ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮಜೀದ್ ಹಸನಬ್ಬ (39), ತಂದೆ : ದಿ. ಹಸನಬ್ಬ, ವಾಸ : ಮನೆ ನಂಬ್ರ 2-107/13, ನ್ಯೂ ಹೌಸ್ ಪೊಲ್ಯ ಉಚ್ಚಿಲ ಬಡಾ ಗ್ರಾಮ ಕಾಫು  ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 08/11/2022 ರಂದು ಅವರ ಹೆಂಡತಿಯ KA-20-EU-5465 ನೇ ಸ್ಕೂಟರ್‌ನಲ್ಲಿ ಸಹ ಸವಾರನಾಗಿ ಭಾವ ಅಯ್ಯುಬ್ ಅಬ್ದುಲ್ಲಾ ರವರನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿ ರಸ್ತೆಯ ಸರ್ವಿಸ್‌ ರಸ್ತೆಯಲ್ಲಿ ಮೂಳೂರು ಮಸೀದಿಗೆ ಹೋಗುತ್ತಿರುವಾಗ ಮೂಳೂರು ಗ್ರಾಮದ ಮೂಳೂರು ಬಸ್‌ನಿಲ್ದಾಣದ ಬಳಿ ತಪುತ್ತಿದ್ದಂತೆ ಬೆಳಿಗ್ಗೆ 09:15 ಗಂಟೆಗೆ ಸ್ಕೂಟರ್‌ನ ಹಿಂದಿನಿಂದ ಹಸನ್ ರವರು ತನ್ನ KA-20-AA-1205  ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ತೀರಾ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಚಲಾಯಿಸಿಕೊಂಡು ಓಮ್ಮೇಲೆ ಎಡ ಬದಿಯಿಂದ ಓವರ್‌ಟೇಕ್ ಮಾಡುತ್ತಾ ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟಿಯ ಎಡ ಬದಿಗೆ ಢಿಕ್ಕಿ ಹೊಡೆದಿದ್ದು, ಆವಾಗ ಪಿರ್ಯಾದಿದಾರರಿಗೆ ಸ್ಕೂಟಿಯ  ಹತೋಟಿ ತಪ್ಪಿ ಎಡಭಾಗ ಮಗುಚಿ ಬೀಳುತ್ತಿದ್ದಂತೆ ಪಿರ್ಯಾದಿದಾರರು ನೆಲಕ್ಕೆ ಕಾಲು ತಾಗಿಸಿ ನಿಯಂತ್ರಣ ಮಾಡುತ್ತಿದ್ದಂತೆ ಸಹ ಸವಾರನಾದ ಅಯ್ಯುಬ್ ಅಬ್ದುಲ್ಲಾ ರವರು ರಸ್ತೆಗೆ ಜಾರಿ ಬಿದ್ದಿದ್ದು, ಪರಿಣಾಮ ಅವರ ಎಡಕಾಲಿಗೆ ಪೆಟ್ಟಾಗಿದ್ದು, ಕೂಡಲೇ ಚಿಕಿತ್ಸೆಯ ಬಗ್ಗೆ ಅಂಬುಲೇನ್ಸ್ ನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಯ್ಯುಬ್ ಅಬ್ದುಲ್ಲಾ ರವರಿಗೆ ಪರೀಕ್ಷಿಸಿದ ವೈದ್ಯರು ಕಾಲಿನ ಗಂಟು ಬಿರುಕು ಬಿಟ್ಟಿರುವುದಾಗಿ ತಿಳಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 08/11/2022 ರಂದು  ಬೆಳಿಗ್ಗೆ 07:45   ಗಂಟೆಗೆ,  ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಸೌರಭ ಕ್ಯಾಶ್ಯೂ  ಫ್ಯಾಕ್ಟರಿಯ  ಬಳಿ  ರಸ್ತೆಯಲ್ಲಿಆಪಾದಿತ ಮೊಹಮ್ಮದ್‌ಸಾದಿಕ್‌  KA-20-N-5285 ನೇ ಮಾರುತಿ ಓಮ್ನಿ  ಕಾರನ್ನು  ಹಂಗಳೂರು ವಿನಾಯಕ  ಟಾಕೀಸ್‌ ಕಡೆಯಿಂದ  ಕೋಡಿ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲಬದಿಯಲ್ಲಿದ್ದ ಮೆಸ್ಕಾಂ ಸಂಸ್ಥೆಗೆ  ಸೇರಿದ 11 ಕೆ.