ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ಮೋಹನದಾಸ ಖಾರ್ವಿ ಇವರು ದಿನಾಂಕ 07-02-2022 ರಂದು  ಬೆಳಿಗ್ಗೆ  ನಾಗೂರು ಶ್ರೀ  ಆಂಜನೇಯ ದೇವಸ್ಥಾನಕ್ಕೆ  ಹೋಗಿ ಪೂಜೆ ಮುಗಿಸಿ ವಾಪಾಸು ಮನೆಗೆ ಬರುವರೇ ನಾಗೂರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಪಿರ್ಯಾದುದಾರರ ಬಾವ  ಶ್ರೀಧರ್  ರವರು ಅವರ  ಬಾಬ್ತು  KA 53 V 3089 ನೇ ಮೋಟಾರು ಸೈಕಲ್ ನಲ್ಲಿ  ಅವರ ಮಗಳು ಶ್ರಮಿತಾಳನ್ನು  ಕುಳ್ಳಿರಿಸಿಕೊಂಡು ರಾ.ಹೆ 66 ರಲ್ಲಿ ಉಪ್ಪುಂದದಿಂದ ಕಿರಿಮಂಜೇಶ್ವರ  ಕಡೆಗೆ ಬೈಕನ್ನು ಚಲಾಯಿಸಿಕೊಂಡು ಕಿರಿಮಂಜೇಶ್ವರ ಗ್ರಾಮದ ನಾಗೂರು ಬಸ್ ನಿಲ್ದಾಣದ ಬಳಿ ಬರುತ್ತಿರುವಾಗ ಸಮಯ  ಬೆಳಿಗ್ಗೆ 8:30 ಗಂಟೆಗೆ ಆರೋಪಿ KA 20 Y 5405 ನೇ   ಮೋಟಾರು ಸೈಕಲ್ ಸವಾರನು ಆತನ ಬಾಬ್ತುಮೋಟಾರು ಸೈಕಲ್ ನ್ನು ಉಪ್ಪುಂದ ಕಡೆಯಿಂದ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರ ಬಾವ ಶ್ರೀಧರ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ  ಮೋಟಾರು ಸೈಕಲ್ ನ್ನು ಬಲ ಬದಿಯಿಂದ ಓವರ್ ಟೇಕ್ ಮಾಡಿ  ಮುಂದೆ ಹೋಗಿ ಬೈಕ್ ನ್ನು  ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಆರೋಪಿತನ ಬೈಕ್ ಪಿರ್ಯಾದುದಾರರ ಭಾವ ಶ್ರೀಧರ್ ರವರ  ಬೈಕ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ  ಪಿರ್ಯಾದುದಾರರ ಭಾವ ಶ್ರೀದರ್ ರವರು  ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ  ಎಡ ಕೈ ಮೂಳೆ ಮುರಿತ ಉಂಟಾಗಿದ್ದು , ಬೈಕಿನ ಹಿಂದೆ ಕುಳಿತಿದ್ದ ಶ್ರೀಧರ್ ರವರ ಮಗಳು ಶ್ರಮಿತಾಳಿಗೆ   ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದುದಾರರು ಗಾಯಾಳು ಶ್ರೀಧರ್ ರವರನ್ನು ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ  ಕುಂದಾಪುರ ಶ್ರೀ ದೇವಿ ನರ್ಸಿಂಗ್ ಹೋಂ ಗೆ  ಕರೆದು ಕೊಂಡುಹೋಗಿ ಒಳರೊಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಅಸ್ವಾಭಾವಿಕ ಮರಣ ಪ್ರಕರಣ 

  • ಬೈಂದೂರು : ಪಿರ್ಯಾದಿದಾರರಾದ ಲೋಹಿತ್ ಪ್ರಾಯ:25 ವರ್ಷ ,ತಂದೆ: ಆನಂದ ಪೂಜಾರಿ,ವಾಸ: ಸೊನಗಾರಹಿತ್ಲು ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರ ಅಣ್ಣ ಮಣಿಕಂಠ (34) ರವರು ಚಿಕ್ಕಂದಿನಿಂದಲೂ ಬೇರೆ ಬೇರೆ ಊರುಗಳಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು ವರ್ಷಕ್ಕೆ 2-3 ಬಾರಿ ಊರಿಗೆ ಬಂದು ಹೋಗುತ್ತಿದ್ದು ಕಳೆದ 2 ತಿಂಗಳ ಹಿಂದೆ ಊರಿಗೆ ಬಂದಾಗ ತಾನು ಬೆಳಗಾಂ ನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಅಣ್ಣ ಮೂರು ದಿನಗಳ ಹಿಂದೆ ಊರಿಗೆ ಬಂದವರು ಮನೆಗೆ ಬಾರದೇ ಇದ್ದು, ದಿನಾಂಕ 08/02/2022 ರಂದು ಮದ್ಯಾಹ್ನ 2:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣಕ್ಕೆ ಜೀವನಲ್ಲಿ ಜಿಗುಪ್ಸೆಗೊಂಡು ಪಿರ್ಯಾದಿದಾರರು ಹೊಸದಾಗಿ ಕಟ್ಟುತ್ತಿರುವ ಯಡ್ತರೆ ಗ್ರಾಮದ ಸೊನಗಾರಹಿತ್ಲು ಎಂಬಲ್ಲಿನ ನಿರ್ಮಾಣ ಹಂತದ ಮನೆಯ ಬಳಿ ಇರುವ ಅಟ್ಲಮರಕ್ಕೆ ಪಂಚೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ : 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-02-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080