Feedback / Suggestions

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 08/02/2021 ರಂದು ಬೆಳಿಗ್ಗೆ 09:00 ಗಂಟೆಗೆ, ಕುಂದಾಪುರ ತಾಲೂಕಿನ, ಬಸ್ರೂರು ಗ್ರಾಮದ, ಮೇರ್ಡಿ ಎಂಬಲ್ಲಿ ರಾಜ್ಯ ಹೆದ್ದಾರಿ 52ರ ತಿರುವಿನ ಡಾಮಾರು ರಸ್ತೆಯ ಎಡಬದಿಯಲ್ಲಿ, ಆಪಾದಿತ ರಾಘವೇಂದ್ರ ಎಂಬುವವರು KA-20-U-3966ನೇ ಬೈಕನ್ನು ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ಯಾವುದೇ ಸೂಚನೆ ನೀಡದೇ ರಸ್ತೆಯ ಬಲಬದಿಗೆ ಒಮ್ಮೆಲೆ ತಿರುಗಿಸಿ ಆಪಾದಿತನ ಹಿಂಬದಿಯಲ್ಲಿ ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಪ್ರಸಾದ್(21), ತಂದೆ: ಸಂಜೀವ, ವಾಸ: ಕೆಳಂಜೆ ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನೋಂದಣಿ ನಂಬ್ರ ಇಲ್ಲದ ಹೊಸ ಬೈಕಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿ ಪಿರ್ಯಾಧಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಪರಿಣಾಮ ಅವರ ಎಡಕಾಲು ಹಾಗೂ ಎಡಕೈಗೆ ಮೂಳೆ ಮುರಿತದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಮಹೇಶ್. ಪಿ, ತಂದೆ: ರಮೇಶ್ ರಾವ್, ವಾಸ: 3/9 1ನೇ ಮುಖ್ಯ ರಸ್ತೆ, 5 ನೇ ಕ್ರಾಸ್, ವಿನಾಯಕ ನಗರ, ನಾಯಂಡಹಳ್ಳಿ , ಬೆಂಗಳೂರು ಜಿಲ್ಲೆ ಇವರ ತಂದೆ ರಮೇಶ್ ರಾವ್ ಪಿ.ಬಿ(63) ರವರು ವಿಪರೀತ ಮದ್ಯವ್ಯಸನಿಯಾಗಿದ್ದು 2002ನೇ ಇಸವಿಯಲ್ಲಿ ಸಂಸಾರವನ್ನು ತ್ಯಜಿಸಿ, ಒಬ್ಬಂಟಿಯಾಗಿ ಅಲ್ಲಲ್ಲಿ ವಾಸವಿದ್ದವರು, 15-20 ದಿನಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಬೆಂಗಳೂರಿನಲ್ಲಿ ವಾಸವಿದ್ದ ಅವರ ಅಕ್ಕನಲ್ಲಿ ಹೇಳಿ ಹೋಗಿದ್ದವರು, ದಿನಾಂಕ 07/2/2021 ರಂದು ಮಧ್ಯಾಹ್ನ  3:30 ಗಂಟೆಯ ಸುಮಾರಿಗೆ ಉಡುಪಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ರಜನಿ ಡಿಸೋಜ (36), ತಂದೆ : ಕಸ್ಪರ್, ಗಂಡ : ಮೈಕಲ್ ಪುರ್ಟಾಡೋ ವಾಸ : ಓಲ್ಡ ಐಲ್ಯಾಂಡ್ ಕೊಕ್ರಾಣಿ ಕಕ್ವ ಅಂಚೆ ಹೆಜಮಾಡಿ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಕಸ್ಪರ್ (66) ಎಂಬುವವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಕಸ್ಪರ್ ರವರು ಬೆಳಗ್ಗೆ 05:00 ಗಂಟೆಗೆ ಸಣ್ಣ ದೋಣಿಯೊಂದಿಗೆ ಅವರೊಬ್ಬರೇ ಸಮುದ್ರದಲ್ಲಿ ಮೀನುಗಾರಿಕೆ ಕೆಲಸ ಮಾಡಲು ಹೋಗುತ್ತಿದ್ದವರು, ದಿನಾಂಕ 08/02/2021 ರಂದು ಬೆಳಗ್ಗೆ 08.00 ಗಂಟೆಗೆ ಮನೆಯಿಂದ ಪಿರ್ಯಾದಿದಾರರಿಗೆ ಫೋನ್ ಮಾಡಿ ತಂದೆ ಕಸ್ಪರ್ ರವರು ಕಟ್ಟಿಮರ ದೋಣಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ಮೀನುಗಾರಿಕೆ ಮಾಡುವಾಗ ಆಕಸ್ಮಿಕವಾಗಿ ಸಮುದ್ರದ ಅಲೆ ಮೇಲೆದ್ದು, ದೋಣಿ ಮಗುಚಿ ದೋಣಿಯಲ್ಲಿದ್ದ ಬಲೆ ಕಾಲಿಗೆ ಸಿಕ್ಕಿಕೊಂಡು ಸಮುದ್ರದ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತ ಪಟ್ಟು ತೇಲುತ್ತಿರುವುದನ್ನು ಬೇರೆ ದೋಣಿಯವರು ನೋಡಿ ದಡಕ್ಕೆ ತೆಗೆದುಕೊಂಡು ಬಂದಿರುವುದಾಗಿ ಮಾಹಿತಿ ಬಂದಿರುವುದಾಗಿದೆ. ಈ ಬಗ್ಗೆ ಕಾಪು ಯುಡಿಆರ್‌ ಕ್ರಮಾಂಕ : 03/21 ಕಲಂ. 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 08/06/2020 ಕ್ಕಿಂತ ಮೊದಲು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸರ್ವೆ ನಂಬ್ರ: 110/2ರಲ್ಲಿ ಇರುವ ಸರಕಾರಿ ಜಾಗದಲ್ಲಿ 0.48 ಎಕ್ರೆ  ಪೋರಂಬೋಕು ಕೆರೆ ಜಮೀನಿಗೆ ಬೆಳ್ಮಣ್ ವಾಸಿ ದಿನೇಶ್ ಮೂಲ್ಯ ಎಂಬುವವರು ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ತೋಟ ನಿರ್ಮಾಣ ಮಾಡಿದ ಬಗ್ಗೆ ಕಂದಾಯ ನಿರೀಕ್ಷಕರು ಮುಂದಿನ ಕ್ರಮದ ಬಗ್ಗೆ ಕಾರ್ಕಳ ತಹಶೀಲ್ದಾರರಿಗೆ ಮುಂದಿನ ಕ್ರಮದ ಬಗ್ಗೆ ವರದಿ ನೀಡಿದ್ದು, ಮಾನ್ಯ ಕಾರ್ಕಳ ತಾಲೂಕು ದಂಡಾಧಿಕಾರಿಯವರು ಆರೋಪಿತರನ್ನು ಕರೆಯಿಸಿ ವಿಚಾರಣೆ ಮಾಡಿದ್ದು ಅವರು ಸರಕಾರಿ ಜಾಗವನ್ನು ತೆರವು ಮಾಡುವುದಾಗಿ ಲಖಿತವಾಗಿ ಬರೆದು ನೀಡಿದ್ದರೂ ಕೂಡಾ ತೆರವು ಮಾಡದೇ ಇರುವುದರಿಂದ ಮಾನ್ಯ ಕಾರ್ಕಳ ತಾಲೂಕು ತಹಶೀಲ್ದಾರರು ಆರೋಪಿತರುಗಳ ವಿರುದ್ದ ಕರ್ನಾಟಕ ಭೂಕಂದಾಯ ಅಧಿನಿಯಮ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 447 ಐಪಿಸಿ ಮತ್ತು 192(ಎ) ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 08-02-2021 06:16 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080