ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕೃಷ್ಣ ಹಂದೆ (58), ತಂದೆ: ದಿ. ಶ್ರೀಧರ ಹಂದೆ, ವಾಸ: ಹೇರ್ಳೆಬೆಟ್ಟು, ಗಿಳಿಯಾರು ಗ್ರಾಮ,ಬ್ರಹ್ಮಾವರ ತಾಲೂಕು, ಉಡುಪಿ ಇವರು ದಿನಾಂಕ 08/05/2022 ರಂದು ಬೆಳಿಗ್ಗೆ 7:00 ಗಂಟೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಗಿಳಿಯಾರಿನಿಂದ ಹೊರಟು ಕೋಟ ಹೈಸ್ಕೂಲ್ ಜಂಕ್ಷನ್ ಬಳಿ ಬಂದಾಗ ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿ ಪಿರ್ಯಾದಿದಾರರ ಹಿಂದಿನಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬಂದ KA-10-M-3489 ನೇ ಬಿಳಿ ಬಣ್ಣದ ಟಾಟಾ ಸಫಾರಿ ಕಾರನ್ನು ಅದರ ಚಾಲಕ ಸಲೀಮ್ ಖಾನ್‌ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರನ್ನು ಓವರ್‌ಟೇಕ್ ಮಾಡಿಕೊಂಡು ಬಂದು ಕೋಟ ಹೈಸ್ಕೂಲ್ ಜಂಕ್ಷನ್ ಬಳಿ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಸವಾರ ಅನಿಲ್‌ ರವರ KA-20-EV-6191 ನೇ ಕೆಂಪು ಬಣ್ಣದ ಟಿವಿಎಸ್ ಜುಪಿಟರ್ ಸ್ಕೂಟಿಗೆ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯು ಸಫಾರಿ ಕಾರಿನ ಎಡಬದಿಗೆ ಉಜ್ಜಿಕೊಂಡು ಹೋಗಿ ಸ್ಕೂಟಿ ಸಮೇತ ಅದರ ಸವಾರನು ಮೇಲೆ ಹಾರಿ ಕೆಳಗೆ ಬಿದ್ದ ಪರಿಣಾಮ ಆತನ ಎಡಕಾಲು ಮತ್ತು ಎಡಕೈಗೆ ತೀವ್ರ ಸ್ವರೂಪದ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೂ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಜೆಫ್ರಿಯನ್ ಗೋವಿಯಸ್ (70), ತಂದೆ: ಇಗ್ನೇಷಿಯಸ್ ಗೋವಿಯಸ್, ವಾಸ: 3-13ಬಿ(1), ಪೊಯ್ಯದ ಪಲ್ಕೆ, ಪಡುಮಾರ್ನಾಡು ಗ್ರಾಮ, ಬೆಳುವಾಯಿ ಅಂಚೆ, ಮೂಡಬಿದ್ರೆ ತಾಲೂಕು ದ.ಕ ಜಿಲ್ಲೆ ಇವರ ಅಣ್ಣ ಜೇಮ್ಸ್ ಗೋರಿಯಸ್‌ (77) ಎಂಬುವವರು ಕಾರ್ಕಳತಾಲೂಕು ಮಿಯಾರು ಗ್ರಾಮದ ಅರ್ಪದೆ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಜೇಮ್ಸ್ ಗೋರಿಯಸ್‌ರವರ ಹೆಂಡತಿ ಮತ್ತು ಮಗಳು ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಜೇಮ್ಸ್ ಗೋರಿಯಸ್‌ರವರಿಗೆ ಮಾನಸಿಕ ಖಾಯಿಲೆ ಇದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 08/05/2022 ರಂದು ಸಂಜೆ 6:00 ಗಂಟೆಗೆ ಜೇಮ್ಸ್ ಗೋರಿಯಸ್ ರವರ ಮಗಳು ಜಾನಿಸ್ ಗೋರಿಯಸ್ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ಜೇಮ್ಸ್ ಗೋರಿಯಸ್‌ರವರು ಮನೆಯ ಹಿಂದುಗಡೆ ಇರುವ ಶೆಡ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಡಿರುವುದಾಗಿ ಜೇಮ್ಸ್ ಗೋರಿಯಸ್‌ರವರ ಮನೆ ಬಳಿ ವಾಸವಾಗಿದ್ದ ಪ್ರಾನ್ಸಿಸ್ ಮೆನೆಜಸ್ ರವರು ಕರೆ ಮಾಡಿ ವಿಚಾರವನ್ನು ತಿಳಿಸಿರುವುದಾಗಿ ತಿಳಿಸಿದ ಕೂಡಲೇ ಪಿರ್ಯಾದಿದಾರರು ಜೇಮ್ಸ್ ಗೋರಿಯಸ್‌ರವರು ವಾಸವಾಗಿರುವ ಮನೆ ಬಳಿ ಬಂದಾಗ ಮನೆ ಹಿಂದುಗಡೆ ಇರುವ ಶೆಡ್ಡಿಗೆ ಅಳವಡಿಸಿದ ಕಬ್ಬಿಣದ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿದ್ದು, ಪಿರ್ಯಾದಿದಾರರ ಅಣ್ಣ ಜೇಮ್ಸ್ ಗೋರಿಯಸ್‌ರವರು ಮಾನಸಿಕ ಖಾಯಿಲೆಯಿಂದ ಬಳಲುತಿದ್ದು ಅಲ್ಲದೇ ಅವರ ಹೆಂಡತಿ ಮತ್ತು ಮಗಳು ದೂರದ ಊರಿನಲ್ಲಿ ಇರುವುದರಿಂದ ಮನನೊಂದು ದಿನಾಂಕ 08/05/2022 ರಂದು ಮದ್ಯಾಹ್ನ 12:30 ರಿಂದ ಸಂಜೆ 05:30 ರ ಮದ್ಯಾವಧಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-05-2022 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080