ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಸನಿಲ್ ಕೆ.ಸಿ ಇವರು ದಿನಾಂಕ 08/04/2020 ರಂದು ಸಂಜೆ 7:35 ಗಂಟೆಗೆ ಮನೆಯಿಂದ  ಮುದೂರು ಉದಯನಗರ ಪೇಟೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಮುದೂರು ಗ್ರಾಮದ ಉದಯ ನಗರ ನಾಗ ಎಂಬವರ ಮನೆಯ ಬಳಿ ಆರೋಪಿ ಸಾಬು ತನ್ನ ಬಾಬ್ತು KA20 EL 2557  ನೇ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಸಜಿತ್‌ ಎಂಬವರನ್ನು ಕುಳ್ಳಿರಿಸಿ ಕೊಂಡು ಉದಯನಗರ  ಕಡೆಯಿಂದ ಗುಂಡನ ಹೊಳೆ ಕಡೆಗೆ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಬದಿಗೆ ಚಲಯಿಸಿ ಗುಂಡನ ಹೊಳೆ ಕಡೆಯಿಂದ ಉದಯನಗರ ಕಡೆಗೆ  ಟಿ.ಜಿ ಮ್ಯಾಥ್ಯು ಎಂಬವರು ಚಲಾಯಿಸಿ ಕೊಂಡು ಬರುತ್ತಿದ್ದ KA15 L 6440 ನೇ ಮೋಟಾರು ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರರು ಮೋಟಾರು ಸೈಕಲ್‌ ಸಮೇತ ರಸ್ತೆ ಗೆ ಬಿದ್ದು, ಟಿ.ಜಿ ಮ್ಯಾಥ್ಯು ರವರಿಗೆ  ಬಲ ದವಡೆಗೆ ಮತ್ತು ಬಲ ಕಾಲ ಮೊಣಕಾಲ ಬಳಿ  ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಹಾಗೂ ಸಜಿತ್ ಎಂಬವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಹಲ್ಲೆ ಪ್ರಕರಣ

  • ಗಂಗೊಳ್ಳಿ : ದಿನಾಂಕ 08/04/2021 ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾದಲ್ಲಿರುವ ಫಿರ್ಯಾದಿ ಬೀಬಿ ಐಷಾ ಇವರ ಮನೆಯ ಒಳಗೆ ಆಪಾದಿತ 1) ಸಲಾವುದ್ದಿನ್, 2] ಜಿಯಾವುದ್ದಿನ್ 3] ಇಬ್ರಾಹಿಂ ಫಿರ್ಯಾದುದಾರರ ತಾಯಿಯನ್ನು ಕೈಯಿಂದ ದೂಡಿ ಹಾಕಿ ಕೈಯಿಂದ ಹಾಗೂ ಹೆಂಚಿನಿಂದ ಫಿರ್ಯಾದುದಾರರಿಗೆ ಹಲ್ಲೆ ನಡೆಸಿದ್ದು, ಆಗ ಜಗಳ ಬಿಡಿಸಲು ಬಂದ ಫಿರ್ಯಾದುದಾರರ ಅಕ್ಕನ ಮಗ ಸಾದಿಕ್ ನಿಗೆ ಸಲಾವುದ್ದಿನ್ ರೀಪ್‌ ನಿಂದ ಹಲ್ಲೆ ನಡೆಸಿರುತ್ತಾನೆ. ಬಳಿಕ ಇಬ್ರಾಹಿಂ ನು ಅಲ್ಲಿಗೆ ಬಂದು ಫಿರ್ಯಾದುದಾರರನ್ನು ಹಾಗೂ ಅವರ ಮನೆಯವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ 448, 323, 324, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 09-04-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080