ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ರಾಜೇಂದ್ರಪ್ಪ ಸಿ.ಹೆಚ್‌‌‌‌ ಇವರು  ದಿನಾಂಕ  04/03/2023 ರಂದು ಟಿಪ್ಪರ್‌‌‌‌ನಲ್ಲಿ  ಮಣ್ಣನ್ನು  ಲೋಡು  ಮಾಡಿಕೊಂಡು ಹಂಗಾರಕಟ್ಟೆಗೆ  ಕುಂದಾಪುರ  -  ಉಡುಪಿ  ರಾ.ಹೆ.  66  ರಲ್ಲಿ  ಹೋಗುತ್ತಿದ್ದು,  ಅವರ ಎದುರಿನಿಂದ  ಒಂದು  ಮೋಟಾರು  ಸೈಕಲ್‌‌‌‌‌‌‌‌‌ ಕೋಟ  ಕಡೆಯಿಂದ  ಬ್ರಹ್ಮಾವರ  ಕಡೆಗೆ  ಹೋಗುತ್ತಿತ್ತು.  13:40   ಗಂಟೆ  ಸಮಯಕ್ಕೆ ಪಾಂಡೇಶ್ವರ  ಚರ್ಚ್‌  ಬಳಿ  ತಲುಪುವಾಗ  ವಿರುದ್ಧ ದಿಕ್ಕಿನಿಂದ  ಅಂದರೆ  ಬ್ರಹ್ಮಾವರ ಕಡೆಯಿಂದ  ಕೋಟ  ಕಡೆಗೆ  ಒಂದು  ಬಿಳಿ  ಬಣ್ಣದ  ಸ್ಕೂಟಿಯನ್ನು  ಅದರ  ಸವಾರ  ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಸವಾರಿ  ಮಾಡಿಕೊಂಡು  ಬಂದು ಪಿರ್ಯಾದಿದಾರರ  ಎದುರಿನಿಂದ  ಹೋಗುತ್ತಿದ್ದ  ಮೋಟಾರು  ಸೈಕಲ್‌‌‌‌ಗೆ  ಬಲಬದಿಗೆ  ಡಿಕ್ಕಿ ಹೊಡೆದು ಸ್ಕೂಟಿಯನ್ನು  ನಿಲ್ಲಿಸದೆ  ಪರಾರಿಯಾಗಿರುತ್ತಾನೆ.  ಸ್ಕೂಟಿ  ನಂಬ್ರ  ಕೆ.ಎ-20-5240  ಆಗಿದ್ದು, ಅದರ  ಸಂಪೂರ್ಣ ನೋಂದಣಿ  ನಂಬ್ರ  ಪಿರ್ಯಾದಿದಾರರು ನೋಡಿರುವುದಿಲ್ಲ.   ಅಪಘಾತದಿಂದ   ಮೋಟಾರು  ಸೈಕಲ್‌‌‌‌‌‌‌‌‌ ಕೆ.ಎ-20-ಇಜಿ-2473 ರ ಸವಾರ ನಾಗರಾಜ್‌‌‌‌‌ (26)  ರವರ   ಬಲಕಾಲಿಗೆ ಮೂಳೆ  ಮುರಿತದ  ಗಾಯವಾಗಿರುತ್ತದೆ.  ನಂತರ   ಗಾಯಾಳು  ವನ್ನು ಬ್ರಹ್ಮಾವರ  ಮಹೇಶ್‌‌‌‌‌‌‌‌ ಆಸ್ಪತ್ರೆಗೆ  ಸಾಗಿಸಿ  ಒಳರೋಗಿಯಾಗಿ  ದಾಖಲಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023  ಕಲಂ: 279, 338   IPC & 134 (a&b) IMV Act ನಂತೆ  ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಬೈಂದೂರು: ಫಿರ್ಯಾದಿ ಸುರೇಶ್ ಪೂಜಾರಿ ಇವರು ದಿನಾಂಕ 08/03/2023 ರಂದು  ಬೆಳಿಗ್ಗೆ  08:00 ಗಂಟೆಗೆ  ಕೆಲಸದ ಬಗ್ಗೆ  ಕಾಲ್ತೋಡಿನಿಂದ ತನ್ನ ಮೋಟಾರು ಸೈಕಲ್ ನಲ್ಲಿ   ಹೊರಟು  ಕಾಲ್ತೋಡು ಕಂಬದಕೋಣೆ ರಸ್ತೆಯಲ್ಲಿ  ಬರುತ್ತಾ  ಕಾಲ್ತೋಡು  ಗ್ರಾಮದ ಮೆಟ್ಟಿನಹೊಳೆ ಕಡೆಗೆ ಹೋಗುವ ಕ್ರಾಸ್ ರಸ್ತೆಯ ಬಳಿ ತಲುಪಿದಾಗ ರಸ್ತೆಯ ಬದಿಯಲ್ಲಿ  ಶಾಲೆಗೆ ಹೋಗುವ ಮಕ್ಕಳು ನಿಂತು ಕೊಂಡಿದ್ದು ಆ ಸಮಯ  ಕಂಬದಕೋಣೆ ಕಡೆಯಿಂದ KA 29 M 8132 ನೇ ಟಾಟಾ ನ್ಯಾನೋ ಕಾರು ಚಾಲಕಿ  ಪ್ರತಿಮಾ ರವರು ಅವರ ಬಾಬ್ತುಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೆಟ್ಟಿನ ಹೊಳೆ ಕ್ರಾಸ್  ಬಳಿ ಎದುರಿನಿಂದ ಬರುತ್ತಿದ್ದ  ಬೈಕ್ ಗೆ ದಾರಿ ಕೊಡುವ ಭರದಲ್ಲಿ ಕಾರನ್ನು ರಸ್ತೆಯ ತೀರ ಎಡಕ್ಕೆ  ಮಣ್ಣು ರಸ್ತೆಯಲ್ಲಿ  ಚಲಾಯಿಸಿ ಶಾಲೆಗೆ  ಹೋಗಲು ಬಸ್ಸಿಗೆ  ಕಾಯುತ್ತಿದ್ದ  2 ಹೆಣ್ಣು ಮಕ್ಕಳಿಗೆ ಡಿಕ್ಕಿಹೊಡೆದ ಪರಿಣಾಮ  ಮಕ್ಕಳಿಬ್ಬರು ರಸ್ತೆ  ಬಿದ್ದಿದ್ದು  ಫಿರ್ಯಾದಿದಾರರು  , ಸುಧಾಕರ ಹಾಗೂ ಇತರರ ಸಹಾಯದಿಂದ ಮಕ್ಕಳನ್ನು ಎತ್ತಿ  ಉಪಚರಿಸಿ ವಿಚಾರಿಸಿದಲ್ಲಿ  ಬಾಲಕಿ  ಅನುಶ್ರೀ  ಗೆ ಕೈ ಗೆ ಕಾಲಿಗೆ  ತರಚಿದ ಗಾಯ ಹಾಗೂ ಇನ್ನೊಂದು  ಬಾಲಕಿ  ಚೇತನಾಳಿಗೆ ಬಲ ಕಾಲಿಗೆ ಒಳ ಜಖಂ  ಹಾಗೂ ಕೈ ಗೆ ತರಚಿದ ಗಾಯವಾಗಿದ್ದು  ಗಾಯಗೊಂಡವರನ್ನು  ಫಿರ್ಯಾದಿದಾರರು , ಸುಧಾಕರ ಹಾಗೂ ಕಾರಿನ ಚಾಲಕಿ ಪ್ರತೀಮಾ ರವರೊಂದಿಗೆ ಚಿಕಿತ್ಸೆ ಬಗ್ಗೆ  ಕಾರಿನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದು ಕೊಂಡು ಹೋದಲ್ಲಿ  ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ:279, 337  ಐಪಿಸಿಯಂತೆ ನಂತೆ  ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿ ಸುಶೀಲ  ಇವರು  ತಾಯಿ ಅಬ್ಬಕ್ಕ  ಪ್ರಾಯ:63 ವರ್ಷ ರವರೊಂದಿಗೆ ಕೆರ್ಗಾಲು ಗ್ರಾಮದ  ನಾಯ್ಕನಕಟ್ಟೆ  ಚರುಮಕ್ಕಿ  ಗೋವೆ ಮನೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು  ಅವರ ತಾಯಿ ಅಬ್ಬಕ್ಕ ರವರು   ಒಂದು ವರ್ಷದ ಹಿಂದೆ  ಮನೆಯಲ್ಲಿ ಕಾಲು ಜಾರಿ ಬಿದ್ದು  ತಲೆಗೆ ಸ್ವಲ್ಪ ಪೆಟ್ಟಾಗಿ  ಚಿಕಿತ್ಸೆ ಪಡೆದಿದ್ದು ನಂತರ ಮಾನಸಿಕ ಖಿನ್ನತೆಯಿಂದ ಇರುತ್ತಿದವರು ದಿನಾಂಕ  08/03/2023 ರಂದು ಬೆಳಿಗ್ಗೆ  09:30 ಗಂಟೆಗೆ  ಫಿರ್ಯಾದಿದಾರರು ಮಗಳಾದ ಆಧ್ಯಾಳನ್ನು  ನಾಯ್ಕನಕಟ್ಟೆ  ಶಾಲೆಗೆ ಬಿಡಲು ಹೋದ ಸಮಯ  ಬೆಳಿಗ್ಗೆ 09:30 ಗಂಟೆಯಿಂದ  11:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಎದುರಿನ ಪಂಚಾಯತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ  ಬಗ್ಗೆ ಬೈಂದೂರು ಠಾಣೆ ಯುಡಿಆರ್‌  13/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 09-03-2023 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080