ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದ ಮುಡೂರ (66), ತಂದೆ:ದಿ.ಗೋವಿಂದ ಪೂಜಾರಿ, ವಾಸ:ಕಳಿಹಿತ್ಲು ಜಾಮೀಯಾ ಮಸೀದಿ ಹಿಂಬದಿ, ನಾಗೂರು, ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 08/01/2022 ರಂದು ತನ್ನ ಮನೆಯಾದ ನಾಗೂರಿನಿಂದ ಪರಿಚಯದ ಡಿ.ಎಂ ಗೌಸ್ ರವರ ಅಕ್ಕನ ಮನೆಗೆ  ಕೆಲಸದ ಸಲುವಾಗಿ ಡಿ.ಎಂ ಗೌಸ್ ರವರ KA-20-EV-4649 ನೇ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರರಾಗಿ ಕುಳಿತುಕೊಂಡು ಹೋಗುತ್ತಾ ಕಿರಿಮಂಜೇಶ್ವರ ಗ್ರಾಮದ ನಾಗೂರು ಜಾಮೀಯ ಮಸೀದಿ ಬಳಿಯ ರಾ.ಹೆ 66 ರ ಪಶ್ಚಿಮ ಬದಿಯ ರಸ್ತೆಯ ಪಶ್ಚಿಮ ಅಂಚಿನ ಮಣ್ಣು ರಸ್ತೆಯಲ್ಲಿ ಮೋಟಾರು ಸೈಕಲ್ ನ್ನು ಕುಂದಾಪುರ ಕಡೆಗೆ ಹೋಗಲು ನಿಲ್ಲಿಸಿಕೊಂಡಿದ್ದಾಗ, ಮಧ್ಯಾಹ್ನ 3:45 ಗಂಟೆಗೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಾ ಹೆ 66 ರಸ್ತೆಯಲ್ಲಿ ಆರೋಪಿ MH-07-AJ-2702 ನೇ ಬೊಲೆರೋ ಪಿಕಪ್ ವಾಹನದ ಚಾಲಕ ತನ್ನ ಪಿಕಪ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು KA-20-EV-4649 ನೇ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೊಟಾರು ಸೈಕಲ್ ಸವಾರ ಡಿ.ಎಂ ಗೌಸ್ ಹಾಗೂ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತಲೆಯ ಹಿಂಬದಿಗೆ, ಎಡಭುಜಕ್ಕೆ ಮತ್ತು ಬಲ ಭಾಗದ ಮೊಣಗಂಟಿಗೆ ತೀವ್ರ ತರಹದ ಗಾಯವಾಗಿದ್ದು ,ಡಿ.ಎಂ.ಗೌಸ್ ರವರಿಗೆ ಬಲ ಕೈ ಮತ್ತು ಬಲ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮುಡೂರ ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಹಾಗೂ ಡಿ.ಎಂ.ಗೌಸ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ 

  • ಕೊಲ್ಲೂರು : ಪಿರ್ಯಾದಿದಾರರಾದ ಶ್ರೀಜಿತ್ ಪಿ ಆರ್ (31),ತಂದೆ: ಪಿ. ಕೆ ರವಿ ,ವಾಸ: ಕಲ್ಯಾಣಿಗುಡ್ಡೆ ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ಕೊಲ್ಲೂರಿನಲ್ಲಿರುವ ಅಂಬಿಕಾ ಹೋಟೇಲ್ ನನ್ನು ದಿನಾಂಕ 08/01/2022 ರಂದು ಮಧ್ಯಾಹ್ನ 2:00 ಗಂಟೆ ಸಮಯಕ್ಕೆ ಬಂದ್ ಮಾಡಿ ಬೀಗ ಹಾಕಿ ಹೋಗಿದ್ದು ದಿನಾಂಕ 09/01/2022 ರಂದು ಬೆಳಿಗ್ಗೆ 06:00 ಗಂಟೆಗೆ ಹೋಟೇಲ್ ಬಳಿ ಬಂದು ನೋಡಿದಾಗ ಹೋಟೇಲ್ ಹಿಂಬದಿಯ ಸ್ಟೇರ್ ಕೇಸ್ ನಿಂದ ಬಂದು ಹಿಂಬದಿ ಬಾಗಿಲಿಗೆ ಹಾಕಿದ ಚಿಲ್ಕವನ್ನು ಒಳಗಿನಿಂದ ತೆಗೆದು ಹಣದ ಡಾವರ್ ನಲ್ಲಿದ್ದ 560/- ರೂಪಾಯಿ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 09-01-2022 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080