ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 05/09/2022 ರಂದು ರಾತ್ರಿ  ಸುಮಾರು 11:30 ಗಂಟೆಗೆ,  ಕುಂದಾಪುರ  ತಾಲೂಕಿನ, ವಡೇರಹೋಬಳಿ ಗ್ರಾಮದ  ಬಿ.ಸಿ ರಸ್ತೆಯ  ವಿಲೇಜ್‌ ಬಾರ್‌ & ರೆಸ್ಟೋರೆಂಟ್‌‌ ಬಳಿ SH 52  ರಸ್ತೆಯಲ್ಲಿ, ಆಪಾದಿತ ರಾಘವೇಂದ್ರ ಎಂಬವರು KA20-EH-6974ನೇ ಬೈಕನ್ನು  ಕುಂದಾಪುರ   ಕಡೆಯಿಂದ ಕೋಣಿ  ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿ  ಒಮ್ಮೇಲೆ  ಬ್ರೇಕ್‌  ಹಾಕಿದ  ಪರಿಣಾಮ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದು, ರಾಘವೇಂದ್ರ   ರವರ  ಬಲಕಾಲಿಗೆ ಮೂಳೆ ಮುರಿತವಾದ ಗಾಯ ಹಾಗೂ  ಬಲಕೈಗೆ ತರಚಿದ  ಗಾಯವಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ  ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 97/2022  ಕಲಂ 279, 338   ಐಪಿಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 08.09.2022 ರಂದು ಪಿರ್ಯಾದಿ ಸದಾಶಿವ ಆರ್ ಗವರೋಜಿ ಪಿ.ಎಸ್‌.ಐ, (ಎಲ್‌&ಓ), ಕುಂದಾಪುರ ಪೊಲೀಸ್‌ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ಇಲಾಖಾ ಜೀಪು ನಂಬ್ರ ಕೆಎ 20 ಜಿ 263 ನೇದರಲ್ಲಿ ರೌಂಡ್ಸ್‌ ಕತವ್ಯದಲ್ಲಿರುವಾಗ ಬಾತ್ಮೀದಾರರೊಬ್ಬರು ಕರೆ ಮಾಡಿ ಕುಂದಾಪುರ ತಾಲೂಕು ಕಸಬ ಗ್ರಾಮದ ಫೇರಿ ರಸ್ತೆ ಬಳಿ ಓರ್ವ ವ್ಯಕ್ತಿ  ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ 18:00 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ವಿನಯ ನಾಯ್ಕ ಈತನು ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಆತನನ್ನು  ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ಈ ದಿನ ದಿನಾಂಕ: 09/09/2022 ರಂದು ವರದಿ ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 102/2022 ಕಲಂ: 27(b)   NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ ‌

  • ಬೈಂದೂರು: ಫಿರ್ಯಾದಿ ಗುರುರಾಜ್ ಶೆಟ್ಟಿ ಇವರ ಮಾವ ರಘುವೀರ ಶೆಟ್ಟಿರವರ  ಮಗನಾದ ಸಾಯಿಶ್ ಪ್ರಾಯ:18 ವರ್ಷ  ಈತನು ದಿನಾಂಕ 08/09/2022 ರಂದು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ವಿಠಲವಾಡಿ ಎಂಬಲ್ಲಿನ ತನ್ನ  ಮನೆಯಿಂದ NEET ಪರೀಕ್ಷೆಯ ರಿಸಲ್ಟ್  ನೋಡಿ ಬರುವುದಾಗಿ ಹೇಳಿ ಹೋದವನು  ವಾಪಾಸು ಮನೆಗೆ ಬಾರದೇ ಇದ್ದು  ಹುಡುಕಾಡಿದಾಗ ಮಧ್ಯಾಹ್ನ  1:15 ಗಂಟೆಗೆ ಹೇರಿಕುದ್ರು ಸೇತುವೆಯಿಂದ  ನದಿಗೆ ಹಾರಿದ ಬಗ್ಗೆ ಮಾಹಿತಿ ತಿಳಿದು  ಹೋಗಿ ನೋಡಿದಾಗ ಆತನ ಸೈಕಲ್ ಮತ್ತು ಮೊಬೈಲ್ ಸೇತುವೆ ಬಳಿ ಸಿಕ್ಕಿದ್ದು ಸಾಯಿಶ್ ನ ಮೃತ ದೇಹ ಈ ದಿನ ದಿನಾಂಕ 09/09/2022 ರಂದು ಬೆಳಿಗ್ಗೆ 9:00 ಗಂಟೆಗೆ ನಾವುಂದ ಗ್ರಾಮದ  ನಾವುಂದ ಕರಾವಳಿ ಸಮುದ್ರ ಕಿನಾರೆಯಲ್ಲಿ  ಪತ್ತೆಯಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯು.