ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (52), ತಂದೆ: ದಿ. ಮಹಾಲಿಂಗ ಶೆಟ್ಟಿ, ವಾಸ: ಬಗ್ವಾಡಿ, ಹೊಸಮನೆ ಗ್ರಾಮ ನೂಜಾಡಿ ಕುಂದಾಪುರ ಇವರು ದಿನಾಂಕ 07/11/2022 ರಂದು ತನ್ನ ಕೆಲಸದ ಕೆಲಸದ ನಿಮಿತ್ತ ಮೊಟಾರು ಸೈಕಲ್‌ ನಂಬ್ರ KA-20-EN-0576ನೇದರಲ್ಲಿ ಬಗ್ವಾಡಿಯಿಂದ ವಂಡ್ಸೆ ಕಡೆಗೆ ರಸ್ತೆಯಲ್ಲಿ ಮೋಟಾರ್‌ಸೈಕಲ್‌ ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ 08:30 ಗಂಟೆಗೆ ಮೂಡು ಬಗ್ವಾಡಿ ಶ್ರೀಧರ ನಾಯಕರ ಮನೆಯ  ಬಳಿ ರಸ್ತೆಯಲ್ಲಿ ವಂಡ್ಸೆ ಕಡೆಯಿಂದ KA-14-C-3626  ನೇ  ಪಿಕ್‌ಅಪ್‌ ಬೋಲೆರೋ ವಾಹನವನ್ನು ಅದರ ಚಾಲಕನು  ಅತೀವೇಗ  ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ ಮೂಳೆಗೆ  ಪೆಟ್ಟಾಗಿದ್ದು, ಕೈ ಕಾಲುಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 279, 337 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.    
  • ಕಾಪು: ಪಿರ್ಯಾದಿದಾರರಾದ ಮುತ್ತುವೇನ್ (39), ತಂದೆ : ಕುಮಾರ ಸ್ವಾಮಿ, ವಾಸ : ಶ್ರೀ ಕೃಷ್ಣ ಹಾಟ್ ಚಿಪ್ಸ್,  ಮಸೀದಿ ರಸ್ತೆ, ಶಂಕರ  ಬಿಲ್ಡಿಂಗ್ ಎದುರು ಉಡುಪಿ ಹಾಗೂ ಅವರ ಸ್ನೇಹಿತ್ ರಾಮರ್ ರವರು ದಿನಾಂಕ 07/11/2022 ರಂದು ಸಂಜೆ 7:30 ಗಂಟೆಗೆ ಉದ್ಯಾವರ ಜೈಹಿಂದ್ ಕಾಂಪ್ಲೇಕ್ಸ್‌ಬಳಿ ಇರುವಾಗ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಏಕಮುಖ ಸಂಚಾರ ರಸ್ತೆಯಲ್ಲಿ ಶರವಣನ್ ರವರು ಅವರ KA-20-EB-. 8375ನೇ ಮೋಟಾರು ಸೈಕಲ್‌‌ನಲ್ಲಿ ಉಡುಪಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ಉದ್ಯಾವರ ಗ್ರಾಮ ಜೈಹಿಂದ ಕಾಂಪ್ಲೇಕ್ಸ್ ನ ಎದುರಿನ ಡಿವೈಡರ್‌ನ್ನು ದಾಟಿ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಅದೇ ರಸ್ತೆಯಲ್ಲಿ ಅವರ ಹಿಂದಿನಿಂದ ಹನೀಷ್‌ರವರು ತನ್ನ KA-20-MA-8780 ನೇ ನಂಬ್ರ ECO  ವ್ಯಾನ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶರವಣನ್ ರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಶರವಣನ್ ರವರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಹಾಗೂ ರಾಮರ್ ರವರು ಸ್ಥಳಕ್ಕೆ  ಹೋಗಿ ಶರವಣನ್ ರವರನ್ನು ಉಪಚರಿಸಿ ನೋಡಲಾಗಿ ಅವರ ತಲೆಗೆ  ತೀವೃ ರಕ್ತಗಾಯವಾಗಿದ್ದು, ಕೈಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, 108 ವಾಹನದಲ್ಲಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿಕೊಂಡಿರುತ್ತಾರೆ. ಮೋಟಾರು ಸೈಕಲ್‌ನ ಹಿಂಭಾಗ ಹಾಗೂ ECO ವ್ಯಾನ್‌ನ ಮುಂಭಾಗ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 122/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ವರ್ಗೀಸ್ ಪಿ(56), ತಂದೆ: ಪೌಲೋಸ್  ಕೆ ಇ,  ಇವರು ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಪ್ರಾಚಾರ್ಯ ರಾಗಿದ್ದು ದಿನಾಂಕ 05/11/2022 ರಂದು ಮಧ್ಯಾಹ್ನ 1:00 ಗಂಟೆಗೆ ಕಾಲೇಜಿನ ಕೊಠಡಿಗಳಿಗೆ  ಬೀಗ ಹಾಕಿ ಹೋಗಿದ್ದು, ದಿನಾಂಕ  07/11/2022 ರಂದು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಬಂದು ನೋಡುವಾಗ ಕಾಲೇಜಿನ ಪ್ರಾಚಾರ್ಯರ ಕೊಠಡಿ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ  ಕಪಾಟಿನ ಬೀಗ ಮುರಿದು ಕಪಾಟಿನ ಒಳಗೆ ಇದ್ದ ಸರ್ಕಾರದಿಂದ ಜಿಲ್ಲಾ ಮಟ್ಟದ ಉತ್ತಮ ಪಲಿತಾಂಶಕ್ಕಾಗಿ ಕೊಟ್ಟ 10 ಗ್ರಾಂ ಚಿನ್ನದ ಪದಕ  ಮತ್ತು  5 ಗ್ರಾಂ ಚಿನ್ನದ ಪದಕ ಹಾಗೂ ಕಛೇರಿಯ ಕಪಾಟಿನಲ್ಲಿರುವ 5100 ನಗದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವು ಮಾಡಿಕೊಂಡು ಹೋಗಿರುವ ವಸ್ತುವಿನ  ಒಟ್ಟು ಮೌಲ್ಯ ರೂಪಾಯಿ 75,100/- ಅಗಿರುತ್ತದೆ. ಅಲ್ಲದೇ ಕಾಲೇಜಿನ ಕಂಪೌಂಡಿನ ಒಳಗೆ ಇರುವ ಸರ್ಕಾರಿ ಪ್ರೌಡಶಾಲಾ ವಿಭಾಗದ ಮುಖ್ಯೋಪಾದ್ಯಾಯರ ಕೊಠಡಿ ಮತ್ತು ಕಛೇರಿಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92 /2022 ಕಲಂ: 393 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 08-11-2022 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080