ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಕೀರ್ತೇಶ್.ಎಸ್ (31),ತಂದೆ: ಸುರೇಶ್.ಎಸ್,ವಾಸ:ಸಚ್ಚಿದಾನಂದ ರೆಸಿಡೆನ್ಸಿ ಕಡಿಯಾಳಿ ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಅಂಚೆ ಉಡುಪಿ ಉಡುಪಿ ಜಿಲ್ಲೆ ಇವರು ದಿನಾಂಕ: 07/01/2022 ರಂದು ಅವರ ಚಿಕ್ಕಪ್ಪ ಸುರೇಶ್ ಭಟ್ ಪ್ರಾಯ 58 ವರ್ಷ ರವರೊಂದಿಗೆ ಕಡಿಯಾಳಿ ಸಿಲ್ವರ್ ಪಿಶ್ ಹೋಟೆಲ್ ನ ಎದುರು ರಾಷ್ಟ್ರೀಯ ಹೆದ್ದಾರಿ 169(ಎ) ರ ರಸ್ತೆಯ ಬದಿಯಲ್ಲಿ ನಿಂತಿರುವಾಗ ಸಂಜೆ 5:30 ಗಂಟೆಗೆ ಕಲ್ಸಂಕ ಕಡೆಯಿಂದ ಮಣಿಪಾಲ ಕಡೆಗೆ KA-19-MC-9464ನೇ ಕಾರು ಚಾಲಕ ಶಶಾಂಕ.ಎಸ್. ಶೆಟ್ಟಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಸಿಲ್ವರ್ ಪಿಶ್ ಹೋಟೆಲ್ ಎದುರು ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಚಿಕ್ಕಪ್ಪ ಸುರೇಶ್ ಭಟ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ಭಟ್ ರವರು ರಸ್ತೆಗೆ ಬಿದ್ದು, ಎಡಕೈಯ ಮೂಳೆಮುರಿತ ಉಂಟಾಗಿ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಚಲನಾ (18), ತಂದೆ:ಚಂದ್ರಶೇಖರ ಶೆಟ್ಟಿ ,ವಾಸ: ತೆಂಕಮನೆ ,ಉಪ್ರಳ್ಳಿ,11 ನೇ ಉಳ್ಳೂರು ಗ್ರಾಮ ,ಬೈಂದೂರು ತಾಲೂಕು ಇವರು ದಿನಾಂಕ 06/01/2022 ರಂದು ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಕಾಲೇಜಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ನಾಗೂರಿಗೆ ಬಂದು, ನಾಗೂರಿನಿಂದ ಉಪ್ರಳ್ಳಿಯ ತನ್ನ ಮನೆಗೆ ಹೋಗಲು ಅವರ ಸೈಕಲ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಕಿರಿಮಂಜೇಶ್ವರ ಗ್ರಾಮದ ನಾಗೂರು ಉರ್ದು ಶಾಲೆ ಹತ್ತಿರ ತಿರುವು ರಸ್ತೆಯ ಬಳಿ ತಲುಪಿದಾಗ 18:30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ KA-20-Y-9960 ನೇ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲ್ ನ್ನು ವೇಗವಾಗಿ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಸೈಕಲ್ ನ್ನು ಓವರ ಟೇಕ್ ಮಾಡುತ್ತಿರುವಾಗ ಎದುರಿನಿಂದ ಒಂದು ವಾಹನ ಬರುವುದನ್ನು ನೋಡಿ ಒಮ್ಮೇಲೆ ನಿರ್ಲಕ್ಷತನದಿಂದ ಮೋಟಾರು ಸೈಕಲ್ ನ್ನು ಎಡಕ್ಕೆ ಚಲಾಯಿಸಿ, ಪಿರ್ಯಾದಿದಾರರ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಎಡಕಾಲಿನ ಮೊಟಗಂಟಿಗೆ, ಎಡಕೈಗೆ, ಎಡಕಣ್ಣಿನ ತರಚಿದ ಗಾಯವಾಗಿದ್ದು ಬಲ ಕೈ ಮೂಳೆ ಮುರಿತವಾಗಿರುತ್ತದೆ. ಆರೋಪಿ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ನ್ನು ನಿಲ್ಲಿಸದೇ ಅಲ್ಲಿಂದ ಹೋಗಿರುತ್ತಾನೆ. ಪಿರ್ಯಾದಿದಾರರ ಪರಿಚಯದ ರಮೇಶ್ ಪೂಜಾರಿ ಎಂಬುವವರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಶ್ರೀ ದೇವಿ ನರ್ಸಿಂಗ್ ಹೋಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 279, 338 ಐಪಿಸಿ. ಮತ್ತು 134 (a) & (b) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಸಂತೋಷ (40), ತಂದೆ: ವೆಂಕಟೇಶ್‌ ಶೇಟ್,‌ ವಾಸ: ಫ್ಲಾಟ್‌ ನಂಬ್ರ 204, ಎ ವಿಂಗ್‌, ಶರಣ್ಯ ಎನ್‌ಕ್ಲೇವ್‌, ಶಾಂತಿನಗರ, ಮಣಿಪಾಲ, ಉಡುಪಿ ತಾಲೂಕು ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವೇದಾಂತ್‌ ವೆಜ್‌ ರೆಸ್ಟೋರೆಂಟ್‌ ನಡೆಸಿಕೊಂಡಿದ್ದು, KA-20-EN-1620 ನೇ ಸ್ಕೂಟರ್‌ನ ಆರ್‌.ಸಿ ಮಾಲಕರಾಗಿರುತ್ತಾರೆ. ದಿನಾಂಕ 03/01/2022 ರಂದು ಆಪಾದಿತ ಶ್ರೀಧರ ಬೈಂದೂರು ಎಂಬಾತನು ಕೆಲಸ ಕೇಳಿಕೊಂಡು ಬಂದು, ಪಿರ್ಯಾದಿದಾರರ ಹೋಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದು, ದಿನಾಂಕ 05/01/2022 ರಂದು 16:00 ಗಂಟೆಗೆ ಹೋಟೇಲ್‌ನ ಡ್ರಾವರ್‌ನಲ್ಲಿಟ್ಟಿದ್ದ ದ್ವಿಚಕ್ರ ವಾಹನದ ಕೀಯನ್ನು ತೆಗೆದುಕೊಂಡು ಪಿರ್ಯಾದಿದಾರರಿಗೆ ತಿಳಿಯದಂತೆ ಹೋಟೇಲ್‌ನ ಹೊರಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಮೌಲ್ಯ ರೂಪಾಯಿ. 35,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ 06/2022, ಕಲಂ: 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 08-01-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080