ವಿ ವಿದ್ಯುತ್‌ ಸರಬರಾಜುವಾಗುವ  ಕೋಡಿ ಫೀಡರ್‌ನ  ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು, ವಿದ್ಯುತ್‌ ಕಂಬ  ಹಾಗೂ  ಇತರೆ ಸಲಕರಣೆ ಜಖಂ  ಆಗಿ ಮೆಸ್ಕಾಂ ಸಂಸ್ಥೆಗೆ  ರೂಪಾಯಿ 75,000/-  ಉಂಟಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022   ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 07/11/2022  ರಂದು  ಸಂಜೆ 7:30 ಗಂಟೆಗೆ ಕುಂದಾಪುರ  ತಾಲೂಕಿನ, ಕಾವ್ರಾಡಿ  ಗ್ರಾಮದ  ಕಂಡ್ಲೂರು  ಪೇಟೆಯ  ಬಳಿ  ರಾಜ್ಯ  ರಸ್ತೆಯಲ್ಲಿ, ಆಪಾದಿತ ವಿನಯ ಕುಮಾರ್‌ ಎಂಬುವವರು KA-20-EM-5141ನೇ ಬೈಕನ್ನು ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು, ರಸ್ತೆಯ ದಕ್ಷಿಣ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತೋಷ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂತೋಷರವರ ತಲೆಗೆ ಒಳಜಖಂ ಗಾಯವಾಗಿ ಹತ್ತಿರದ ಕ್ಲಿನಿಕ್‌‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ದಿನಾಂಕ 08/11/2022 ರಂದು ಬೆಳಿಗ್ಗೆ ಸಂತೋಷರವರನ್ನು ಅವರ ಹೆಂಡತಿ ಕುಂದಾಪುರ ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಿ,  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022   ಕಲಂ 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರವಿ ಪೂಜಾರಿ (52), ತಂದೆ: ದಿ. ರಾಮ ಪೂಜಾರಿ, ವಾಸ: ಕೇಪುಲ ದರ್ಖಾಸು ಮನೆ ಕಲ್ಯಾ  ಗ್ರಾಮ  ಕಾರ್ಕಳ ತಾಲೂಕು ಇವರ  ಮಗಳು ನಿಶಾ (22) ಇವರು ತಲೆನೋವು ಹಾಗೂ ಮೈ ಅಲರ್ಜಿಯಿಂದ ಉಡುಪಿಯ ಚರ್ಮ ವೈದ್ಯರಿಂದ ಮದ್ದು ಮಾಡುತ್ತಿದ್ದು, ಅಲ್ಲದೇ ನಿಶಾರವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರವರ ತಾಯಿ ಶಕುಂತಳಾರವರು ಮಾನಸಿಕ ವರ್ತಿಸುತ್ತಿದ್ದು , ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಇಲ್ಲವೇ ಬೇರೆ ಇನ್ನಾವುದೋ ಕಾರಣದಿಂದ ದಿನಾಂಕ 08/11/2022 ರಂದು ಮಧ್ಯಾಹ್ನ 1:00 ಗಂಟೆಯಿಂದ 1:50 ಗಂಟೆಯ ಮಧ್ಯೆ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ಗೇರು ಮರದ ಗೆಲ್ಲಿಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 36/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.          
       

ಇತ್ತೀಚಿನ ನವೀಕರಣ​ : 09-11-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080