ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ : ಪಿರ್ಯಾದಿ ಅಶೋಕ (40) ತಂದೆ: ಕೃಷ್ಣ ನಾಯಕ್ ವಾಸ: 2-62, ಕೊಳಂಬೆ ಹೌಸ್, ಕುಲಾ ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಇವರು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 08/11/2021 ರಂದು ರಾತ್ರಿ ಸಮಯ ಸುಮಾರು 9:00 ಗಂಟೆಗೆ ಓಷಿಯನ್ ಪರ್ಲ್ ಹೋಟೇಲ್ ಉಡುಪಿಯಲ್ಲಿ ಹೋಂ ಡೆಲಿವರಿ ಕೆಲಸ ಮಾಡುತ್ತಿರುವ ನಿತ್ಯಾನಂದ ಪೂಜಾರಿಯವರು ತನ್ನ ಸ್ಕೂಟರ್ ನಂಬ್ರ KA 20 EN 1191 ನೇದರಲ್ಲಿ ಕೆಲಸದ ನಿಮಿತ್ತ ಅಂಬಾಗಿಲಿಗೆ ಕಲ್ಸಂಕ ಮಾರ್ಗ ಮೂಲಕ ಹೋಗುತ್ತಿರುವಾಗ ಉಡುಪಿಯ ಗುಂಡಿಬೈಲು ಸೀಮಾ ಪೆಟ್ರೋಲ್ ಬಂಕ್ ಎದುರು ತಲುಪುವಾಗ ಎದುರಿನಿಂದ ಅಂದರೆ  ಅಂಬಾಗಿಲು  ಕಡೆಯಿಂದ   ಕಲ್ಸಂಕ  ಕಡೆಗೆ  ಎಕಮುಖ  ಸಂಚಾರದ  ವಿರುದ್ದ  ದಿಕ್ಕಿನಿಂದ KA 19 C 6204 ನೇ ಟೆಂಪೋ ಚಾಲಕ ತನ್ನ ಟೆಂಪೋವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿತ್ಯಾನಂದ ಪೂಜಾರಿಯವರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ನಿತ್ಯಾನಂದ ಪೂಜಾರಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಮತ್ತು ತಲೆಗೆ ರಕ್ತಗಾಯವಾಗಿದ್ದು  ಅಲ್ಲದೆ ಟೆಂಪೋ ಚಾಲಕ  ಅಪಘಾತವಾದ  ನಂತರ ಗಾಯಾಳುವನ್ನು  ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸೇರಿಸಿರುವುದಿಲ್ಲ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 73/2021 ಕಲಂ  279 337 ಐಪಿಸಿ ಮತ್ತು 218 ಜೊತೆಗೆ 177 & 134 (ಎ) (ಬಿ) ಜೊತೆಗೆ 187 ಐಎಮ್‌ವಿ ಆಕ್ಟ್ ರಂತೆ ಪ್ರಕರಣ ದಾಕಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ ವಿಜಯ್ ಶೆಟ್ಟಿ (51) ತಂದೆ: ಸಂಜೀವ ಶೆಟ್ಟಿ ವಾಸ: ಶ್ರೀ ರಕ್ಷಾ, ಕೊಳಚೂರು, ನಂದಿಕೂರು , ಎಲ್ಲೂರು ಇವರ ತಮ್ಮ ಪ್ರಶಾಂತ್ ಶೆಟ್ಟಿ (42) ಎಂಬವರು ಕೂಲಿ ಕೆಲಸಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟವನ್ನು ಹೊಂದಿರುತ್ತಾರೆ. ಅವರ ಕುಡಿತದ ಚಟವನ್ನು ಬಿಡಿಸಲು  ಮಂಗಳೂರು ಕಂಕನಾಡಿ ಆಸ್ಪತ್ರೆ, ಉಡುಪಿ ಬಾಳಿಗಾ ಆಸ್ಪತ್ರೆಗೆ  ದಾಖಲಿಸಿದ್ದರೂ ಸುಧಾರಿಸದೇ ಇದ್ದು ಕುಡಿತದ ಚಟವನ್ನು ಮುಂದುವರಿಸಿರುತ್ತಾರೆ. ದಿನಾಂಕ  08/11/2021 ರಂದು ರಾತ್ರಿ 21:45 ಗಂಟೆ ಸಮಯಕ್ಕೆ ಪ್ರಶಾಂತ್ ಶೆಟ್ಟಿ ಮನೆಯಲ್ಲಿ ಮಲಗಿದ್ದವರು  ಮಂಚದಿಂದ ಕೆಳಗೆ ಬಿದ್ದು ಮಾತನಾಡದೆ ಇದ್ದು  ಉಪಚರಿಸಿದ್ದರೂ ಯಾವುದೇ ಸ್ಪಂದನೆ ಇಲ್ಲದೆ ಇದ್ದು ಕೂಡಲೇ ಅವರನ್ನು ಪಡುಬಿದ್ರಿ ಸಿದ್ದಿ ವಿನಾಯಕ ಆಸ್ಪತ್ರೆಗೆ   ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ  ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ರಾತ್ರಿ 1:35 ಗಂಟೆಗೆ ಕರೆದುಕೊಂಡು ಬಂದಾಗ  ವೈದ್ಯರು ಪರೀಕ್ಷಿಸಿ  ಪ್ರಶಾಂತ್ ಶೆಟ್ಟಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಠಾಣಾ ಯುಡಿಆರ್‌ ಸಂಖ್ಯೆ : 22/2021, ಕಲಂ: 174 ಸಿಆರ್.ಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-11-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080