ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಉಡುಪಿ : ಪಿರ್ಯಾದಿದಾರರಾದ ರಮಾ.ಜೆ.ರಾವ್ (49), ಗಂಡ: ಜನಾರ್ಧನಾ ರಾವ್, ವಾಸ: ಪದ್ಮಲೀಲ ರಾಂಪುರ ಅಲೆವೂರು ಗ್ರಾಮ ಅಲೆವೂರು ಅಂಚೆ ಅಲೆವೂರು ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 05/10/2021ರಂದು ತನ್ನ KA-20-EF-5269ನೇ ಸ್ಕೂಟರ್ ನಲ್ಲಿ ಪಿಗ್ಮೀ ಕಲೆಕ್ಷನ್ ಮಾಡುತ್ತಾ ಜೋಡುಕಟ್ಟೆಯಿಂದ ಕಿನ್ನಿಮುಲ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಕಿನ್ನಿಮುಲ್ಕಿಯ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಸಮಯ ಸಂಜೆ 5:50 ಗಂಟೆಗೆ ಹಿಂದಿನಿಂದ ಜೋಡುಕಟ್ಟೆ ಕಡೆಯಿಂದ ಓರ್ವ ಗೂಡ್ಸ್ ಟೆಂಪೋ ಚಾಲಕ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಾಯವಾಗಿ ಬಲಕೈಗೆ ಮೂಳೆ ಮುರಿತ ಉಂಟಾಗಿ ಆದರ್ಶ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಪಘಾತಪಡಿಸಿದ ನಂತರ ಗೂಡ್ಸ್ ಟೆಂಪೋವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಗೂಡ್ಸ್ ಟೆಂಪೋ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 338 ಐಪಿಸಿ ಮತ್ತು 134(ಎ)&(ಬಿ) ಜೊತೆಗೆ 187 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕೋಟ: ಕಮಲ ದೇವಾಡ್ತಿ (80) ಎಂಬುವವರು ತನ್ನ ಮನೆಯಾದ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಕುದ್ರುಮನೆ ಬೆಟ್ಟು ಎಂಬಲ್ಲಿ ವಾಸವಿದ್ದು ಅವರು ಎಂದಿನಂತೆ ದಿನಾಂಕ 19/09/2021 ರಂದು ಬೆಳಿಗ್ಗೆ 10:30 ಗಂಟೆಯ ಸಮಯಕ್ಕೆ ಎಂದಿನಂತೆ ಗದ್ದೆ ನೋಡಿಕೊಂಡು ಬರಲು ಹೋಗಿದ್ದವರು ಬೊಬ್ಬೆ ಹಾಕಿದ್ದನ್ನು ಕೇಳಿ ಪಿರ್ಯಾದಿದಾರರಾದ ವಿಘ್ನೇಶ(22) , ತಂದೆ: ಮಂಜುನಾಥ ,ವಾಸ; ಕುದ್ರುಮನೆ ವಡ್ಡರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಹಾಗೂ ನೆರೆಕರೆಯವರು ಓಡಿ ಹೋಗಿ ನೋಡಲಾಗಿ ಕಮಲ ದೇವಾಡ್ತಿಯವರು ಗದ್ದೆಯ ಅಂಚಿನಲ್ಲಿ ಬಿದ್ದುಕೊಂಡಿದ್ದು, ಹಾಗೂ ಅಲ್ಲಿಯೇ ಒಂದು ಹಂದಿ ಓಡಾಡಿಕೊಂಡಿದ್ದು, ಗದ್ದೆಯಲ್ಲಿ ಬಿದ್ದಿದ್ದ ಕಮಲ ದೇವಾಡ್ತಿಯವರಲ್ಲಿ ವಿಚಾರಿಸಿದಾಗ ಒಂದು ಹಂದಿ ಬಂದು ಕಮಲ ದೇವಾಡ್ತಿಯವರ ಬಲಬದಿ ಸೊಂಟದಿಂದ ಕೆಳಗೆ ತೊಡೆಭಾಗ ಗುದ್ದಿ ರಕ್ತಗಾಯ ಮಾಡಿದ್ದು, ಕೂಡಲೇ ಅವರನ್ನು ಉಪಚರಿಸಿ ಒಂದು ರಿಕ್ಷಾದಲ್ಲಿ ಕೋಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದಲ್ಲಿ ವೈದ್ಯರು ಕಮಲ ದೇವಾಡ್ತಿಯವರಿಗೆ ಸೊಂಟದ ಮೂಳೆ ಮುರಿತದ ಬಗ್ಗೆ ಶಸ್ತ್ರ ಚಿಕಿತ್ಸೆ ಮಾಡಿ, ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿರುತ್ತಾರೆ. ನಂತರ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಕಮಲ ದೇವಾಡ್ತಿಯವರು ದಿನಾಂಕ 06/10/2021 ರಂದು ಬೆಳಿಗ್ಗೆ 8:00 ಗಂಟೆಗೆ ಹಂದಿ ಗುದ್ದಿ ಸೊಂಟಕ್ಕೆ ಆದ ಗಾಯದ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37 /2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 06-10-2021 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080