ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು : ದಿನಾಂಕ 08.03.2021  ರಾತ್ರಿ 10.15 ಗಂಟೆ ಸುಮಾರಿಗೆ  ಪಿರ್ಯಾದಿ ಚಿತ್ತನ್ ಕುಮಾರ್ ಇವರು ಮೂಳೂರು ಎಸ್ ಎಂ ನರ್ಸರಿ ಹತ್ತಿರ  ಇರುವಾಗ   ರಾ.ಹೆ. 66 ರ ಮಂಗಳೂರು ಉಡುಪಿ ರಸ್ತೆ ಬದಿಯಲ್ಲಿದ್ದ ಸುಮಾರು 35 ರಿಂದ 40 ವರ್ಷ ಪ್ರಾಯದ ಓರ್ವ ವ್ಯಕ್ತಿಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅಲ್ತಾಫ್ ಎಂಬವನು ತನ್ನ ಬಾಬ್ತು ಬುಲೆಟ್ ನಂಬ್ರ ಕೆ ಎ 20 ಇ ಟಿ 5639 ನೇ ದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸದ್ರಿ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಆ  ವ್ಯಕ್ತಿ ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗ ಸಾರ್ವಜನಿಕರೊಂದಿಗೆ ಸದ್ರಿ ವ್ಯಕ್ತಿಯನ್ನು ಉಪಚರಿಸಿ ನೋಡಿದಲ್ಲಿ ಆತನು ಮಾತನಾಡದೇ ಇದ್ದು, ಪಿರ್ಯಾದಿದಾರರು ಆತನನ್ನು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಆತನನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆಯಲ್ಲಿದ್ದ ಸದ್ರಿ ಗಾಯಾಳು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 09-03-2021 ರಂದು ಬೆಳಗ್ಗೆ 04:00 ಗಂಟೆಗೆ ಸಮಯಕ್ಕೆ ಮೃತಪಟ್ಟಿರುತ್ತಾರೆ ಈ ಅಪಘಾತದಲ್ಲಿ ಬುಲಟ್ ಸವಾರ ತನ್ನ ಬುಲೆಟ್ ಸಹಿತ ರಸ್ತೆಗೆ ಬಿದ್ದಿರುತ್ತಾನೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021  ಕಲಂ 279 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 08/03/2021 ರಂದು ರಾತ್ರಿ 10.30 ಗಂಟೆಯ ಸಮಯಕ್ಕೆ ಕಟಪಾಡಿ ಜಂಕ್ಷನ್ ಸಮೀಪ ಇರುವಾಗ ಪಿರ್ಯಾದಿ ನವಾಬ ಅಹಮ್ಮದ್ ಇವರ ಪರಿಚಯದ ಸಾಹೇಬ್ ಜಾನ್ ರವರು ತನ್ನ ಬಾಬ್ತು ಕೆ.ಎ. 55 ಡಬ್ಲ್ಯೂ 4559 ಸ್ಕೂಟರ್‌ನಲ್ಲಿ ಸಹ ಸವಾರಿಣಿಯಾಗಿ ಮಗಳು ಸುಮನಾಬಾನು ರವರನ್ನು ಕುಳ್ಳರಿಸಿಕೊಂಡು ಕಟಪಾಡಿ ಬಸ್‌ ನಿಲ್ದಾಣದಿಂದ ಶಿರ್ವ ಕಡೆ ಹೋಗುವ ರಸ್ತೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಂಗಳೂರು ಉಡುಪಿ ರಾ ಹೆ 66 ರಲ್ಲಿ,  ಮಂಗಳೂರು ಕಡೆಯಿಂದ  ನಾಗರಾಜ ಎಂಬವರು  ತನ್ನ ಬಾಬ್ತು ಕೆ.ಎ.19 ಎ.ಎ. 0621 ನೇ ಟೆಂಪೋ ಟ್ರಾವೆಲ್ಲರ್‌ನ್ನು   ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಸಾಹೇಬ್ ಜಾನ್ ರವರ ಸ್ಕೂಟರ್‌ಗೆ ಹಾಗೂ  ಕಟಪಾಡಿ ಜಂಕ್ಷನ್‌ನಲ್ಲಿರುವ ಸಿ.ಸಿ.  ಕ್ಯಾಮೆರಾದ ಕಂಬಕ್ಕೆ ಢಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿ ನಿಂತಿರುತ್ತದೆ. ಪರಿಣಾಮ ಸ್ಕೂಟರ್ ಸವಾರ ಹಾಗೂ ಸಹ ಸವಾರಿಣಿ, ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಸ್ಥಳ್ಕಕೆ ಹೋಗಿ ಸಾರ್ವಜನಿಕರೊಂದಿಗೆ ಉಪಚರಿಸಿ ನೋಡಿದ್ದು ಸಾಹೇಬ್ ಜಾನ್ ರವರಿಗೆ ತಲೆಯ ಹಿಂಬದಿ, ಬಲಕಿವಿ ಬಳಿ, ಬಲ ಬೆನ್ನಿನ ಹತ್ತಿರ, ಬಲಬದಿ ಕೈಯ ಹತ್ತಿರ. ಗುದ್ದಿದ ನೋವಾಗಿದ್ದು, ಸಹ ಸವಾರಿಣಿಯಾದ ಸುಮನಾಬಾನು ರವರಿಗೆ ಬಲಕೈಗೆ, ಬಲಭುಜಕ್ಕೆ ತೀವೃ ನೋವಾಗಿದ್ದು, ಪಿರ್ಯಾದಿದಾರರು ಅವರಿಬ್ಬನ್ನು ಒಂದು ವಾಹನದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ  ಅಲ್ಲಿನ  ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಅಪಘಾತದಿಂದ ಟೆಂಪೋ ಟ್ರವೆಲ್ಲರ್‌ನಲ್ಲಿರುವವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದಿರುತ್ತದೆ.  ಅಲ್ಲದೇ ಟೆಂಪೋ ಟ್ರಾವೆಲ್ಲರ್ ಸಿ.ಸಿ. ಕ್ಯಾಮೆರಾ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಿ.ಸಿ. ಕ್ಯಾಮೆರಾ ಹಾಗೂ ಸಿ.ಸಿ. ಕ್ಯಾಮೆರಾದ ಕಂಬವು ಸಹ ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021  ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-03-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080