ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ         

  •   ಕಾರ್ಕಳ: ದಿನಾಂಕ 06/04/2022 ರಂದು ಬೆಳಿಗ್ಗೆ 10:45  ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯ ಓಟೆಹಳ್ಳ ಎಂಬಲ್ಲಿ ಹಾದುಹೋಗಿರುವ ಮಾಳ-ಶ್ರಂಗೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಶ್ರಂಗೇರಿ ಕಡೆಯಿಂದ ಮಾಳ ಕಡೆಗೆ ರಸ್ತೆಯ ತಿರುವಿನಲ್ಲಿ KA-18-EH-8940 ನೇದರ ಸವಾರ ನಿತೇಶ್  ತನ್ನ ಬೈಕಿನಲ್ಲಿ ಸಹಸವಾರನಾದ ನಂದೇಶ್‌‌ನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಎದುರುಗಡೆ ಬರುತ್ತಿದ್ದ ಒಂದು ಟಿಪ್ಪರ್ ಲಾರಿಯನ್ನು ಓವರ್ ಟೇಕ್  ಮಾಡುವ ಭರದಲ್ಲಿ ಬೈಕ್ ನ್ನು ರಸ್ತೆಯ ತೀರಾ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಮಾಳ ಕಡೆಯಿಂದ ಶ್ರಂಗೇರಿ ಕಡೆಗೆ ಹೋಗುತ್ತಿದ್ದ KA-20-D-8419 ನೇ ನಂಬ್ರದ ವಿಶಾಲ್ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿತೇಶ್ (23) ರವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಸಹಸವಾರನ ಹಣೆಗೆ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2022 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಎಸ್ ಎನ್ ಪುರುಷೋತ್ತಮ (62), ತಂದೆ: ಎಸ್ ಟಿ ನಾರಾಯಣಯ್ಯ, ವಾಸ: ಎಮ್ಐಜಿ 2/78, ಹನುಮಾನ ದೇವಸ್ಥಾನದ ಹತ್ತಿರ,ಗೋಕುಲ ರಸ್ತೆ, ಹುಬ್ಬಳ್ಳಿ ಇವರು ದಿನಾಂಕ 06/04/2022 ರಂದು KA-47-M -7060 ನೇ ನೊಂದಣಿ ಸಂಖ್ಯೆಯ ಕಾರಿನಲ್ಲಿ ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಚಾಲಕ ಸುನೀಲ ಬಂಡಿ ಹಾಗೂ ಪಿರ್ಯಾದಿದಾರರ ಪತ್ನಿ ಶ್ರೀಮತಿ ಲೀಲಾವತಿ ಯವರೊಂದಿಗೆ ಕಾರ್ಕಳದಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 09:25 ರ ಹೊತ್ತಿಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಸೇತುವೆಯಿಂದ ಸ್ವಲ್ಪ ಹಿಂದಕ್ಕೆ ತಲುಪುವಾಗ ಕಾರ್ಕಳ ಕಡೆಯಿಂದ ಮೂಡುಬಿದ್ರೆ ಕಡೆಗೆ KA-21-A-0839 ನೇ ನೊಂದಣಿ ಸಂಖ್ಯೆಯ ಟಿಪ್ಪರ್ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಅಪಘಾತದಿಂದ ಪಿರ್ಯಾದಿದಾರರಿಗೆ ಹಾಗೂ ಚಾಲಕ ಸುನೀಲ ಬಂಡಿ ಹಾಗೂ ಪಿರ್ಯಾದಿದಾರರ ಪತ್ನಿ ಶ್ರೀಮತಿ ಲೀಲಾವತಿ ಯವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ:  279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಐತು ಪೂಜಾರಿ(63), ತಂದೆ: ಅಪ್ಪಣ್ಣ ಪೂಜಾರಿ, ವಾಸ: ಸಾಂಗತ್ಯ ಹೌಸ್ ಪಾಂಡುಕಲ್ಲು  ರಸ್ತೆ ಶಿವಪುರಗ್ರಾಮ ಹೆಬ್ರಿ ತಾಲೂಕು ಇವರ ಮಗ ದೀಕ್ಷಿತ್ (27) ರವರು ಯಾವುದೋ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 06/04/2022 ರಂದು ಬೆಳಿಗ್ಗೆ 08:30 ಗಂಟೆಯಿಂದ 08:45 ಗಂಟೆಯ ಮದ್ಯಾವಧಿಯಲ್ಲಿ  ಶಿವಪುರ ಗ್ರಾಮದ ಪಾಂಡುಕಲ್ಲುರಸ್ತೆಯಲ್ಲಿರುವ ಮನೆಯ ಮಲಗುವ ಕೋಣೆಯಲ್ಲಿರುವ ಸೀಲಿಂಗ್  ಫ್ಯಾನಿಗೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನುಕುತ್ತಿಗೆಗೆ ನೇಣು ಬಿಗಿದುನೇತಾಡುತ್ತಿದ್ದವರನ್ನು ಮನೆಯವರು ಕಂಡು ದೀಕ್ಷಿತನು ಬದುಕಿರಬಹುದೆಂದು ಭಾವಿಸಿ  ಸೀರೆಯ ಗಂಟನ್ನು ಬಿಚ್ಚಿ ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

