ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 04/02/2023 ರಂದು ಸಂಜೆ 5:30 ಗಂಟೆಗೆ ಕಾರ್ಕಳ ತಾಲೂಕು, ನಂದಳಿಕೆ ಗ್ರಾಮದ ಮಾವಿನಕಟ್ಟೆಯಿಂದ ಸ್ವಲ್ಪ ಮುಂದಕ್ಕೆ  ಹಾದು ಹೋಗಿರುವ  ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ರಾಹುಲ್ ಡಿ.ಕೆ (27), ತಂದೆ: ದಯಾನಂದ ಕೆ, ವಾಸ: ರೋಬಾಯಿ ಕಂಪೌಂಡ್ ವ್ಯಾಸರಾವ್ ರಸ್ತೆ ಕದ್ರಿ ಪಂಪ್ ವೆಲ್ ಮಂಗಳೂರು  ತಾಲೂಕು ಇವರು ಸುಜುಕಿ ಆಕ್ಷೆಸ್ ಸ್ಕೂಟಿ ನಂಬ್ರ KA-19-HB-0072  ನೇಯದನ್ನು ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ, ಹಿಂದಿನಿಂದ ಗೋವಿಂದ ಎಂಬುವವರು ಕಾರು ನಂಬ್ರ KA-03-NF-6198 ನೇಯದನ್ನು ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಸ್ಕೂಟಿಗೆ ಓವರ್ ಟೇಕ್ ಮಾಡಿಕೊಂಡು ಬಂದು ಸ್ಕೂಟಿಯ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಸವಾರ ರಾಹುಲ್ ಮತ್ತು ಸಹಸವಾರೆ ಕೀರ್ತನಾ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು, ಸವಾರನ ಬಲಕೈಯ ಕಾಲರ್ ಬೋನ್ ನ ಮೂಳೆ ಮುರಿತವಾಗಿದ್ದು,ಕಾರ್ಕಳ ಪ್ರತಿಭಾ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.  ಸಹಸವಾರೆಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಪ್ರಶಾಂತ (22), ತಂದೆ:ಚಿಂಪಗೌಡ, ವಾಸ: ಓರಿಯಲ್‌ ಹೊಂಡಕಲ್‌ ಕೊಂಕಣರಬೆಟ್ಟು ಪೋಸ್ಟ್‌ ಕಬ್ಬಿನಾಲೆ ಗ್ರಾಮ ಹೆಬ್ರಿ ತಾಲೂಕು ಇವರು ತನ್ನ ತಮ್ಮ ಅಶೋಕ ಗೌಡ , ಚಿಕ್ಕಪ್ಪ ಅಣ್ಣಪ್ಪ ಗೌಡ, ಮಾವ ಗೋಪಾಲ ಗೌಡ  ಮತ್ತು ಮಾವ ಸುಕುಮಾರ ಗೌಡರವರು ದಿನಾಂಕ 06/02/2023 ರಂದು ಕಬ್ಬಿನಾಲೆ ಗ್ರಾಮದ ಬರಡೆ ಬ್ಯಾಕರ್‌ನಲ್ಲಿ ದೈವದ  ನೇಮೋತ್ಸವಕ್ಕೆ ಹೋಗಿ, ವಾಪಾಸು ಸಂಜೆ ಎಲ್ಲರೂ ಸಂಬಂದಿ ದೇವರ ಗುಂಡಿಯಲ್ಲಿರುವ ದಯಾನಂದ ಗೌಡರ ಮನೆಗೆ ಹೋಗಿ, ಅಲ್ಲಿಂದ ಸಂಜೆ ಸುಮಾರು 7:30 ಗಂಟೆಯಿಂದ 7:45 ಗಂಟೆಯ ಮದ್ಯಾವದಿಯಲ್ಲಿ ಪಿರ್ಯಾದಿದಾರರ ತಮ್ಮ  ಅಶೋಕ ಗೌಡ(20)  ಹಾಗೂ ಚಿಕ್ಕಪ್ಪ ಅಣ್ಣಪ್ಪ ಗೌಡ(45) ರವರು ತಮ್ಮ ಮನೆಗೆ ಹೋಗುತ್ತಿರುವಾಗ ಸಿಜು ಮೋನ್‌ರವರ ಜಾಗದಲ್ಲಿರುವ ಕೆರೆಯ ಬಳಿ ವಿಪರೀತ ಶರಾಬು ಕುಡಿದಿದ್ದ ಪರಿಣಾಮ ಅಣ್ಣಪ್ಪ ಗೌಡ ರವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು  ಅವರನ್ನು ರಕ್ಷಿಸಲು ಹೋದ ಅಶೋಕ ಗೌಡರವರು ಕೂಡಾ ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಗಣೇಶ್‌ (46), ತಂದೆ: ಗೋಪಾಲ, ವಾಸ:  ಗೂಳಿಬೆಟ್ಟು, ಕೆಮ್ಮಣ್ಣು, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕು ಇವರ ಚಿಕ್ಕಮ್ಮನ ಮಗಳು ಸುಶೀಲ (39) ಎಂಬುವವರು ಕಾಪು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ದಿನಾಂಕ 03/02/2023 ರಂದು 14:00 ಗಂಟೆಗೆ ಆಕೆಯ ಗಂಡನ ಬೈಕ್‌ನಲ್ಲಿ ಹೋಗುವಾಗ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಮಾಸ್ತಿಯಮ್ಮ ದೇವಸ್ಥಾನದ ಬಳಿ ತಲೆ ಸುತ್ತು ಬರುತ್ತಿರುವಾಗಿ ತಿಳಿಸಿದ ಮೇರೆಗೆ ಬೈಕ್‌ ನಿಲ್ಲಿಸಿದಾಗ, ಬೈಕ್‌ನಿಂದ ಇಳಿದು ಕೆಳಗೆ ಬಿದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್‌ ಆಸ್ಪತ್ರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆ ಮತ್ತು ಅಲ್ಲಿಂದ ಮಂಗಳೂರು ಯೆನಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುವಾಗ ದಿನಾಂಕ 06/02/2023 ರಂದು 23:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

     

ಇತ್ತೀಚಿನ ನವೀಕರಣ​ : 07-02-2023 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080