ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಅಮ್ಮಣಿ ಬಾಯಿ (48) ಗಂಡ: ದಿವಾಕರ ನಾಯ್ಕ ವಾಸ: ಮೇಲ್‌ಬಾದ್ಲು, ಕುಚ್ಚೂರು ಗ್ರಾಮ, ಹೆಬ್ರಿ ಇವರ  ಗಂಡ ದಿವಾಕರ (57) ರವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು. ಇತೀಚೆಗೆ ಅವರು ಸರಿಯಾಗಿ ಕೆಲಸಕ್ಕೆ ಹೋಗದೇ ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ಯತೆಗೆ ಒಳಗಾಗಿ  ದಿನಾಂಕ 07/03/2022 ರಂದು ರಾತ್ರಿ 10:00 ಗಂಟೆಗೆ ಕುಚ್ಚೂರು ಗ್ರಾಮದ ಬಾದ್ಲು ಎಂಬಲ್ಲಿ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ಪಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ಉಡುಪಿ ಅಜ್ಜರಕಾಡು ಅಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಯನ್ನು ಕೂಡಿಸಿ ವೈದ್ಯರ ಸಲಹೆಯಂತೆ ಮರುದಿನ ದಿನಾಂಕ 08/03/2022 ರಂದು ಮುಂಜಾನೆ 01:30 ಗಂಟೆಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ದಾಖಲು ಮಾಡಿದ್ದು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮುಂಜಾನೆ 4:15 ಗಂಟೆಗೆ ಮೃತ ಪಟ್ಟಿದ್ದು. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಮತಿ ಪದ್ಮಾವತಿ (30) ಗಂಡ: ರಂಗು ವಾಸ:  ಬಾವಡಿ ಕೊಲ್ಲೂರು ಗ್ರಾಮ ಬೈಂದೂರು ಇವರ ಗಂಡ ರಂಗು (40) ರವರು ಸಾಲ ಮಾಡಿಕೊಂಡಿದ್ದು ಸಾಲವನ್ನು ಮರು ಪಾವತಿಸದೇ ಇದ್ದು ಬ್ಯಾಂಕ್ ಹಾಗೂ ಸೊಸೈಟಿ ಯವರು  ಮನೆಯ ಜಪ್ತಿಗೆ ಎಂದು ಮನೆಗೆ ಬಂದಿದ್ದು ಸಾಲವನ್ನು ಕಟ್ಟಲು ಸಾದ್ಯವಾಗದಿದ್ದರಿಂದ ದಿನಾಂಕ 07/03/2022 ರಮದು ರಾತ್ರಿ 08:00 ಗಂಟೆಯ ಸಮಯಕ್ಕೆ ಗದ್ದೆಗೆ ಹಾಕುವ  ಔಷದಿಯನ್ನು ಸೇವಿಸಿರುವುದಾಗಿ ಶ್ರೀಮತಿ ಪದ್ಮಾವತಿ ರವರಿಗೆ ತಿಳಿಸಿದ್ದು  ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ  ಆಸ್ಪತ್ರೆ ಗೆ ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ ದಿನಾಂಕ 08/03/2022ರಂದು 00:10 ಗಂಟೆಗೆ ಚಿಕಿತ್ಸೆಗೆ ತರುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ದೃಡೀಕರಿಸಿರುತ್ತಾರೆ. ಮೃತರು ವೀಪರೀತ ಮದ್ಯ ವೆಸನಿಯಾಗಿದ್ದು, ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು  ಜೀವನದಲ್ಲಿ ಜಿಗುಪ್ಸೆಗೊಂಡು ಹಾಗೂ ಸಾಲದ ಸಮಸ್ಯೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು  ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 04/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ರಜನಿ (40) ಗಂಡ: ದಯಾನಂದ ವಾಸ: ಶಿವ ಕೃಪಾ, ಶೀಂಬ್ರ ಗುಡ್ಡೆ ಹೌಸ್, ಕುಂಜಿಬೆಟ್ಟು ಪೋಸ್ಟ್ , ಶಿವಳ್ಳಿ  ಇವರು ಸುಮಾರು 14 ವರ್ಷಗಳ ಹಿಂದೆ ದಯಾನಂದ ಎಂಬುವರ ಜೊತೆಯಲ್ಲಿ ಮದುವೆಯಾಗಿದ್ದು ಸುಮಾರು 5-6 ವರ್ಷಗಳಿಂದ ರಜನಿ ರವರು ಗಂಡನಿಂದ ಬೇರೆಯಾಗಿದ್ದು, ವಿಚ್ಚದನಕ್ಕೆ ಅರ್ಜಿಯನ್ನು ಸಲ್ಲಿಸಿರುವುದಾಗಿದೆ, ದಿನಾಂಕ 07/03/2022 ರಂದು ಸಂಜೆ 06:00 ಗಂಟೆಯ ಸಮಯಕ್ಕೆ  ರಜನಿ ಇವರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕೆಲಸ ಮುಗಿಸಿ ಹೊರ ಬರುವಾಗ ಸಾರ್ವಜನಿಕ ರಸ್ತೆಯಲ್ಲಿ ದಯಾನಂದ ಇವರು ರಜನಿ ಇವರ ಅಡ್ಡಕಟ್ಟಿ ಕೈ ಹಿಡಿದು ಎಳೆದು ನೀನು ಯಾರೊಂದಿಗೆ ಇದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ನೀನು ನನ್ನನೊಂದಿಗೆ ಬರುವುದಿಲ್ಲವೆಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ, ರಟ್ಟೆ ಹಿಡಿದು ಹೊಡೆಯಲು ಬಂದಾಗ ರಜನಿ ರವರ ಜೊತೆಯಲ್ಲಿ ಕೆಲಸ ಮಾಡುವ ಮಾಲತಿ, ಶಕುಂತಲಾ, ನಾರಾಯಣ, ದೇವಕಿ ಬಿಡಿಸಲು ಬಂದಾಗ ಆರೋಪಿ ದಯಾನಂದ ಓಡಿ ಹೋಗಿರುವುದಾಗಿದೆ, ಸಾರ್ವಜನಿಕ ರಸ್ತೆಯಲ್ಲಿ ರಜನಿ ರವರ ಮಾನಕ್ಕೆ ಭಂಗ ಉಂಟಾಗುವ ರೀತಿಯಲ್ಲಿ ವರ್ತಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022, ಕಲಂ; 341, 354,504,506  ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.

ಇತ್ತೀಚಿನ ನವೀಕರಣ​ : 08-03-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080