Feedback / Suggestions

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿ ಗಿರೀಶ್ ಕುಮಾರ್ (34 ವರ್ಷ ತಂದೆ: ದಿ. ರಾಘವ ಪೂಜಾರಿ ವಾಸ: ಶಾರದಾಂಬ ನಿವಾಸ ಕಕ್ಕುಂಜೆ ಶಿವಳ್ಳಿ ಗ್ರಾಮ  ಇವರು ದಿನಾಂಕ:08/12/2022 ರಂದು ಸಂಜೆ 07.45 ಗಂಟೆಗೆ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ ಎಲ್.ವಿ.ಟಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗಾಗಿ ನಿಂತಿರುವಾಗ ಅವರ ಪರಿಚಯದ ರಾಮಚಂದ್ರ ರವರು ರಿಕ್ಷಾ ನಿಲ್ದಾಣದಲ್ಲಿ ಇದ್ದ ಪಿರ್ಯಾದಿದಾರರೊಂದಿಗೆ ಮಾತನಾಡಿ ಪುತ್ತೂರು ಗ್ರಾಮದ ನಯಂಪಳ್ಳಿಯ ಎಲ್.ವಿ.ಪಿ ಶಾಲೆಯ ಹಿಂದೆ ಇರುವ ಮನೆಗೆ ಹೋಗುವರೇ ಮಣ್ಣು ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 07.45 ಗಂಟೆಗೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಹೋಗುವರೇ AP-26-BH-9595 ನೇ ಮಹಿಂದ್ರ ಕಂಪೆನಿಯ ಜೀಪು ಚಾಲಕ ತನ್ನ ಜೀಪನ್ನು ರಸ್ತೆಯ ತೀರಾ ಎಡ ಬದಿಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ಹೋಗುತ್ತಿದ್ದ ರಾಮಚಂದ್ರ ಎಂಬುವವರಿಗೆ ಎದರು ಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ರಾಮಚಂದ್ರ ರವರು ರಸ್ತೆಗೆ ಬಿದ್ದರು. ನಂತರ ಪಿರ್ಯಾದಿದಾರರು ಹಾಗು ಅಲ್ಲಿದ್ದ ಸಾರ್ವಜನಿಕರು ಸೇರಿ ರಾಮಚಂದ್ರ ಅವರನ್ನು ಎತ್ತಿ ಉಪಚರಿಸಿದ್ದು ಅವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಬಲಕಾಲಿಗೆ ಮೂಳೆಮುರಿತದ ಜಖಂ ಆಗಿದ್ದು  ಅವರು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಅಪಘಾತಪಡಿಸಿದ ವಾಹನದ  ಚಾಲಕನು ಅಪಘಾತಪಡಿಸಿದ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾರೆ. ನಂತರ ಗಾಯಾಳು ರಾಮಚಂದ್ರ ಅವರನ್ನು ನಾನು ಪಿರ್ಯಾದಿದಾರರ ಆಟೋದಲ್ಲಿ ಹಾಕಿ ಉಡುಪಿಯ  ಹೈಟೆಕ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ಗಾಯಾಳು ರಾಮಚಂದ್ರ ರವರನ್ನು ಪರೀಕ್ಷಿಸಿದ ಉಡುಪಿಯ  ಹೈಟೆಕ್ ಆಸ್ಪತ್ರೆಯ ವೈಧ್ಯರು ರಾಮಚಂದ್ರ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ,  ಈ ಬಗ್ಗೆ ಉಡುಪಿ ಸಂಚಾರ ಠಾಣೆ, ಅಪರಾಧ ಕ್ರಮಾಂಕ 99/2022 ಕಲಂ: 279, 304 (A)  ಐ.ಪಿ.ಸಿ  134 (A) & (B) r/w 187 IMV Act ಐಪಿಸಿ ಯಂತೆ  ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ: ಪೂಜಾ ಸಾಲ್ಯಾನ್‌ ಪ್ರಾಯ: 25 ವರ್ಷ ತಾಯಿ: ಜಯಂತಿ ಸಾಲಿಯಾನ್‌  ವಿಳಾಸ: ಡೋರ್‌ ನಂಬ್ರ 258(E1), ಎಲ್‌ವಿಟಿ ದೇವಸ್ಥಾನದ ಬಳಿ, ಪುತ್ತೂರು ಗ್ರಾಮ ಇವರು ತನ್ನ ತಾಯಿಯೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಎಲ್‌ವಿಟಿ ದೇವಸ್ಥಾನದ ಬಳಿ ಡೋರ್‌ ನಂಬ್ರ 258(E1) ಮನೆಯಲ್ಲಿ ವಾಸವಾಗಿದ್ದು, ದಿನಾಂಕ 08/12/2022 ರಂದು ಬೆಳಿಗ್ಗೆ 09:30 ಗಂಟೆಯಿಂದ 18:30 ಗಂಟೆ ನಡುವೆ ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಬೆಡ್‌ ರೂಮ್‌ನಲ್ಲಿನ ಗಾಡ್ರೇಜ್‌ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಬಳೆ-1 ಹಾಗೂ 4 ಗ್ರಾಂ ತೂಕದ ಚಿನ್ನದ ಪೆಂಡೆಂಟ್‌-1 ಒಟ್ಟು 20 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂ. 96,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2022 ಕಲಂ:  454 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 09-12-2022 10:31 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080