ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕೋಟ: ಪಿರ್ಯಾದಿ ರಾಜೇಶ್‌ ಪೂಜಾರಿ ಇವರು ಬೆಂಗಳೂರಿನ ಮಡಿವಾಳದಲ್ಲಿ ಹೋಟೇಲ್‌ ವ್ಯವಹಾರ ಮಾಡಿಕೊಂಡಿಕೊಂಡಿದ್ದು. 2022 ನೇ ಮೇ 4 ರಂದು ಮದುವೆ ಕಾರ್ಯಕ್ರಮದ ನಿಮಿತ್ತ ಊರಿಗೆ ಬಂದಿದ್ದು ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸು ಬೆಂಗಳೂರಿಗೆ ಹೋಗುವ ಸಮಯ ಪಿರ್ಯಾದಿದಾರರು ಹಾಗೂ  ಹೆಂಡತಿ  ಹಾಗೂ ಮಗುವಿನ ಬಾಬ್ತು ಚಿನ್ನದ ಆಭರಣಗಳನ್ನು ತಮ್ಮ ಮೂಲಮನೆಯಾದ ಸಾಸ್ತಾನ ಪಾಂಡೇಶ್ವರ ದಲ್ಲಿ ಮನೆಯ ಗೋಡ್ರೇಜ್‌ ನಲ್ಲಿಯೇ ಇಟ್ಟಿರುತ್ತಾರೆ. ಹಾಗೂ ಹಳೆಯ ಮನೆಯಾಗಿದ್ದರಿಂದ ರಿಪೇರಿಗೆಂದು 4,05,000/- ನಗದು ಹಣವನ್ನು ಸಹ ತಂದಿಟ್ಟು ಹೋಗಿರುತ್ತಾರೆ. ದಿನಾಂಕ: 07.09.2022 ರಂದು ಬೆಳಿಗ್ಗೆ 6:30 ಗಂಟೆಗೆ ಪಿರ್ಯಾದಿದಾರರ  ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ರವರು ಪಿರ್ಯಾದಿದಾರರ ಮನೆಯ ಕಲ್ಲುಕುಟಿಗ ದೇವಸ್ಥಾನಕ್ಕೆ ಪೂಜೆಗೆಂದು ಬಂದವರು ಪಿರ್ಯಾದಿದಾರರ  ಮನೆಯ ಬಳಿ ಬಂದಾಗ ಬಾಗಿಲಿಗೆ ಚಿಲಕ ಹಾಕಿ ಲಾಕ್‌ ಹಾಕದೇ ಇರುವುದನ್ನು ಗಮನಿಸಿ ಬಾಗಿಲು ತೆರೆದು ಮನೆಯ ಒಳ ಹೋದಾಗ ಮನೆಯ ಕೋಣೆಗಳಲ್ಲಿನ ಗೋಡ್ರೇಜ್‌ ಗಳು ಮಾತ್ರ ತೆರೆದುಕೊಂಡಿರುವುದು ಕಂಡು ಬಂದಿದ್ದು ಕಳವು ನಡೆದಿರಬಹುದೆಂಬ ಸಂಶಯದಿಂದ ಅವರು ಪಿರ್ಯಾದಿದಾರರ  ತಮ್ಮನಿಗೆ ಮಾಹಿತಿ ತಿಳಿಸಿರುತ್ತಾರೆ. ತಮ್ಮ ಮನೆಗೆ ಬಂದು ಪರಿಶೀಲಿಸಿ ಕಳವು ಆಗಿರುವುದನ್ನು ಖಚಿತಪಡಿಸಿಕೊಂಡು ಪಿರ್ಯಾದಿದಾರರಿಗೆ ಮಾಹಿತಿ ತಿಳಿಸಿರುತ್ತಾನೆ. ವಿಚಾರ ತಿಳಿದು ಪಿರ್ಯಾದಿದಾರರು  ಕೂಡಲೇ ಬೆಂಗಳೂರಿನಿಂದ ಹೊರಟು ದಿನಾಂಕ: 08.09.2022 ರಂದು ಬೆಳಿಗ್ಗೆ ಮನೆಗೆ ಬಂದು ಪರಿಶೀಲಿಸಿದಾಗ ಪಿರ್ಯಾದಿದಾರರ ಮತ್ತು ಹೆಂಡತಿ ಮಗುವಿನ ಬಾಬ್ತು ಸುಮಾರು 11.50 ಲಕ್ಷ ಮೌಲ್ಯದ ಒಟ್ಟು 291 ಗ್ರಾಮ್‌ ಚಿನ್ನದ ಆಭರಣಗಳು ಮತ್ತು ಹಳೆ ಮನೆ ರಿಪೇರಿಗೆಂದು ತಂದಿಟ್ಟಿದ್ದ ರೂ. 4,05,000/- ನಗದು ಹಣ ಕಳವು ಆಗಿರುತ್ತದೆ. ದಿನಾಂಕ: 02.09.2022 ರಂದು ಮಧ್ಯಾಹ್ನ 2:30 ಗಂಟೆಯಿಂದ ದಿನಾಂಕ: 07.09.2022 ರಂದು ಬೆಳಿಗ್ಗೆ 6:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯ ಕೋಣೆಯಲ್ಲಿದ್ದ 2 ಗೋಡ್ರೇಜ್‌ಗಳನ್ನು ಯಾವುದೋ ವಸ್ತುವಿನಿಂದ ಮೀಟಿ ಒಡೆದು ಅದರಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಒಟ್ಟು 291 ಗ್ರಾಮ್‌ ಚಿನ್ನದ ಆಭರಣಗಳು ಮತ್ತು ರೂ. 4,05,000/- ನಗದು ಹಣ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನದ ಆಭರಣ ಹಾಗೂ ನಗದು ಇವುಗಳ ಒಟ್ಟು ಮೌಲ್ಯ 14.05 ಲಕ್ಷ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 141/2022 ಕಲಂ: 454.457.380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 08-09-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080