Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಅಮ್ಮಣಿ ಬಾಯಿ (48) ಗಂಡ: ದಿವಾಕರ ನಾಯ್ಕ ವಾಸ: ಮೇಲ್‌ಬಾದ್ಲು, ಕುಚ್ಚೂರು ಗ್ರಾಮ, ಹೆಬ್ರಿ ಇವರ  ಗಂಡ ದಿವಾಕರ (57) ರವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು. ಇತೀಚೆಗೆ ಅವರು ಸರಿಯಾಗಿ ಕೆಲಸಕ್ಕೆ ಹೋಗದೇ ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ಯತೆಗೆ ಒಳಗಾಗಿ  ದಿನಾಂಕ 07/03/2022 ರಂದು ರಾತ್ರಿ 10:00 ಗಂಟೆಗೆ ಕುಚ್ಚೂರು ಗ್ರಾಮದ ಬಾದ್ಲು ಎಂಬಲ್ಲಿ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ಪಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ಉಡುಪಿ ಅಜ್ಜರಕಾಡು ಅಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಯನ್ನು ಕೂಡಿಸಿ ವೈದ್ಯರ ಸಲಹೆಯಂತೆ ಮರುದಿನ ದಿನಾಂಕ 08/03/2022 ರಂದು ಮುಂಜಾನೆ 01:30 ಗಂಟೆಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ದಾಖಲು ಮಾಡಿದ್ದು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮುಂಜಾನೆ 4:15 ಗಂಟೆಗೆ ಮೃತ ಪಟ್ಟಿದ್ದು. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಮತಿ ಪದ್ಮಾವತಿ (30) ಗಂಡ: ರಂಗು ವಾಸ:  ಬಾವಡಿ ಕೊಲ್ಲೂರು ಗ್ರಾಮ ಬೈಂದೂರು ಇವರ ಗಂಡ ರಂಗು (40) ರವರು ಸಾಲ ಮಾಡಿಕೊಂಡಿದ್ದು ಸಾಲವನ್ನು ಮರು ಪಾವತಿಸದೇ ಇದ್ದು ಬ್ಯಾಂಕ್ ಹಾಗೂ ಸೊಸೈಟಿ ಯವರು  ಮನೆಯ ಜಪ್ತಿಗೆ ಎಂದು ಮನೆಗೆ ಬಂದಿದ್ದು ಸಾಲವನ್ನು ಕಟ್ಟಲು ಸಾದ್ಯವಾಗದಿದ್ದರಿಂದ ದಿನಾಂಕ 07/03/2022 ರಮದು ರಾತ್ರಿ 08:00 ಗಂಟೆಯ ಸಮಯಕ್ಕೆ ಗದ್ದೆಗೆ ಹಾಕುವ  ಔಷದಿಯನ್ನು ಸೇವಿಸಿರುವುದಾಗಿ ಶ್ರೀಮತಿ ಪದ್ಮಾವತಿ ರವರಿಗೆ ತಿಳಿಸಿದ್ದು  ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ  ಆಸ್ಪತ್ರೆ ಗೆ ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ ದಿನಾಂಕ 08/03/2022ರಂದು 00:10 ಗಂಟೆಗೆ ಚಿಕಿತ್ಸೆಗೆ ತರುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ದೃಡೀಕರಿಸಿರುತ್ತಾರೆ. ಮೃತರು ವೀಪರೀತ ಮದ್ಯ ವೆಸನಿಯಾಗಿದ್ದು, ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು  ಜೀವನದಲ್ಲಿ ಜಿಗುಪ್ಸೆಗೊಂಡು ಹಾಗೂ ಸಾಲದ ಸಮಸ್ಯೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು  ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 04/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ರಜನಿ (40) ಗಂಡ: ದಯಾನಂದ ವಾಸ: ಶಿವ ಕೃಪಾ, ಶೀಂಬ್ರ ಗುಡ್ಡೆ ಹೌಸ್, ಕುಂಜಿಬೆಟ್ಟು ಪೋಸ್ಟ್ , ಶಿವಳ್ಳಿ  ಇವರು ಸುಮಾರು 14 ವರ್ಷಗಳ ಹಿಂದೆ ದಯಾನಂದ ಎಂಬುವರ ಜೊತೆಯಲ್ಲಿ ಮದುವೆಯಾಗಿದ್ದು ಸುಮಾರು 5-6 ವರ್ಷಗಳಿಂದ ರಜನಿ ರವರು ಗಂಡನಿಂದ ಬೇರೆಯಾಗಿದ್ದು, ವಿಚ್ಚದನಕ್ಕೆ ಅರ್ಜಿಯನ್ನು ಸಲ್ಲಿಸಿರುವುದಾಗಿದೆ, ದಿನಾಂಕ 07/03/2022 ರಂದು ಸಂಜೆ 06:00 ಗಂಟೆಯ ಸಮಯಕ್ಕೆ  ರಜನಿ ಇವರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕೆಲಸ ಮುಗಿಸಿ ಹೊರ ಬರುವಾಗ ಸಾರ್ವಜನಿಕ ರಸ್ತೆಯಲ್ಲಿ ದಯಾನಂದ ಇವರು ರಜನಿ ಇವರ ಅಡ್ಡಕಟ್ಟಿ ಕೈ ಹಿಡಿದು ಎಳೆದು ನೀನು ಯಾರೊಂದಿಗೆ ಇದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ನೀನು ನನ್ನನೊಂದಿಗೆ ಬರುವುದಿಲ್ಲವೆಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ, ರಟ್ಟೆ ಹಿಡಿದು ಹೊಡೆಯಲು ಬಂದಾಗ ರಜನಿ ರವರ ಜೊತೆಯಲ್ಲಿ ಕೆಲಸ ಮಾಡುವ ಮಾಲತಿ, ಶಕುಂತಲಾ, ನಾರಾಯಣ, ದೇವಕಿ ಬಿಡಿಸಲು ಬಂದಾಗ ಆರೋಪಿ ದಯಾನಂದ ಓಡಿ ಹೋಗಿರುವುದಾಗಿದೆ, ಸಾರ್ವಜನಿಕ ರಸ್ತೆಯಲ್ಲಿ ರಜನಿ ರವರ ಮಾನಕ್ಕೆ ಭಂಗ ಉಂಟಾಗುವ ರೀತಿಯಲ್ಲಿ ವರ್ತಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022, ಕಲಂ; 341, 354,504,506  ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.

Last Updated: 08-03-2022 06:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080