Feedback / Suggestions

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (52), ತಂದೆ: ದಿ. ಮಹಾಲಿಂಗ ಶೆಟ್ಟಿ, ವಾಸ: ಬಗ್ವಾಡಿ, ಹೊಸಮನೆ ಗ್ರಾಮ ನೂಜಾಡಿ ಕುಂದಾಪುರ ಇವರು ದಿನಾಂಕ 07/11/2022 ರಂದು ತನ್ನ ಕೆಲಸದ ಕೆಲಸದ ನಿಮಿತ್ತ ಮೊಟಾರು ಸೈಕಲ್‌ ನಂಬ್ರ KA-20-EN-0576ನೇದರಲ್ಲಿ ಬಗ್ವಾಡಿಯಿಂದ ವಂಡ್ಸೆ ಕಡೆಗೆ ರಸ್ತೆಯಲ್ಲಿ ಮೋಟಾರ್‌ಸೈಕಲ್‌ ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ 08:30 ಗಂಟೆಗೆ ಮೂಡು ಬಗ್ವಾಡಿ ಶ್ರೀಧರ ನಾಯಕರ ಮನೆಯ  ಬಳಿ ರಸ್ತೆಯಲ್ಲಿ ವಂಡ್ಸೆ ಕಡೆಯಿಂದ KA-14-C-3626  ನೇ  ಪಿಕ್‌ಅಪ್‌ ಬೋಲೆರೋ ವಾಹನವನ್ನು ಅದರ ಚಾಲಕನು  ಅತೀವೇಗ  ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ ಮೂಳೆಗೆ  ಪೆಟ್ಟಾಗಿದ್ದು, ಕೈ ಕಾಲುಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 279, 337 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.    
  • ಕಾಪು: ಪಿರ್ಯಾದಿದಾರರಾದ ಮುತ್ತುವೇನ್ (39), ತಂದೆ : ಕುಮಾರ ಸ್ವಾಮಿ, ವಾಸ : ಶ್ರೀ ಕೃಷ್ಣ ಹಾಟ್ ಚಿಪ್ಸ್,  ಮಸೀದಿ ರಸ್ತೆ, ಶಂಕರ  ಬಿಲ್ಡಿಂಗ್ ಎದುರು ಉಡುಪಿ ಹಾಗೂ ಅವರ ಸ್ನೇಹಿತ್ ರಾಮರ್ ರವರು ದಿನಾಂಕ 07/11/2022 ರಂದು ಸಂಜೆ 7:30 ಗಂಟೆಗೆ ಉದ್ಯಾವರ ಜೈಹಿಂದ್ ಕಾಂಪ್ಲೇಕ್ಸ್‌ಬಳಿ ಇರುವಾಗ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಏಕಮುಖ ಸಂಚಾರ ರಸ್ತೆಯಲ್ಲಿ ಶರವಣನ್ ರವರು ಅವರ KA-20-EB-. 8375ನೇ ಮೋಟಾರು ಸೈಕಲ್‌‌ನಲ್ಲಿ ಉಡುಪಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ಉದ್ಯಾವರ ಗ್ರಾಮ ಜೈಹಿಂದ ಕಾಂಪ್ಲೇಕ್ಸ್ ನ ಎದುರಿನ ಡಿವೈಡರ್‌ನ್ನು ದಾಟಿ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಅದೇ ರಸ್ತೆಯಲ್ಲಿ ಅವರ ಹಿಂದಿನಿಂದ ಹನೀಷ್‌ರವರು ತನ್ನ KA-20-MA-8780 ನೇ ನಂಬ್ರ ECO  ವ್ಯಾನ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶರವಣನ್ ರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಶರವಣನ್ ರವರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಹಾಗೂ ರಾಮರ್ ರವರು ಸ್ಥಳಕ್ಕೆ  ಹೋಗಿ ಶರವಣನ್ ರವರನ್ನು ಉಪಚರಿಸಿ ನೋಡಲಾಗಿ ಅವರ ತಲೆಗೆ  ತೀವೃ ರಕ್ತಗಾಯವಾಗಿದ್ದು, ಕೈಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, 108 ವಾಹನದಲ್ಲಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿಕೊಂಡಿರುತ್ತಾರೆ. ಮೋಟಾರು ಸೈಕಲ್‌ನ ಹಿಂಭಾಗ ಹಾಗೂ ECO ವ್ಯಾನ್‌ನ ಮುಂಭಾಗ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 122/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ವರ್ಗೀಸ್ ಪಿ(56), ತಂದೆ: ಪೌಲೋಸ್  ಕೆ ಇ,  ಇವರು ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಪ್ರಾಚಾರ್ಯ ರಾಗಿದ್ದು ದಿನಾಂಕ 05/11/2022 ರಂದು ಮಧ್ಯಾಹ್ನ 1:00 ಗಂಟೆಗೆ ಕಾಲೇಜಿನ ಕೊಠಡಿಗಳಿಗೆ  ಬೀಗ ಹಾಕಿ ಹೋಗಿದ್ದು, ದಿನಾಂಕ  07/11/2022 ರಂದು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಬಂದು ನೋಡುವಾಗ ಕಾಲೇಜಿನ ಪ್ರಾಚಾರ್ಯರ ಕೊಠಡಿ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ  ಕಪಾಟಿನ ಬೀಗ ಮುರಿದು ಕಪಾಟಿನ ಒಳಗೆ ಇದ್ದ ಸರ್ಕಾರದಿಂದ ಜಿಲ್ಲಾ ಮಟ್ಟದ ಉತ್ತಮ ಪಲಿತಾಂಶಕ್ಕಾಗಿ ಕೊಟ್ಟ 10 ಗ್ರಾಂ ಚಿನ್ನದ ಪದಕ  ಮತ್ತು  5 ಗ್ರಾಂ ಚಿನ್ನದ ಪದಕ ಹಾಗೂ ಕಛೇರಿಯ ಕಪಾಟಿನಲ್ಲಿರುವ 5100 ನಗದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವು ಮಾಡಿಕೊಂಡು ಹೋಗಿರುವ ವಸ್ತುವಿನ  ಒಟ್ಟು ಮೌಲ್ಯ ರೂಪಾಯಿ 75,100/- ಅಗಿರುತ್ತದೆ. ಅಲ್ಲದೇ ಕಾಲೇಜಿನ ಕಂಪೌಂಡಿನ ಒಳಗೆ ಇರುವ ಸರ್ಕಾರಿ ಪ್ರೌಡಶಾಲಾ ವಿಭಾಗದ ಮುಖ್ಯೋಪಾದ್ಯಾಯರ ಕೊಠಡಿ ಮತ್ತು ಕಛೇರಿಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92 /2022 ಕಲಂ: 393 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 08-11-2022 09:32 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080