ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾರ್ಕಳ: ಫಿರ್ಯಾದಿ ಉದಯ ಕುಮಾರ್ ಇವರು ಸಿದ್ಧಿವಿನಾಯಕ ಪೆಟ್ರೋಲ್ ಬಂಕ್ ಸಾಣೂರು ಇಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೆಟ್ರೋಲ್ ಪಂಪ್ ನಲ್ಲಿ ನಾರಾಯಣ, ಇರ್ಷಾದ್‌, ಸಚಿನ್‌, ರಂಜಿತ್‌ ರವರು ಕೆಲಸ ನಿರ್ವಹಿಸುತ್ತಿದ್ದಾರೆ.ದಿನಾಂಕ:06.10.2021 ರಂದು ರಾತ್ರಿ 9:00 ಗಂಟೆಗೆ ಪೆಟ್ರೋಲ್ ಪಂಪ್ ನ ಶೆಟರ್ ಗೆ ಕೆಲಸಗಾರರು ಬೀಗ ಹಾಕಿ ಹೋಗಿರುತ್ತಾರೆ. ದಿನಾಂಕ:07.10.2021 ರಂದು ಬೆಳಗ್ಗೆ 06.19 ಗಂಟೆಗೆ ನಾರಾಯಣರವರು ಪಿರ್ಯಾದಿದಾರರಿಗೆ ಕರೆ ಮಾಡಿ ಪಂಪ್ ನ ಶೆಟರ್ ಗೆ ಅಳವಡಿಸಿದ ಬೀಗವನ್ನು ಮುರಿದ ವಿಚಾರವನ್ನು ತಿಳಿಸಿದ್ದು ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿದಾಗ ಎದುರು ಶೆಟರ್ ಗೆ ಹಾಕಿದ್ದ ಬೀಗವನ್ನು ಮುರಿದಿದ್ದಲ್ಲದೇ ಕಚೇರಿ ಒಳಗಡೆ ಇದ್ದ ಸ್ವಾಯಿಪಿಂಗ್‌ ಮಿಷನ್‌ -2. (ಮೌಲ್ಯ10,000/-) ಪ್ಲಿಟ್‌  ಕಾರ್ಡ್‌ ಮಿಷನ್‌ -1 (ಮೌಲ್ಯ 5,000/-) ಸ್ವತ್ತುಗಳು ಕಳವಾಗಿದ್ದಲ್ಲದೆ ಹೊರಗಡೆ ಪಂಪ್‌ನ ಮೇಲೆ ಪಿಕ್ಸ್‌ ಮಾಡಿ ಇಟ್ಟ ಅಟೋ ಮಿಷನ್‌‌ ಡಿವೈಸ್‌ ಕಳವು ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರು ಪೆಟ್ರೋಲ್‌ ಪಂಪ್‌ಗೆ ಅಳವಡಿಸಿದ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ  ದಿನಾಂಕ:07.10.2021 ರಂದು ಬೆಳಗ್ಗಿನ ಜಾವ 1:04 ಗಂಟೆಗೆ ಒಬ್ಬ ವ್ಯಕ್ತಿ ಪ್ಯಾಂಟ್‌ ಮತ್ತು ತುಂಬು ತೋಳಿನ ಶರ್ಟ್‌ ಹಾಗೂ ಮಾಸ್ಕ್‌ ಧರಿಸಿಕೊಂಡು ಪೆಟ್ರೋಲ್‌ ಪಂಪ್‌ ಒಳಗಡೆ ಬಂದು ಹುಡುಕಾಡಿ ಒಳಗಡೆ  ಇದ್ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮೇರದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ  ಕಂಡು ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಪ್ರಭಾಕರ ಇವರ ಅತ್ತೆ ಶ್ರೀಮತಿ ಅಪ್ಪಿ(75) ರವರು ಫಿರ್ಯಾದಿದಾರರೊಂದಿಗೆ ವಾಸವಾಗಿರುತ್ತಾರೆ ಶ್ರೀಮತಿ ಅಪ್ಪಿಯವರಿಗೆ ಕಣ್ಣು ಕಾಣಿಸದೇ ಇದ್ದುದ್ದಲ್ಲದೆ , ಕಿವಿ ಕೂಡ ಕೇಳಿಸುತ್ತಿರಲಿಲ್ಲ ಶ್ರೀಮತಿ ಅಪ್ಪಿಯವರು ದಿನಾಂಕ 06/10/2021 ರಾತ್ರಿ 9:00 ಗಂಟೆಗೆ ಊಟ ಮಾಡಿ ಮಲಗಿರುತ್ತಾರೆ,ಬೆಳಿಗ್ಗೆ 06:30 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಿದಾಗ ಶ್ರೀಮತಿ ಅಪ್ಪಿಯವರು ಮನೆಯಲ್ಲಿ ಕಾಣಿಸದೆ ಇದ್ದು ಪಿರ್ಯಾದಿದಾರರು ಮನೆ ಬಳಿ ಎಲ್ಲಾ ಕಡೆ ಹುಡುಕಿ ಬಳಿಕ ಮನೆಯಿಂದ 20 ಮೀಟರ್‌  ದೂರದಲ್ಲಿ ಆವರಣ ಗೋಡೆ ಇಲ್ಲದೇ ಇದ್ದ ಬಾವಿಯ ಬಳಿ ಹೋಗಿ ನೋಡಿದಾಗ ಶ್ರೀಮತಿ ಅಪ್ಪಿಯವರ ಮೃತ ದೇಹವು ಬಾವಿಯ ನೀರಿನಲ್ಲಿ ಕವುಚಿ ತೇಲುತ್ತಿತ್ತು. ಶ್ರೀಮತಿ ಅಪ್ಪಿಯವರು ತನಗೆ ಕಣ್ಣು ಕಾಣಿಸದೆ ಕಿವಿ ಕೇಳಿಸದೇ ಇರುವುದರಿಂದ ನಾನು ಬದುಕುವುದಿಲ್ಲ ಸಾಯುತ್ತೇನೆ ಎಂದು ಹಿಂದೆ ಹೇಳುತ್ತಿದ್ದು ಇದೇ ಕಾರಣದಿಂದ ದಿನಾಂಕ 06/10/2021 ರಿಂದ ರಾತ್ರಿ 9:00 ಗಂಟೆಯಿಂದ ಬೆಳಿಗ್ಗೆ 06:30 ಗಂಟೆಯ ಮದ್ಯಾವದಿಯಲ್ಲಿ ಮನೆಯ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 07-10-2021 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080