ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 06/02/2022 ರಂದು ಪಿರ್ಯಾದಿದಾರರಾದ ಅವಿನಾಶ್ (27), ತಂದೆ: ಆನಂದ ಕುಮಾರ್,  ವಾಸ: ಹೊಲಜಾಲುಹೌಸ್, ತಂಡ್ರಕೆರೆ, ಮೂಡುಮಾರ್ನಾಡ್ ಗ್ರಾಮ, ಮೂಡಬಿದ್ರೆ ತಾಲೂಕು, ದ.ಕ ಜಿಲ್ಲೆ ಇವರು ತನ್ನ ಮೋಟಾರ್ ಸೈಕಲ್‌ನಲ್ಲಿ ಕಾರ್ಕಳ ಕಡೆಯಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಾ ಸಂಜೆ 17:00 ಗಂಟೆಗೆ  ಕಾರ್ಕಳ ತಾಲೂಕು ಸಾಣೂರು ಗ್ರಾಮದ ಸೀಡ್ ಫಾರ್ಮ್ ನಿಂದ ಸ್ವಲ್ಪ ಮುಂದಕ್ಕೆ ತಲುಪುವಾಗ ಮುಂದಿನಿಂದ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ  ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್    KA-19-EH-1051 ನ್ನು ಅದರ ಸವಾರ ದಿನೇಶ ಗೌಡ (32) ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ತನ್ನ ಎಡದಿಂದ ರಸ್ತೆಯ ಬಲಬದಿಗೆ ಸವಾರಿ ಮಾಡಿಕೊಂಡು ಎದುರಿನಿಂದ ಮೂಡಬಿದ್ರೆ ಕಡೆಯಿಂದ ಕಾರ್ಕಳ  ಕಡೆಗೆ ರಾಜೀವ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು KA-19-ML-4148 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತಗಾಯ, ಎಡಕಾಲಿನ ಮತ್ತು ಎಡಕೈ ಮೂಳೆ ಮುರಿತಗೊಂಡ ಸವಾರ ದಿನೇಶ ಗೌಡ ರವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 06/02/2022 ರಂದು 17:56 ಗಂಟೆಗೆ ಮೃತಪಟ್ಟಿರುತ್ತರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 06/02/2022 ರಂದು ಬೆಳಿಗ್ಗೆ 06:30 ಗಂಗೆ ಪಿರ್ಯಾದಿದಾರರಾದ ಕೃಷ್ಣಾನಂದ ಕಾಮತ್ (57), ತಂದೆ: ಮೋಹನದಾಸ ಕಾಮತ್, ವಾಸ: 5-3 ರೆಂಟ್ ಸ್ಟಾರ್ ವೀರಹನುಮಾನ ರೋಡ್ ಚಿತ್ಪಾಡಿ, 76 ಬಡಗುಬೆಟ್ಟು ಉಡುಪಿ ತಾಲೂಕು ಇವರು MH-12-BS-6383 ನೇ ಮೋಟಾರ್ ಸೈಕಲ್ ನಲ್ಲಿ ಉಡುಪಿ ಕಡೆಯಿಂದ ವಿ.ಪಿ ನಗರದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಇಂದ್ರಾಳಿ ಪೆಟ್ರೊಲ್ ಬಂಕ್ ಹತ್ತಿರ  ಇಂದ್ರಾಳಿ ಯು-ಟರ್ನ್ ಮಾಡಿ ಮಣಿಪಾಲಕಡೆಯಿಂದ ಉಡುಪಿ ಕಡೆಗೆ ಹೊಗುವ ರಸ್ತೆಯ ಎಡಬದಿಗೆ ತಲುಪುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA-02-ME-0626 ನೇ ಕಾರನ್ನು ಅದರ ಚಾಲಕ ಅಮತೆಪ್ಪ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದರರ ತಲೆಯ ಬಲಬದಿಗೆ, ಹಣೆಗೆ, ಮೂಗಿಗೆ, ಬಲಕೆನ್ನೆಗೆ, ಬಲಕೈನ ಮಣಿಗಂಟಿಗೆ, ಎಡಕೈನ ಮಣಿಗಂಟಿನ ಬಳಿ, ತೋರು ಬೆರಳಿನ ಬಳಿ, , ಎಡಕಾಲಿನ ಮಣಿಗಂಟಿನ ಬಳಿ, ಪಾದದ ಬಳಿ,  ಬಲಕಾಲಿನ ಮೊಣಗಂಟು, ಮಣಿಗಂಟಿನ ಮೇಲೆ ತರಚಿದ ಗಾಯ, ಮತ್ತು ಎಡಬದಿಯ ಸೊಂಟಕ್ಕೆ ಒಳಜಖಂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 07-02-2022 09:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080