ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಮಣಿಪಾಲ ಇಮ್ರಾನ್ ಹೆಚ್ ಸಿ 1094 ಮಣಿಪಾಲ ಪೊಲೀಸ್ ಠಾಣೆ ಇವರು ದಿನಾಂಕ 27/02/2022 ರಂದು ಪಿ ಎಸ್ ಐ ರಾಜಶೇಖರ ವಂದಲಿ ಮಣಿಪಾಲ ಪೊಲೀಸ್ ಠಾಣೆ ಇವರು ಪ್ರೋ.ಪಿ.ಎಸ್.ಐ ವಿನಯ್ ಇವರೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ 23:00 ಗಂಟೆ ಸಮಯಕ್ಕೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಬ್ಯಾರಲ್ ಪಬ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವನೆ ಮಾಡಿದಂತೆ ಕಂಡು ಬರುತ್ತದೆ ಎಂದು ಬಾತ್ಮೀದಾರರಾದ ಸಿದ್ದಾರ್ಥ ಶೆಟ್ಟಿರವರು ನೀಡಿದ ಮಾಹಿತಿಯಂತೆ ಪಿ ಎಸ್ ಐ ರವರು ಪ್ರೋ.ಪಿ.ಎಸ್.ಐ ವಿನಯ್‌‌ರವರೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿದ್ದ ಸದ್ರಿ ಇಬ್ಬರು ಆರೋಪಿಗಳಾದ 1. ಇಮ್ರಾನ್‌ಬಿ. ಎಂ.(31), ತಂದೆ: ಇಸ್ಮಾಮಿಲ್‌ಬಿ. ಎಂ, ವಆಸ: ಮನೆ ನಂ; 569(ಎ), (13/440), ಮಂಜೇಶ್ವರ ಜಿ.ಪಿ, ಇಮ್ರಾನ್‌‌ಕಂಪೌಂಡ್‌, ಗಣರಾಜ ಕ್ಲಿನಿಕ್‌ಹತ್ತಿರ, ಮಂಜೇಶ್ವರ, ಕಾಸರಗೋಡು , ಕೇರಳ ರಾಜ್ಯ. 2. ಝಿಯಾದ್‌ ಹುಸೈನ್‌(30) ತಂದೆ: ಅಬ್ದುಲ್‌ ಖಾದರ್‌, ವಾಸ: ಇರ್ಷಾದ್‌ ಮಂಜಿಲ್‌, ಗುಡ್ಡೆ ಮಂಜೇಶ್ವರ, ಕಾಸರಗೋಡು, ಕೇರಳ ರಾಜ್ಯ ಎಂಬ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಅವರ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದು,  ಸದರಿ ಆರೋಪಿಗಳು  ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ  ಕಾರಣ ಪಿ ಎಸ್ ಐ ರಾಜಶೇಖರ ವಂದಲಿ ರವರು ವಶಕ್ಕೆ ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಸದರಿ ಆರೋಪಿಗಳು ಗಾಂಜಾವನ್ನು ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ  07/02/2022 ರಂದು ದೃಢ ಪತ್ರ ನೀಡಿರುವುದಾಗಿದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ: 27 (B) NDPSರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಸಂಜೀವ ಮೊಗವೀರ (28) ತಂದೆ: ದಿ. ವೆಂಕ್ಟ ಮೊಗವೀರ ವಾಸ: ಬಣಸಾಲೆ ಮನೆ, ಮಸ್ಕಿ, ಶುಭದ ಶಾಲೆ ಬಳಿ, ನಾವುಂದ ಅಂಚೆ ಮತ್ತು ಗ್ರಾಮ, ಬೈಂದೂರು ಇವರ ತಂಗಿ ಸಾಕು, ಕಮಲ ಹಾಗೂ ತಮ್ಮ ನಾರಾಯಣ ಚಂದನ್ ನೊಂದಿಗೆ ವಾಸಮಾಡಿಕೊಂಡಿದ್ದು ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ.  ಸಂಜೀವ ಮೊಗವೀರ ರವರ  ತಮ್ಮ ನಾರಾಯಣ ಚಂದನ್ (55) ರವರು ವಿಪರೀತ ಮದ್ಯಸೇವನೆ ಮಾಡುವ ಚಟ ಹೊಂದಿದ್ದು ಸರಿಯಾಗಿ ಕೆಲಸಕ್ಕೆ ಹೋಗದೇ ತೀವೃ ಹಣಕಾಸಿನ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/02/2022 ರಂದು ಬೆಳಿಗ್ಗೆ 5:30  ಗಂಟೆಯಿಂದ 9:30 ಗಂಟೆಯ ನಡುವೆ ತ್ರಾಸಿ ಗ್ರಾಮದ ತ್ರಾಸಿ ಮೇಲ್ಸೇತುವೆ ದಂಡೆಗೆ ಹಾಕಲಾದ ಕಬ್ಬಿಣದ ಸರಳಿಗೆ ಹಗ್ಗೆ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 02/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 07-02-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080