ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾಧ ಕೃಷ್ಣ ನಾಯ್ಕ (40) ತಂದೆ: ಬಚ್ಚ ನಾಯ್ಕ ವಾಸ: ತೋಳಾರಬೆಟ್ಟು ಬೇಳಿಂಜೆ ಗ್ರಾಮ ಹೆಬ್ರಿ ಇವರ ಅಕ್ಕ ವನಜಾ, (58) ರವರು ಪ್ರಾಯಸ್ಥ ರಾಗಿದ್ದು, ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ಅವರಿಗೆ ಮದುವೆಯಾಗಿರುವುದಿಲ್ಲ.  ಅವರು ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ದಿನಾಂಕ 05/11/2021 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 06/11/2021 ರಂದು ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಯ ಮಧ್ಯಾವಧಿಯಲ್ಲಿ ಬೇಳಂಜೆ ಗ್ರಾಮದ ತೋಳಾರಬೆಟ್ಟು ಎಂವಲ್ಲಿ ಅವರು ಪ್ರತ್ಯೇಕವಾಗಿ ವಾಸ ಮಾಡಿಕೊಂಡಿರುವ ಸಿಮೆಂಟ್ ಶೀಟಿನ ಕೋಣೆಯಲ್ಲಿರುವ ಮೇಲಿನ ಪಕ್ಕಾಸಿಗೆ ಬೈರಾಸ್ ಬಟ್ಟೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ನೇತಾಡುತ್ತಿದ್ದು ಮನೆಯವರು ಬದುಕಿರಬಹುದೆಂದು ಭಾವಿಸಿ ಬೈರಾಸ್ ಬಟ್ಟೆಯನ್ನು ತುಂಡರಿಸಿ ಕೆಳಗೆ ಮಲಗಿಸಿ ನೋಡಿದಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಪಿರ್ಯಾಧಿದಾರರಾಧ ರವಿಂದ್ರ ಶೆಟ್ಟಿ, (42) ತಂದೆ: ಬಸವ ಹೆಗ್ಡೆ ವಾಸ: ಬೆಟ್ಟಿನ ಮನೆ ಹೆಗ್ಗಾರಬೈಲು ನಂದಿಕೇಶ್ವರ ದೇವಸ್ಥಾನದ ಬಳಿ ವಕ್ವಡಿ ಗ್ರಾಮ, ಕುಂದಾಪುರ ಇವರ ತಂಗಿ ಶ್ರೀಮತಿ ಸರಸ್ವತಿ ಶೆಟ್ಟಿ (39) ರವರು ಅವರ ಗಂಡ ಶಂಕರ ಶೆಟ್ಟಿಯವರು ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ ವಿಚಾರದಲ್ಲಿ ಬಹಳವಾಗಿ ನೊಂದುಕೊಂಡಿದ್ದು ದಿನಾಂಕ 06/11/2021 ರಂದು ಬೆಳಿಗ್ಗೆ ಸುಮಾರು 05:30 ಗಂಟೆಯ ಸಮಯಕ್ಕೆ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ ಇದ್ದು  ಹುಡುಕಾಡಿದಲ್ಲಿ ಎಲ್ಲಿಯೂ ಕಾಣಿಸದಿದ್ದಾಗ ಬೆಳಿಗ್ಗೆ ಸುಮಾರು 10:45 ಗಂಟೆಗೆ  ಮನೆಯ ಹತ್ತಿರ ಇರುವ ನಂದಿಕೇಶ್ವರ ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ಪರೀಕ್ಷಿಸಿ ನೊಡಿದಾಗ ಸರಸ್ವತಿಯವರ ಮೃತದೇಹವು ಕಂಡು ಬಂದಿದ್ದು, ಮೃತೆ ಶ್ರೀಮತಿ ಸರಸ್ವತಿಯವರು ತನ್ನ ಗಂಡನ ಖಾಯಿಲೆ ವಿಚಾರದಲ್ಲಿ ಮನನೊಂದು ದೇವಸ್ಥಾನದ ಕೆರೆಗೆ ಹಾರಿ ಮೃತ ಪಟ್ಟಿದ್ದು ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 06-11-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080