ಡಿ.ಆರ್ 51/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ಸತೀಶ ಶೇರಿಗಾರ ಇವರ ಅಣ್ಣ ಸಂಜೀವ ಶೇರಿಗಾರ (50) ರವರು ಕಾಪು ಪಡು ಗ್ರಾಮದ ಬೀಡುಬದಿಯಲ್ಲಿ  ಬಾಡಿಗೆ ಮನೆ ಮಾಡಿ ಹೆಂಡತಿ ಮಗಳೊಂದಿಗೆ ವಾಸವಾಗಿ, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಅಣ್ಣನಿಗೆ 20 ವರ್ಷಗಳಿಂದ ಪೀಟ್ಸ್ ಕಾಯಿಲೆಯಿದ್ದು, ಅಲ್ಲದೇ ಇತ್ತೀಚೆಗೆ ಮಧ್ಯಪಾನ ಸೇವಿಸುವ ಅಭ್ಯಾಸ ಹೊಂದಿದ್ದು, ದಿನಾಂಕ 09-09-2022 ರಂದು ಪಿರ್ಯಾದಿದಾರರು ಬೆಳಗ್ಗೆ 06.15 ಗಂಟೆಗೆ ಮನೆಯಲ್ಲಿರುವಾಗ ದಿನೇಶ ಎಂಬವರು ಕರೆ ಮಾಡಿ ನಿನ್ನ ಅಣ್ಣನಿಗೆ ಎದೆನೋವು ಕಾಣಿಸಿಕೊಂಡಿದ್ದು, ಅಕ್ಷಯರವರು ಅಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಗೆ ಬರುವಂತೆ ತಿಳಿಸಿದ್ದು, ಪಿರ್ಯಾದಿದಾರರು ಮಣಿಪಾಲದ ಹತ್ತಿರ  ಉಡುಪಿಗೆ ಬರುತ್ತಿರುವಾಗ 07.20  ದಿನೇಶ ರವರು ಕರೆಮಾಡಿ ನಿನ್ನ ಅಣ್ಣ ಸಂಜೀವ ಶೇರಿಗಾರವರನ್ನು ಪರೀಕ್ಷಿಸಿದ ವೈದ್ಯರು 07.15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಅಣ್ಣನು ಪೀಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಜೊತೆಗೆ ವಿಪರೀತ ಮಧ್ಯಪಾನ ಚಟವನ್ನು ಹೊಂದಿದ್ದು, ಇದೇ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯು.ಡಿ.ಆರ್ 26/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ

  • ಬೈಂದೂರು: ಫಿರ್ಯಾದಿ ವೀರಭದ್ರ ಗಾಣಿಗ ಇವರ ಅತ್ತೆ ಕನಕರವರೊಂದಿಗೆ ಅವರ ತಂಗಿಯಾದ  ಸಾಕು ಪ್ರಾಯ:52 ವರ್ಷ ರವರು  ತಗ್ಗರ್ಸೆ ಗ್ರಾಮದ ಹಾಲಂಬೇರು ಗುಡ್ಡೆಮನೆ  ಎಂಬಲ್ಲಿ ವಾಸಮಾಡಿಕೊಂಡಿದ್ದು ಸಾಕು ರವರು ಕಳೆದ   10 ವರ್ಷಗಳಿಂದ ಪೀಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಯಿಂದ ಚಿಕಿತ್ಸೆ  ಪಡೆಯುತ್ತಿದ್ದರು. ಸಾಕು ರವರು ದಿನಾಂಕ 08-09-2022 ರಂದು ಬೆಳಿಗ್ಗೆ7:30 ಗಂಟೆಗೆ ದೇವರ ಪೂಜೆಗೆ ಹೂ ಕೊಯ್ದು ಮನೆಯಲ್ಲಿಟ್ಟು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಫಿರ್ಯಾದುದಾರರು ಹಾಗೂ ಸಾಕುವಿನ ಸಂಬಂಧಿಕರು ಸೇರಿ ಈ ತನಕ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 179/2022 ಕಲಂ: ಹೆಂಗಸು ಕಾಣೆಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 09-09-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080