ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 08/12/2021 ರಂದು ಪಿರ್ಯಾದಿದಾರರಾದ ವೆಂಕಟೇಶ ನಾಯ್ಕ (55), ತಂದೆ:  ಅನಂತ  ನಾಯ್ಕ,  ಡೋರ್  ನಂ.  6-11-A2 (1)  ರಾಜೀವ  ನಗರ  ರಸ್ತೆ  ಪುತ್ತೂರು ಗ್ರಾಮ  ಉಡುಪಿ ತಾಲೂಕು ಇವರು  ಪುತ್ತೂರು  ಗ್ರಾಮದ  ನಿಟ್ಟೂರು  ಅಂಗನವಾಡಿ  ಶಾಲೆಯಿಂದಾಗಿ ಜುಮಾದಿಕಟ್ಟೆ  ಜಂಕ್ಷನ್  ಕಡೆಗೆ  ರಸ್ತೆ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ  8:00  ಗಂಟೆಗೆ ಹಿಂದಿನಿಂದ ನಿಟ್ಟೂರು ಅಂಗನವಾಡಿ ಶಾಲೆಯಿಂದಾಗಿ ಜುಮಾದಿಕಟ್ಟೆ  ಜಂಕ್ಷನ್ ಕಡೆಗೆ KA- 20-P- 3255  ನೇ ಕಾರು ಚಾಲಕ ಸತೀಶ ತನ್ನ ಕಾರನ್ನು  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ  ಹಿಂದಿನಿಂದ  ಡಿಕ್ಕಿ  ಹೊಡೆದ  ಪರೀಣಾಮ  ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ  ಮೂಳೆ ಮುರಿತ ಉಂಟಾಗಿರುತ್ತದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ರಾಮಚಂದ್ರ ನಾಯಕ್ (36), ತಂದೆ;ಸುಬ್ರಾಯ ನಾಯಕ್, ವಾಸ; ಶ್ರೀನಿವಾಸ ನಗರ, ಕಾಜರಗುತ್ತು, ಅಂಜಾರು ಗ್ರಾಮ, ಉಡುಪಿ ತಾಲೂಕು ಇವರ  ಅಣ್ಣ ನಾಗರಾಜ ನಾಯಕ್ (43) ರವರು ಈ ಮೊದಲಿನಿಂದಲೂ ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿರುತ್ತಾರೆ. ಅಲ್ಲದೇ ಇತ್ತೀಚೆಗೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಹಿರಿಯಡ್ಕ  ಕಾಮತ್ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದವರು, ದಿನಾಂಕ 08/12/2021 ರಂದು  ಕಾಮತ್ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ,  ತನಗಿರುವ ಮಾನಸಿಕ ಕಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯಾಹ್ನ 12:00 ಗಂಟೆಯಿಂದ ರಾತ್ರಿ 10:00 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಯ ಹಿಂದೆ ಇರುವ ಸೋಮನಾಥ ಶೆಟ್ಟಿರವರ ಗುಡ್ಡೆಯಲ್ಲಿರುವ ಗೇರು ಬೀಜದ ಮರದ ಕೊಂಬೆಗೆ ಒಂದು ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 08/12/2021 ರಂದು ಬೈಂದೂರು ತಾಲೂಕು ಶಿರೂರು ಗ್ರಾಮದ ದುರ್ಗಾಂಬಿಕಾ ಸಭಾಭವನದ ಎದುರಿನ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಪವನ್ ನಾಯಕ್, ಪೊಲೀಸ್ ಉಪ ನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಹೋಗಿ ಶಿರೂರು ಗ್ರಾಮದ ಕರಿಕಟ್ಟೆ  ದುರ್ಗಾಂಬಿಕಾ ಸಭಾಭವನದ ಎದುರಿನ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಲ್ಲಿಗೆ ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 1)ಮಂಜಪ್ಪ ನಾಯ್ಕ (45), ತಂದೆ;ಮಂಜಯ್ಯ, ವಾಸ; ತಮ್ಮಯ್ಯನಮನೆ, ಮುತ್ತಳ್ಳಿ ಗ್ರಾಮ,ಭಟ್ಕಳ ತಾಲೂಕು, 2) ಈಶ್ವರ ಎಮ್ ನಾಯ್ಕ (42), ತಂದೆ: ಮಾಸ್ತಪ್ಪ , ವಾಸ; ಕಟ್ಟಿಕೇರಿಮನೆ,ಮೂಡುಭಟ್ಕಳ, ಮತ್ತಳ್ಳಿ ಗ್ರಾಮ, ಭಟ್ಕಳ ತಾಲೂಕು, 3) ಸತೀಶ್ ಕೆ ನಾಯ್ಕ (34), ತಂದೆ; ಕೃಷ್ಣಪ್ಪ ನಾಯ್ಕ , ವಾಸ: ಅಂಗಡಿಮನೆ, ಗೋಳಿಮರ, ಬೆಳ್ಕೆ ಗ್ರಾಮ, ಭಟ್ಕಳ ತಾಲೂಕು, 4) ದಿನೇಶ ಹೊನ್ನಪ್ಪ ನಾಯ್ಕ (35), ತಂದೆ: ಹೊನ್ನಪ್ಪ ವಾಸ; ಸಣ್ಣ ತಮ್ಮನಮನೆ, ಗೊರಟೆ, ಬೆಳ್ಕೆ ಗ್ರಾಮ, ಭಟ್ಕಳ ತಾಲೂಕು, 5] ಮಂಜುನಾಥ ಜಟ್ಟಪ್ಪ ನಾಯ್ಕ (54), ತಂದೆ: ಜಟ್ಟಪ್ಪ , ವಾಸ; ಹನುಮಾನ್ ನಗರ, ಭಟ್ಕಳ ತಾಲೂಕು ಇವರನ್ನು ಹಿಡಿದುಕೊಂಡಿದ್ದು ಇನ್ನುಳಿದ 05 ಜನರು ಓಡಿಹೋಗಿದ್ದು  05 ಜನ ಆರೋಪಿಯನ್ನು ಹಾಗೂ ಆಟಕ್ಕೆ ಬಳಸಿದ ಹಳೆಯ ನ್ಯೂಸ್‌ ಪೇಪರ್‌-1, ಇಸ್ಪಿಟ್‌ ಕಾರ್ಡ್-52, ಹಾಗೂ  8,200 /- ರೂಪಾಯಿ  ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ           198 /2021 ಕಲಂ: 87 KP ACt ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-12-2021 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080