ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 05/12/2022 ರಂದು KA-20-B-1647 ನೇ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ಮಿಥುನ್‌ ರವರು ಚಲಾಯಿಸಿಕೊಂಡು ಶಿವಪುರ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 12:45 ಗಂಟೆಗೆ ಶಿವಪುರ ಹೈಸ್ಕೂಲ್‌ ನ ಎದುರುಗಡೆ ಇರುವ ರಸ್ತೆಯ ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿ ಅವರ ಎದುರುಗಡೆಯಿಂದ  ಶಿವಪುರ ಕಡೆಯಿಂದ ಸಂದೀಪ್‌ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-U-3540 ನೇ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಪಡಿಸಿದ ಪರಿಣಾಮ ಸಂದೀಪ ರವರು  ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಯ ಬಳಿ ತೀವ್ರ ಸ್ವರೂಪದ  ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 04/12/2022  ರಂದು ಸಂಜೆ 06:00 ಗಂಟೆಗೆ, ಕುಂದಾಪುರ ತಾಲೂಕಿನ, ಕರ್ಕುಂಜಿ ಗ್ರಾಮದ ನೇರಳಕಟ್ಟೆ ಜಂಕ್ಷನ್‌ಬಳಿ ರಸ್ತೆಯಲ್ಲಿ, ಆಪಾದಿತ  ಪ್ರಶಾಂತ KA-51-MH-2921ನೇ ಕಾರನ್ನು  ನೇರಳಕಟ್ಟೆ  ಕಡೆಯಿಂದ  ಆಜ್ರಿ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಕಾರಿನ ಮುಂದೆ ಹೋಗುತ್ತಿದ್ದ ಬೈಕನ್ನು ಓವರ್‌‌‌‌ಟೇಕ್‌ ‌ಮಾಡಲು ಕಾರನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಅಂಗವಿಕಲರಾದ ಪಿರ್ಯಾದಿದಾರರಾದ ಪ್ರಭಾಕರ್ ಆಚಾರ್ (42), ತಂದೆ : ದಿ. ಮಂಜುನಾಥ ಆಚಾರ್, ವಾಸ:  ಚೂರಿಕೋಡ್ಲಿ, ಮುಡುಮುಂದ ಬೆಳ್ಳಾಲ ಗ್ರಾಮ ಕುಂದಾಪುರ ತಾಲೂಕು ಇವರು KA-20-EV-1959ನೇ  ಮೂರು ಚಕ್ರದ  ಸ್ಕೂಟರ್‌‌ನಲ್ಲಿ ಅವರ  ಹೆಂಡತಿ ಸುಲೋಚನಾ, ಮಗ ಪ್ರಜ್ವಲ್‌(‌‌14) ಹಾಗೂ ಪೂಜಾ (10) ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಆಜ್ರಿ ಕಡೆಯಿಂದ ನೇರಳಕಟ್ಟೆ  ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಸದ್ರಿ ಸ್ಕೂಟರ್‌ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪ್ರಭಾಕರ್‌ಆಚಾರ್‌, ಪ್ರಜ್ವಲ್‌‌‌ಹಾಗೂ ಪೂಜಾರವರ  ಬಲಕಾಲಿಗೆ ಮೂಳೆ ಮುರಿತವಾದ ಗಾಯವಾಗಿದ್ದು, ಸುಲೋಚನಾರವರಿಗೆ ಮೈ ಕೈಗೆ ಒಳನೋವಾದ ಗಾಯವಾಗಿದ್ದು, ಗಾಯಗೊಂಡವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಗಂಭೀರ ಗಾಯಗೊಂಡ ಪ್ರಭಾಕರ್‌ ಆಚಾರ್‌, ಪ್ರಜ್ವಲ್‌ ‌‌ಹಾಗೂ ಪೂಜಾರವರು  ಮಣಿಪಾಲ ಕೆ.ಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಮಂಗಳೂರು ವೆನ್‌‌ಲಾಕ್‌‌ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಾಮ ನಾಯ್ಕ (37), ತಂದೆ: ಕರಿಯ ನಾಯ್ಕ, ವಾಸ: ಮನೆ ನಂಬ್ರ 2-399ಎ, ರಾಮ ನಿಲಯ, ಮಾರ್ಪಳ್ಳಿ, ಕೊರಂಗ್ರಪಾಡಿ, ಉಡುಪಿ ತಾಲೂಕು ಇವರ ತಮ್ಮ ಅಶೋಕ ನಾಯ್ಕ (34) ಎಂಬುವವರು ವಿಪರೀತ ಕುಡಿತದ ಚಟ ಹೊಂದಿದ್ದು, ಕಳೆದ 2 ತಿಂಗಳಿಂದ ಕೆಲಸವಿಲ್ಲದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 05/12/2022 ರಂದು ಬೆಳಿಗ್ಗೆ 09:00 ಗಂಟೆಯಿಂದ 10:00 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ರಾಮ ನಿಲಯ ಎಂಬ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮರದ ಪಕ್ಕಾಸಿಗೆ ತನ್ನ ಪಂಚೆ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 46/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬ್ರಹ್ಮಾವರ: ಪಿರ್ಯಾದಿದಾರರಾದ ಯಲ್ಲಪ್ಪ ಡೊಂಬರ (50), ತಂದೆ: ದಿವಂಗತ ತಿಮ್ಮಣ್ಣ , ವಾಸ: ದುರ್ಗಾ ಪರಮೇಶ್ವರಿ ಪ್ರಸನ್ನ, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ಎರಡನೇ ಮಗ ವಿಜಯ (22) ಇವರು ಕಳೆದ ಡಿಸೆಂಬರ್‌ ನಲ್ಲಿ ಬೈಕ್‌ ನಲಿ ಸ್ಕಿಡ್‌ ಆಗಿ ಬಿದ್ದು  ಚಿಕಿತ್ಸೆಯನ್ನು ಪಡೆದು  ನಂತರ  ಮನೆಯಲ್ಲಿದ್ದು ನಂತರ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ, ಅವರು ವಿಪರೀತ ಶರಾಬು ಕುಡಿಯುವ ಚಟ ಬಳಸಿಕೊಂಡಿದ್ದು  ಅದೇ ಕಾರಣದಿಂದ ಜೀವನದಲಿ ಜಿಗುಪ್ಸೆ ಗೊಂಡು ದಿನಾಂಕ 05/12/2022 ರಂದು ಮಧ್ಯಾಹ್ನ 2:45 ಗಂಟೆಯಿಂದ  ಸಂಜೆ 5:30 ಗಂಟೆಯ ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ ವಾಸದ ಮನೆಯಲ್ಲಿ ಯಾರು ಇಲ್ಲದ ವೇಳೆ  ಮನೆಯ ಹಾಲ್‌ನ ಮಾಡಿನ ಮರದ ಪಕ್ಕಾಸಿಗೆ  ಹಳೆಯ ಸೀರೆಯನ್ನು ಬಿಗಿದು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 63/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 06-12-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080