಟೆಗೆ ತನ್ನ ತಾಯಿ ಶೋಭಾ ಆಚಾರ್ಯರವರಿಗೆ ಆದ ಅಫಘಾತದಿಂದ ತಲೆಗೆ ತೀವ್ರ ತರಹದ ಗಾಯವಾಗಿದ್ದು,  ಇದೇ ಕಾರಣದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ  ಚಿಕಿತ್ಸೆಗೆ ಸ್ಪಂದಿಸದೇ  ಅಫಘಾತದಿಂದ ಆದ ಗಾಯದಿಂದಲೇ ಮೃತಪಟ್ಟಿರುವುದಾಗಿ ತನಗೆ ಸಂಶಯ ಇರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 174 3(IV) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-01-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080