‍ಇತರ ಪ್ರಕರಣ

  •  ಶಂಕರನಾರಾಯಣ: ದಿನಾಂಕ  05/04/2022 ರಂದು 14:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಗಣೇಶ ಹೊಟೇಲ್ ಹತ್ತಿರದ ರಿಕ್ಷಾ ನಿಲ್ದಾಣ ಬಳಿ ಪಿರ್ಯಾದಿದಾರರಾದ ಶ್ರೀಕಾಂತ ಶೆಟ್ಟಿ(33), ತಂದೆ: ದಿ: ನಾರಾಯಣ ಶೆಟ್ಟಿ, ವಾಸ: ಸುರ್ಗಿ ಜೆಡ್ಡು ಉಳ್ಳೂರು-74 ಗ್ರಾಮ ಕುಂದಾಪುರ ತಾಲೂಕು ಇವರ  ಗುರುತು ಪರಿಚಯದ  ಆರೋಪಿ ಗಣೇಶ ಶೆಟ್ಟಿ  ಸಿದ್ಧಾಪುರ ಇವರಲ್ಲಿ ಜಾಗ ಮಾರಾಟದ ಬಗ್ಗೆ ಕೇಳಿದಾಗ  ಆರೋಪಿ ಪಿರ್ಯಾದಿದಾರರಲ್ಲಿ  ನೀನು ಜಾಗವನ್ನು ನನಗೆ ಧರ್ಮಕ್ಕೆ ಕೊಡುವುದಾದರೇ ಬೇಕು ಎಂದು ಹೇಳಿದಾಗ,  ಇದಕ್ಕೆ ಪಿರ್ಯಾದಿದಾರರು ಧರ್ಮಕ್ಕೆ ಲ್ಲಾ ಕೊಡಲಿಕ್ಕೆ ಆಗುತ್ತಾ ಎಂದು ಹೇಳಿ ಹೊರಡುವಾಗ ಒಮ್ಮೆಲೇ  ಆರೋಪಿಯು  ಆಟೋ ರಿಕ್ಷಾದಿಂದ ಬಳಿಗೆ ಬಂದು ತಡೆದು ನಿಲ್ಲಿಸಿ  ಕೈಗಳಿಂದ ಮೈಗೆ ಕೈಗೆ ಹೊಡೆದಿದ್ದು ತಪ್ಪಿಸಿಕೊಂಡಾಗ, ಆರೋಪಿಯು ಆತನಿಗೆ ಸೇರಿದ  ಆಟೋರಿಕ್ಷಾದೊಳಗೆ  ಇದ್ದ  ಸುಮಾರು 3 ಅಡಿ ಉದ್ದದ ಕಬ್ಬಿ ಣದ ರಾಡ್ ನ್ನು ತಂದು ಬಲಕೈಗೆ ,ಬೆನ್ನಿಗೆ , ಬಲಕೈ ಮೊಣಗಂಟಿನ ಬಳಿ ಹಲ್ಲೆ ಮಾಡಿರುತ್ತಾನೆ, ಅದರ  ಪರಿಣಾಮ ಪಿರ್ಯಾದಿದಾರರ  ಮೊಣಗಂಟಿನಬಳಿ ರಕ್ತಗಾಯವಾಗಿ ನೆಲಕ್ಕೆ ಬಿದ್ದ  ಪಿರ್ಯಾದಿದಾರರನ್ನು ಅರೋಪಿ  ಕಾಲಿನಿಂದ ತುಳಿದು ಕೈಯಲ್ಲಿ ಇದ್ದ ರಾಡ್ ನ್ನು ತೋರಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ:  341, 323, 324, 504, 506(2)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 07-04-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080