ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ :ಪಿರ್ಯಾದಿ ಗಣೇಶ ಕೆ. (30) ತಂದೆ: ಆನಂದ ವಾಸ:ಟ್ರಾಕ್‌ ಮೆನ್,ಕೊಂಕಣ ರೈಲ್ವೇ ಕುಂದಾಪುರ ತಾಲೂಕು ಇವರು ಕೊಂಕಣ ರೈಲ್ವೇ ಕುಂದಾಪುರ ಶಾಖೆಯಲ್ಲಿ ಉಡುಪಿಯಿಂದ ಸೇನಾಪುರವರೆಗೆ ಟ್ರ್ಯಾಕ್ ಮೆನ್ ಆಗಿ  ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ:09-11-2022 ರಂದು JEI ಅವರು ಪೋನ್ ಮಾಡಿ ತಲ್ಲೂರು ರಾಜಾಡಿ ಎಂಬಲ್ಲಿ ಟ್ರ್ಯಾಕ್ ಮೇಲೆ ಯಾವುದೋ ಅಪರಿಚಿತ ಮೃತ ದೇಹ ಇರುವ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿದಾರರು ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಬಳಿ  ಬಂದು ನೋಡಿದಾಗ ಟ್ಯ್ಯಾಕ್ನ ಪೂರ್ವ ಬದಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯ ಮೃತ  ದೇಹ ಕಂಡು ಬಂದಿರುತ್ತದೆ. ಸದ್ರಿ ಮೃತ ದೇಹದ  ತಲೆಯ ಭಾಗವು ದೊರೆತ ಉತ್ತರದಲ್ಲಿ  50 ಮೀಟರ್ ಅಂತರದಲ್ಲಿ ದೇಹದ ಉಳಿದ ಭಾಗವು ಚಿದ್ರವಾಗಿ ದೊರೆತಿದ್ದು. ಗುರುತು ಪತ್ತೆ ಹಚ್ಚಲು ಸಾಧ್ಯವಾಗದೇ ಇರುತ್ತದೆ. ಮೃತ ದೇಹವನ್ನು ನೋಡಿದಾಗ ಸುಮಾರು 45 ವರ್ಷ ಪ್ರಾಯದ ಗಂಡಸಿನ ಮೃತ ದೇಹದಂತೆ ಕಂಡು ಬಂದಿರುತ್ತದೆ. ದಿನಾಂಕ:08-11-2022 ರಂದು ಮಧ್ಯಾಹ್ನ 14:00 ಗಂಟೆಯಿಂದ ದಿನಾಂಕ:09-11-2022 ರಂದು ಬೆಳಿಗ್ಗೆ 08:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯು  ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ ಟ್ರ್ಯಾಕಿಗೆ ದೇಹವನ್ನು ಅಡ್ಡವಿಟ್ಟು ಯಾವುದೋ ರೈಲು ಹರಿದು ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ  ಯು.ಡಿ.ಆರ್. ನಂಬ್ರ 31/2022 ಕಲಂ:174  CRPC  ಯಂತೆ ಪ್ರಕರಣ ದಾಖಲಿಸಿ ತನಿಕೆ ಮುಂದುವರಿಸಲಾಗಿದೆ.

ಇತ್ತೀಚಿನ ನವೀಕರಣ​ : 09-11-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080